Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

ಶ್ರೀವಿದ್ಯೇಶ ಸಪ್ತತಿ ಸಂಭ್ರಮದಲ್ಲಿ ವಿದ್ಯೇಶತೀರ್ಥರನ್ನು ಸಮ್ಮಾನಿಸಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು

Team Udayavani, Sep 14, 2024, 2:06 AM IST

Udupi-Vidyesh

ಉಡುಪಿ: ಶ್ರೀವಿದ್ಯೇಶತೀರ್ಥರು ರಚಿಸಿದ ಹಾಡನ್ನು ಅವರೆದುರೇ ಶ್ರೀಕೃಷ್ಣನಿಗೆ ಸಮರ್ಪಿ ಸಿರುವುದು ಐತಿಹಾಸಿಕ. ಶ್ರೇಷ್ಠ ಯತಿಗಳಾಗಿ ಪರಿಪೂರ್ಣರಾದ ಶ್ರೀಗಳಿಗೆ ಸಪ್ತತಿ ಪೂರ್ಣಗೊಂಡಿದೆ. ಭಗವಂತನ ಮೇಲೆ ವಿಶೇಷವಾದ ಭಕ್ತಿ ಹೊಂದಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶುಕ್ರವಾರ ರಾಜಾಂಗಣದಲ್ಲಿ ಜರಗಿದ ಶ್ರೀವಿದ್ಯೇಶಸಪ್ತತಿ ಸಂಭ್ರಮ ಮತ್ತು ಶ್ರೀ ವಿದ್ಯೇಶನಾದನೀರಾಜನಮ್‌ ಕಾರ್ಯಕ್ರಮದಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರನ್ನು ಸಮ್ಮಾನಿಸಿ ಮಾತನಾಡಿದರು.
ಕೃಷ್ಣಮಠದ ಮುಂಭಾಗದಿಂದ ಕೋದಂಡರಾಮ ದೇವರ ಮೂರ್ತಿಯೊಂದಿಗೆ ಶ್ರೀಪಾದತ್ರಯರನ್ನು ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಕರೆತರ ಲಾ ಯಿತು. ಗಾಯನ, ನರ್ತನ, ವ್ಯಾಖ್ಯಾನದ ಮೂಲಕ ವಿದ್ಯೇಶತೀರ್ಥರು ರಚಿಸಿರುವ ಶ್ರೀವಿದ್ಯೇಶ ವಿಠಲಾಂಕಿತ ಕೃತಿಗಳ ಸಾಮೂಹಿಕ ಗಾಯನದ ಶ್ರೀವಿದ್ಯೆàಶನಾದನೀರಾಜನಮ್‌ ನೆರವೇರಿತು.

ಉಷಾ ಹೆಬ್ಟಾರ್‌, ವೀಣಾ ಶಾನುಭಾಗ್‌ ಸಂಘಟನೆ ಯಲ್ಲಿ ನೂರಾರು ಮಹಿಳಾ ಭಜಕರು ಹಾಡಿದ್ದು, ಪಂಚ ದಾಸರು ಕೈಯಲ್ಲಿ ಚಿಟಿಕೆ ಹಿಡಿದು ನರ್ತಿಸಿ, ಶ್ರೀಪಾದತ್ರಯರು ಕೃತಿಗಳ ವ್ಯಾಖ್ಯಾನ ನಡೆಸಿದರು. ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮುರಳೀಧರ ಆಚಾರ್ಯ ಅವರು ವಿದ್ಯೆàಶತೀರ್ಥರಿಗೆ ಮಾಲಿಕೆ ಮಂಗಳಾರತಿ ಸಮರ್ಪಿಸಿದರು.

ವಿದ್ಯಾಮಾನ್ಯ ಶ್ರೀಚರಣ ಅರ್ಚಿಸಿರೋ…ಎನ್ನುವ ಕೃತಿ ಯನ್ನು ಪುತ್ತಿಗೆ ಶ್ರೀಪಾದರು ವ್ಯಾಖ್ಯಾನಿಸಿ, ವಿದ್ಯಾಮಾನ್ಯರು ಕಣ್ಣಿನಲ್ಲಿ ತೇಜ ಪ್ರಭೆಯುಳ್ಳವರು ಎಂದು ಗುರುಗಳ ಸ್ವರೂಪವನ್ನು ಹಾಡಿನಲ್ಲಿ ವಿದ್ಯೇಶತೀರ್ಥರು ಚಿತ್ರಿಸಿದ್ದಾರೆ. ದೇವರ ಏಕಾಗ್ರತೆಯನ್ನು ಸಂಪಾದಿಸಲು ಸಾಧ್ಯವಾದರೆ ಅದು ಬಹಳ ದೊಡ್ಡ ಸಾಧನೆ. ಜೀವನದಲ್ಲಿ ಕೊಂಡೊಯ್ಯ ಬಹುದಾದ ಏಕೈಕ ಸಂಪಾದನೆಯೇ ದೇವರಲ್ಲಿ ಏಕಾಗ್ರತೆ. ಏಕಾಗ್ರಚಿತ್ತನಾಗಿ ಸ್ಮರಿಸಿ ದೇವರ ದರ್ಶನ ಪಡೆದವರು ವಿದ್ಯಾಮಾನ್ಯರು ಎಂದರು.

ಹರಿಕೃಥಾಮೃತವ ಸ್ಮರಿಸಿರೋ… ಎನ್ನುವ ಕೃತಿಯನ್ನು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ವ್ಯಾಖ್ಯಾನಿಸಿ, ಮನುಷ್ಯನಾಗಿ ಹುಟ್ಟಿದವನಿಗೆ ಭಗವಂತನನ್ನು ಒಲಿಸಿಕೊಳ್ಳುವ ಗುರಿ ಇರಬೇಕು. ಇದನ್ನು ಹರಿಕಥಾಮೃತದ ಮೂಲಕ ಅದರ ಪ್ರಾಮುಖ್ಯ, ವೈಶಿಷ್ಟ್ಯಗಳನ್ನು ಶ್ರೀಗಳು ಹಾಡಿನಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು. ಶಿವನ ನಮಿಸಿ ಭಜಿಸಿ ಭಾಗ್ಯವಂತನಾಗಿರೋ… ಎನ್ನುವ ಹಾಡಿಗೆ ಶ್ರೀ ವಿದ್ಯೇಶತೀರ್ಥರು ವ್ಯಾಖ್ಯಾ ನಿಸಿ, ಶಿವ ಮಂತ್ರ ಜಪಿಸಿದವರು ಜೀವನದಲ್ಲಿ ಶ್ರೇಯಸ್ಸನ್ನು ಪಡೆಯುತ್ತಾರೆ ಎಂದರು. ಹುಬ್ಬಳ್ಳಿ ಉದ್ಯಮಿ ಶ್ರೀಕಾಂತ್‌ ಕೆಮೂ¤ರು, ರಮೇಶ್‌ ಭಟ್‌, ರವಿರಾಜ್‌ ಆಚಾರ್ಯ, ಮಹಿತೋಷ್‌ ಆಚಾರ್ಯ ಉಪಸ್ಥಿತರಿದ್ದರು. ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿದರು. ಷಣ್ಮುಖ ಹೆಬ್ಟಾರ್‌ ಸಮ್ಮಾನ ಪತ್ರ ವಾಚಿಸಿದರು.

“ಭಾಗವತ ಭಾಸ್ಕರ’ ಬಿರುದು-ಸಮ್ಮಾನ
ಶ್ರೀವಿದ್ಯೇಶತೀರ್ಥರ ಚಾತುರ್ಮಾಸ ವ್ರತ ಹಾಗೂ ಸಪ್ತತಿ ಸಂಭ್ರಮದ ಪ್ರಯುಕ್ತ ಅವರಿಗೆ “ಭಾಗವತ ಭಾಸ್ಕರ’ ಎಂಬ ಬಿರುದು ನೀಡಿ ನಾಣ್ಯಗಳ ಮೂಲಕ ತುಲಾಭಾರ ನಡೆಸಿ, ಯಕ್ಷಗಾನ ಕಿರೀಟವನ್ನು ಹೋಲುವ ಪೀಠದಲ್ಲಿ ಕುಳ್ಳಿರಿಸಿ ಸಮ್ಮಾನ ನೆರವೇರಿಸಲಾಯಿತು. ಜೋ ಜೋ ಕೌಸಲ್ಯರಾಮ…ಹಾಡಿಗೆ ಮಧ್ವಾಚಾರ್ಯ ಕರಾರ್ಚಿತ ಭಂಡಾರಕೇರಿ ಮಠದ ಪಟ್ಟದ ದೇವರಾದ ಕೋದಂಡರಾಮನನ್ನು ತೊಟ್ಟಿಲಿನಲ್ಲಿಟ್ಟು ಯತಿತ್ರಯರು ತೂಗಿದಾಗ ಮಾತೆಯರು ತುಪ್ಪದ ದೀಪ ಬೆಳಗಿದರು.

ಟಾಪ್ ನ್ಯೂಸ್

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

aatishi

Anti-national;ಅಫ್ಜಲ್ ಗುರು ವಿಚಾರದಲ್ಲಿ ಆತಿಷಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ

1

Vishnuvardhan Birthday: ವಿಷ್ಣುವರ್ಧನ್‌ ಜನ್ಮದಿನ ಆಚರಿಸಲು ಫ್ಯಾನ್ಸ್‌  ರೆಡಿ

1-pti

Army;ಕಮರಿಗೆ ಬಿದ್ದ ವಾಹನ: ಪ್ಯಾರಾಟ್ರೂಪರ್ ಮೃ*ತ್ಯು,5 ಕಮಾಂಡೋಗಳಿಗೆ ಗಾಯ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOOMAKETHU

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

Cylinder

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

Kapu-Police-Station

Manipura: ಎರಡು ಗುಂಪುಗಳ ನಡುವೆ ಗಲಾಟೆ; ಪ್ರಕರಣ ದಾಖಲು

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

3-thirthahalli

Thirthahalli: ಕಾರ್ಮಿಕರಿಗೆ ಕಿಟ್ ವಿತರಿಸಿದ ಆರಗ ಜ್ಞಾನೇಂದ್ರ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

1-dde

Edneer ಶ್ರೀ ಚಾತುರ್ಮಾಸ್ಯ; ಪದಯಾನ ತಂಡದ ಭರತನಾಟ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.