ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ


Team Udayavani, Feb 23, 2021, 5:00 AM IST

ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ

ಉಡುಪಿ: ಎಪ್ರಿಲ್‌/ಮೇ ತಿಂಗಳಲ್ಲಿ ನಿರೀಕ್ಷಿಸುತ್ತಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಪೂರಕವಾಗಿ ಕ್ಷೇತ್ರ ಪುನರ್ವಿಂಗಡನೆಗೆ ರಾಜ್ಯ ಚುನಾವಣ ಆಯೋಗ ಮಾರ್ಗದರ್ಶೀ ಸೂತ್ರವನ್ನು ಪ್ರಕಟಿಸಿದ್ದು ಅದರಂತೆ ಉಡುಪಿ ಜಿಲ್ಲೆಯಲ್ಲಿ ಜಿ.ಪಂ. ಕ್ಷೇತ್ರದ ಸಂಖ್ಯೆ ಹೆಚ್ಚಲಿದ್ದು, ತಾ.ಪಂ. ಕ್ಷೇತ್ರಗಳ ಸಂಖ್ಯೆ ಕುಗ್ಗಲಿದೆ.

ಈಗ ಜಿಲ್ಲೆಯಲ್ಲಿ ಒಟ್ಟು 26 ಜಿ.ಪಂ. ಕ್ಷೇತ್ರಗಳು, 95 ತಾ.ಪಂ. ಕ್ಷೇತ್ರಗಳಿವೆ. ಇನ್ನು ಮುಂದೆ 30 ಜಿ.ಪಂ. ಕ್ಷೇತ್ರಗಳು ಮತ್ತು 86 ತಾ.ಪಂ. ಕ್ಷೇತ್ರಗಳಾಗಲಿವೆ.

ಹಿಂದೆ ಜಿ.ಪಂ., ತಾ.ಪಂ. ಚುನಾವಣೆ ಆಗುವಾಗ ತಾಲೂಕು ಪುನರ್ವಿಂಗಡಣೆಗೆ ಪೂರ್ವ ಸ್ಥಿತಿ ಇತ್ತು. ಎರಡು ವರ್ಷಗಳ ಹಿಂದೆ ತಾಲೂಕು ಪುನರ್ವಿಂಗಡಣೆಯಾದ ಬಳಿಕ ಉಡುಪಿ ತಾಲೂಕು ಉಡುಪಿ, ಬ್ರಹ್ಮಾವರ, ಕಾಪು ತಾಲೂಕಾದರೆ, ಕುಂದಾಪುರ ತಾಲೂಕು ಕುಂದಾಪುರ, ಬೈಂದೂರು ತಾಲೂಕುಗಳಾದವು, ಕಾರ್ಕಳ ತಾಲೂಕು ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಾಗಿವೆ.

ತಾಲೂಕುವಾರು ಕ್ಷೇತ್ರಗಳು
ಈಗ ವಿವಿಧ ತಾಲೂಕುಗಳಲ್ಲಿ ಇರುವ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 3- 13, ಬ್ರಹ್ಮಾವರ ತಾಲೂಕು 4-16, ಕಾಪು ತಾಲೂಕು 4-12, ಕುಂದಾಪುರ ತಾಲೂಕು 7- 23, ಬೈಂದೂರು ತಾಲೂಕು 3- 10, ಕಾರ್ಕಳ ತಾಲೂಕು 4-15, ಹೆಬ್ರಿ ತಾಲೂಕು 1- 6.

ಇನ್ನು ಮುಂದೆ ವಿವಿಧ ತಾಲೂಕುಗಳನ್ನು ಹೊಂದಲಿರುವ ಜಿಲ್ಲಾ ಪಂಚಾಯ ತ್‌ ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 4- 11, ಬ್ರಹ್ಮಾವರ ತಾಲೂಕು 5-13, ಕಾಪು ತಾಲೂಕು 4-10, ಕುಂದಾಪುರ ತಾಲೂಕು 7- 19, ಬೈಂದೂರು ತಾಲೂಕು 3- 9, ಕಾರ್ಕಳ ತಾಲೂಕು 5-13, ಹೆಬ್ರಿ ತಾಲೂಕು 2- 11.

ಜನಸಂಖ್ಯೆಗೆ ಅನ್ವಯ ಕ್ಷೇತ್ರಗಳು
ಈಗಾಗಲೇ ನಡೆದ ಗ್ರಾ.ಪಂ. ಚುನಾವಣೆಯಲ್ಲಿ 400 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರಚಿಸಲಾಗಿತ್ತು. ಈಗ ಜಿ.ಪಂ. ಕ್ಷೇತ್ರವನ್ನು ಪ್ರತಿ 35,000 ಜನಸಂಖ್ಯೆಗೆ ಅನುಗುಣವಾಗಿ ರಚಿಸಲು ಆಯೋಗ ಸೂಚನೆ ನೀಡಿದೆ. ತಾ.ಪಂ. ಕ್ಷೇತ್ರ ರಚನೆಯಲ್ಲಿ ಮಾತ್ರ ಎರಡು ರೀತಿಯ ಸೂತ್ರಗಳಿವೆ. ಒಂದು ತಾಲೂಕಿನಲ್ಲಿ (ತಾ.ಪಂ.) 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಅಂತಹ ತಾಲೂಕಿನಲ್ಲಿ 11 ಕ್ಷೇತ್ರಗಳನ್ನು ರಚಿಸಬೇಕು, 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಅಂತಹ ಕಡೆ 12,500 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರೂಪಿಸಬೇಕು. ಉಡುಪಿ ತಾಲೂಕಿನಲ್ಲಿ 1.28 ಲಕ್ಷ, ಬೈಂದೂರಿನಲ್ಲಿ 1 ಲಕ್ಷ, ಕಾಪುವಿನಲ್ಲಿ 1.13 ಲಕ್ಷ, ಬ್ರಹ್ಮಾವರದಲ್ಲಿ 1.5 ಲಕ್ಷ, ಕುಂದಾಪುರದಲ್ಲಿ 2.3 ಲಕ್ಷ, ಕಾರ್ಕಳದಲ್ಲಿ 1.5 ಲಕ್ಷ, ಹೆಬ್ರಿಯಲ್ಲಿ 46,000 ಜನಸಂಖ್ಯೆ ಇದೆ.

ಹೀಗಾಗಿ ಹೆಬ್ರಿ ತಾಲೂಕಿನಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಾರಣ 11 ತಾ.ಪಂ. ಕ್ಷೇತ್ರಗಳು ರಚನೆಯಾಗಲಿವೆ. ಉಳಿದ ಕಡೆ 12,500 ಜನಸಂಖ್ಯೆಗೆ ಒಂದು ಕ್ಷೇತ್ರ ರಚನೆಯಾಗಲಿದೆ. ಹೆಬ್ರಿಯಲ್ಲಿ 35,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕಾರಣ ಎರಡು ಜಿ.ಪಂ. ಕ್ಷೇತ್ರಗಳು ಸಿಗಲಿವೆ. ಇಲ್ಲಿ ತಾಲೂಕುವಾರು ಜನಸಂಖ್ಯೆ ನಗರ ಪ್ರದೇಶವನ್ನು ಹೊರತುಪಡಿಸಿ ಗ್ರಾಮಾಂತರದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕಾಗಿ ಕುಂದಾಪುರ ಇರಲಿದೆ. ಕುಂದಾಪುರ, ಬೈಂದೂರು ತಾಲೂಕುಗಳಿಗೆ ಹಿಂದೆ ಇದ್ದಷ್ಟೇ ಜಿ.ಪಂ. ಕ್ಷೇತ್ರಗಳು ಸಿಗಲಿವೆ, ಆದರೆ ತಾ.ಪಂ. ಕ್ಷೇತ್ರಗಳು ಕಡಿಮೆಯಾಗಲಿವೆ. ಹೆಬ್ರಿಯಲ್ಲಿ ಮಾತ್ರ ಜಿ.ಪಂ. ಮತ್ತು ತಾ.ಪಂ. ಎರಡರ ಸಂಖ್ಯೆಯೂ ಹೆಚ್ಚಳವಾಗಿದೆ. ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದಲ್ಲಿ ತಲಾ ಒಂದು ಜಿ.ಪಂ. ಕ್ಷೇತ್ರ ಹೆಚ್ಚಿಗೆಯಾಗಲಿದ್ದು ತಾ.ಪಂ. ಕ್ಷೇತ್ರ ಕಡಿಮೆಯಾಗಲಿವೆ.

ಕ್ಷೇತ್ರ ಪುನರ್ವಿಂಗಡಣೆೆ
ತಾಲೂಕುಗಳು ಹೊಸದಾಗಿ ರಚನೆ ಯಾದಲ್ಲಿ ಹಿಂದಿದ್ದ ಜಿ.ಪಂ. ಕ್ಷೇತ್ರಗಳ ಗ್ರಾಮಗಳು ಎರಡು ತಾಲೂಕುಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಆಯಾ ತಾಲೂಕುಗಳ ಗ್ರಾಮಗಳನ್ನು ಮಾತ್ರ ಆಯಾ ತಾಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಲ್ಲಿ ಹಂಚಿಹಾಕಲಿದ್ದಾರೆ. ಬೈಂದೂರಿನಲ್ಲಿ ಪ.ಪಂ. ರಚನೆಯಾದ ಕಾರಣ ಅಲ್ಲಿಯೂ ಕ್ಷೇತ್ರ ರಚನೆಯಲ್ಲಿ ಗ್ರಾಮಗಳು ವ್ಯತ್ಯಾಸವಾಗಲಿವೆೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.