UV Fusion: ತಂತ್ರಜ್ಞಾನವೆಂಬುದು ವರವೋ? ಶಾಪವೋ?

ಪರಿಸರದ ಎಲ್ಲ ಸಂಪನ್ಮೂಲಗಳು ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ.

Team Udayavani, Jul 15, 2024, 4:51 PM IST

UV Fusion: ತಂತ್ರಜ್ಞಾನವೆಂಬುದು ವರವೋ? ಶಾಪವೋ?

ಮಾನವನ ಉಗಮ ಉಹಿಸಲಾಗದ್ದು. ಮಂಗನಿಂದ ಶುರುವಾದ ಮನುಷ್ಯನ ಬೆಳವಣಿಗೆ ಇಂದು ಪ್ರಾಣಿಗಳನ್ನೆ ಪಳಗಿಸಬಲ್ಲವನಂತೆ ಬೆಳೆದು ನಿಂತಿದ್ದಾನೆ.ತನ್ನನ್ನು ಯಾರು ಮಿರಿಸಿಲಾಗದಂತೆ ತನ್ನ ಯೋಚನಾ ಶಕ್ತಿಯ ಮೂಲಕ ಅನೇಕ ಸಾಧನಗಳನ್ನು ಕಂಡುಹಿಡಿದು ಉಹಿಸಲಾಗದ ಸಾಧನೆಗಳನ್ನು ಮಾಡುತ್ತಿದ್ದಾನೆ.

ತನ್ನ ಯೋಚನೆಗಳಿಗೆ ಮಿತಿಯಿಲ್ಲವೆಂಬಷ್ಟು ಹೊಸ ತಂತ್ರಜ್ಞಾನಗಳ ನಿರ್ಮಾಣವನ್ನು ಕೈಗೊಂಡಿದ್ದಾನೆ. ಸಂಸ್ಕೃತದ
ಶ್ಲೊಕವೊಂದರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು ಅದರಲ್ಲಿ ಮಾನವ ಯೋಚನೆಗಳು ಸದಾ ಆಸೆಗಳಿಂದ ಕೂಡಿದೆ. ಈ ಆಸೆಗಳು ಬದಲಾಗುತ್ತಿರುವುದರಿಂದ ಇದರ ನಿಯಂತ್ರಣ ಕಠಿಣ. ಮಾನವನ ಆಸೆ ಸಣ್ಣ ಹುಲ್ಲಿನಷ್ಟು ಬೆಳೆದು ಇಂದು ಪರ್ವತದಷ್ಟೆತ್ತರಕ್ಕೆ ಬೆಳೆದು ನಿಂತಿದೆ. ಪ್ರಕೃತಿಯ ಸಹಾಯದಿಂದ ತನ್ನೆಲ್ಲಾ ಆಸೆಗಳ ಪೂರೈಸುವಿಕೆಯನ್ನು ಅವನು ಹೊಂದುತ್ತಿದ್ದಾನೆ.

ಯೋಚನೆಗಳು ಬದಲಾದಾಗೆಲ್ಲಾ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾನೆ. ಪ್ರಕೃತಿಯು ಮಾನವನ ಎಲ್ಲ ಯೋಚನೆಗಳಿಗೆ ಆತನ ಎಲ್ಲ ಆವಿಷ್ಕಾರಗಳಿಗೆ ಪೂರಕವಾಗಿದೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಮಡಿಲಿನಲ್ಲಿ ಸಿಗುವ ಎಲ್ಲ ಸಂಪನ್ಮೂಲಗಳನ್ನು ಮನುಷ್ಯನ ತಾಂತ್ರಿಕ ಸಂಶೋಧನೆಗಳಿಗೆ ಪೂರಕವಾಗುವಂತೆ ಬಳಸಿಕೊಳ್ಳುತ್ತಿದ್ದಾನೆ. ಈ ಎಲ್ಲ ಸಂಪನ್ಮೂಲಗಳನ್ನು ಪ್ರಕೃತಿ ನೀಡುತ್ತಾ ಬಂದಿದೆ. ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಬಳಸಿ ತನ್ನ ಮನುಕುಲದ ಉದ್ಧಾರಕ್ಕೆ ಮಾನವ ಕೆಲಸ ಮಾಡುತ್ತಿದ್ದರೂ, ಪ್ರಕೃತಿಗೆ ಮಾತ್ರ ಮಾನವ ದಾನವನಾಗಿ ಕೆಡುಕು ಉಂಟು ಮಾಡುತ್ತಿದ್ದಾನೆ.

ಮಾನವ ತನ್ನ ಅತಿಯಾದ ತಂತ್ರಜ್ಞಾನದ ಆವಿಷ್ಕಾರ ನಿಸರ್ಗಕ್ಕೆ ಕುತ್ತು ತರಬಹುದೆಂದು ಆಲೋಚಿಸದೆ, ವಾಹನಗಳ ಹೆಚ್ಚಿನ ಉಪಯೋಗ ಆಗಿರಬಹುದು, ಕಾರ್ಖಾನೆಯ ನಿತ್ಯ ಕೆಲಸಗಳಾಗಿರಬಹುದು, ಗೃಹೋಪಯೋಗಿ ವಸ್ತುಗಳ ವಿಪರೀತ ಬಳಕೆ, ವಿದ್ಯುತ್‌ ಉಪಕರಣಗಳ ಉಪಯೋಗ ಮತ್ತಿತರೆ ಮಾಲಿನ್ಯ ವಸ್ತುಗಳಿಂದಾಗಿ ಮನುಷ್ಯ ಪ್ರಕೃತಿಯ ಸಮತೋಲನವನ್ನು ಅಸಮತೋಲನದೆಡೆಗೆ ಕರೆದೊಯ್ಯುತ್ತಿದ್ದಾನೆ.

ಪ್ರಕೃತಿಯ ಎಲ್ಲ ನೈಸರ್ಗಿಕ ಅಂಶಗಳನ್ನು ಹಾಳು ಮಾಡುತ್ತಿರುವ ಮಾನವ ಹೇಗೆ ತನಗೆಗೆ ತಲೆ,ಹೃದಯ,ನರ ಕೋಶ ಮತ್ತು ದೇಹದ ಅಂಗಾಂಗಗಳು ಮುಖ್ಯವೋ ಹಾಗೆ ಪ್ರಕೃತಿಗೂ ಅದರ ನೆಲ, ಜಲ, ಮರ ಕಿಡಗಳು,ಗಾಳಿ ಮತ್ತು ಎಲ್ಲ ನೈಸರ್ಗಿಕ ಸಂಪನ್ಮೂಲಗಳು ಅತ್ಯಗತ್ಯವೆಂದು ಯೋಚಿಸಲು ವಿಫ‌ಲನಾಗಿದ್ದಾನೆ.

ಇದು ಮಾನವನ ಅಜ್ಞಾನದ ಪರಮಾವದಿಯ ಮುಖ ಕನ್ನಡಿಯಾಗಿ ಪ್ರದರ್ಶಿಸಲ್ಪಡುತ್ತಿದೆ. ಆದರೂ ಮಾನವನ ಸ್ವಾರ್ಥ ಚಿಂತನೆ, ತುಚ್ಚ ಆಚರಣೆ ಕೊನೆ ಕಾಣುತ್ತಿಲ್ಲ. ಮಾನವನ ಕ್ರಿಯೆಯಿಂದಾಗಿ ಪರಿಸರದ ಎಲ್ಲ ಸಂಪನ್ಮೂಲಗಳು ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ.

ಮಾನವನ ಈ ಎಲ್ಲ ಕೃತ್ಯಗಳನ್ನು ಸಹಿಸಿರುವ ಪ್ರಕೃತಿಯು ಒಂದು ದಿನ ತಿರುಗಿ ನಿಲ್ಲುತ್ತದೆ. ಪ್ರಕೃತಿಯ ವಿಕೋಪದಿಂದಾಗಿ ಮಾನವನ ಸಂಕುಲವೆ ನಶಿಸಿ ಹೋಗಬಹುದು. ಜನಗಳ ಮೃತ್ಯು ತಲೆಎತ್ತಿ ತಾಂಡವಾಡ ಬಹುದು. ಇದೆಲ್ಲವನ್ನು ತಿಳಿದಿರುವ ನಮ್ಮ ಇಡೀ ನರಸಂಕುಲ ಯಾವುದೇರೀತಿಯ ನಿಸರ್ಗ ಉಳಿವಿಕೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತಿಲ್ಲ. ಹಾಗಾಗಿ ಈಗ ಮಾನವ ಎಚ್ಚರಿತುಕೊಳ್ಳದಿದ್ದರೆ ಮುಂದೊಂದು ದಿನ ಅಸಹಾಯಕನಾಗಿ ತನ್ನ ಮೃತ್ಯುವನ್ನು ಸ್ವಾಗತಿಸ ಬೇಕಾಗುತ್ತದೆ.ಅರಿತು ಬಾಳುನಿ ಮನುಜ ನಿನ್ನ ಉಳಿವಿಗೆ ಪ್ರಕೃತಿಯ ಉಳಿವು ಅಗತ್ಯ ಎಂಬುವುದು ನಿಜ.

*ವಂಶಿ ಐ. ಭಟ್ಟ
ಎಸ್‌.ಡಿ.ಎಂ., ಉಜಿರೆ

ಟಾಪ್ ನ್ಯೂಸ್

2-koppala

Koppala: ಓಮಿನಿ-ಲಾರಿ ಅಪಘಾತ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

1-Horoscope

Daily Horoscope: ಸಮಯಸಾಧಕರ ಪ್ರಶಂಸೆಗೆ ಕಿವಿಗೊಡಬೇಡಿ, ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ

KARKarkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ?

Karkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ?

Modi-shankar

India Foreign Policy: ವಿಶ್ವ ಬಂಧು ಭಾರತ, ಅಲಿಪ್ತ ನೀತಿಯಿಂದ ಎಲ್ಲರಿಗೂ ಆಪ್ತವಾಗುವ ನೀತಿ!

hdkMUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

MUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

1-test

Save Test Cricket; ಟೆಸ್ಟ್‌  ಕ್ರಿಕೆಟ್‌ ಉಳಿಸಲು ಐಸಿಸಿ ನಿಧಿ ಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

WhatsApp; ಶೀಘ್ರವೇ ಅಪರಿಚಿತರ ಸಂದೇಶ ನಿರ್ಬಂಧಿಸುವ ಫೀಚರ್‌ ಪರಿಚಯ

Reliance “ಡಿಜಿಟಲ್‌ ಇಂಡಿಯಾ ಸೇಲ್‌’: ಶೇ. 25 ರಿಯಾಯಿತಿ; ಆ. 18ರ ವರೆಗೆ ಇರಲಿದೆ ಅವಕಾಶ

Reliance “ಡಿಜಿಟಲ್‌ ಇಂಡಿಯಾ ಸೇಲ್‌’: ಶೇ. 25 ರಿಯಾಯಿತಿ; ಆ. 18ರ ವರೆಗೆ ಇರಲಿದೆ ಅವಕಾಶ

10-boult

Boult ನಿಂದ 2 ಇಯರ್ ಬಡ್ ಬಿಡುಗಡೆ

Apple products; ಐಫೋನ್‌, ಐಪ್ಯಾಡ್‌ಗಳಲ್ಲಿ ದೋಷಗಳನ್ನು ಫ್ಲ್ಯಾಗ್‌ ಮಾಡಿದ ಕೇಂದ್ರ ಸರ್ಕಾರ

Apple products; ಐಫೋನ್‌, ಐಪ್ಯಾಡ್‌ಗಳಲ್ಲಿ ದೋಷಗಳನ್ನು ಫ್ಲ್ಯಾಗ್‌ ಮಾಡಿದ ಕೇಂದ್ರ ಸರ್ಕಾರ

gadget3

Gadget Review: ಒನ್ ಪ್ಲಸ್ ಪ್ಯಾಡ್ 2… ಲ್ಯಾಪ್ ಟಾಪ್ ಅನುಭವ ನೀಡುವ ಟ್ಯಾಬ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

2-koppala

Koppala: ಓಮಿನಿ-ಲಾರಿ ಅಪಘಾತ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

1-Horoscope

Daily Horoscope: ಸಮಯಸಾಧಕರ ಪ್ರಶಂಸೆಗೆ ಕಿವಿಗೊಡಬೇಡಿ, ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ

KARKarkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ?

Karkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ?

Modi-shankar

India Foreign Policy: ವಿಶ್ವ ಬಂಧು ಭಾರತ, ಅಲಿಪ್ತ ನೀತಿಯಿಂದ ಎಲ್ಲರಿಗೂ ಆಪ್ತವಾಗುವ ನೀತಿ!

hdkMUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

MUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.