Vijayapura: ಕಾಂಗ್ರೆಸ್ ಸರಕಾರದ ಗ್ಯಾರಂಟಿ ನಿಲ್ಲುವುದು ನಿಶ್ಚಿತ: ಸಂಸದ ಜಿಗಜಿಣಗಿ
ಕಾಂಗ್ರೆಸ್ ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಆದ್ರೆ ಸರ್ಕಾರ ಹೋಗೋದು ಗ್ಯಾರಂಟಿ
Team Udayavani, Aug 15, 2024, 7:28 PM IST
ವಿಜಯಪುರ: ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ನಿಲ್ಲಿಸಲಿ ಬಿಡಲಿ ಅಥವಾ ಅವರೇ ತಲೆಕೆಳಗಾಗಿ ನಿಲ್ಲಲಿ ನಮಗೆ ಸಂಬಂಧವಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ಮುಂದೆ ಸರ್ಕಾರ ಏನಾಗುತ್ತೆ ಅನ್ನೋದು ನನಗೆ ಗೊತ್ತಿದೆ, ಗ್ಯಾರಂಟಿ ನಿಲ್ಲುವುದು ಗ್ಯಾರಂಟಿ ಎಂದು ಸಂಸದ ರಮೇಶ ಜಿಗಜಿಣಗಿ ಸರಕಾರದ ವಿರುದ್ಧ ಹರಿಹಾಯ್ದರು.
ಮುಂದೆ ಏನಾಗುತ್ತೆ ಅನ್ನೋ ಚಿತ್ರ ಮುಂದಿದೆ:
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಮಕೃಷ್ಣ ಹೆಗಡೆಯವರಿಗೆ ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ, ನನಗೂ ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿದ್ದು, ಮುಂದೆ ಏನಾಗುತ್ತೆ ಅನ್ನೋ ಚಿತ್ರ ಮುಂದಿದೆ. ಆದರೆ ಮುಂದೆ ಏನಾಗುತ್ತದೆ ಎಂದು ನಾನು ಹೇಳಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲವೂ ನಿಲ್ಲುತ್ತವೆ ನೋಡ್ತಾ ಇರಿ. ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಕುಂಟುತ್ತಿದೆ, ಬಹಳ ದಿನ ನಿಲ್ಲೋದಿಲ್ಲ ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಆದ್ರೆ ಸರ್ಕಾರ ಹೋಗೋದು ಗ್ಯಾರಂಟಿ ಎಂದರು.
ದಲಿತರು ಸಿಎಂ ಆಗ್ತಾರೆ:
ದಲಿತ ಮುಖ್ಯಮಂತ್ರಿ ವಿಷಯ ಪುನರುಚ್ಚರಿಸಿದ ಸಂಸದ ಜಿಗಜಿಣಗಿ, ದಲಿತರು ಮುಖ್ಯಮಂತ್ರಿ ಆಗಬೇಕೆಂಬುದು ನಾನು ಸಾಯುವವರೆಗೂ ಒತ್ತಾಯ ಇದ್ದೇ ಇರಲಿದೆ. ದಲಿತರೇನು ಪಾಪ ಮಾಡಿದ್ದಾರೆ ಎಂದು ಕಿಡಿಕಾರಿದ ಜಿಗಜಿಣಗಿ, ದೇವರ ಇಚ್ಛೇ ಇದ್ದಾಗ ದಲಿತರು ಸಿಎಂ ಆಗುತ್ತಾರೆ, ಬಹಳ ಗಡಿಬಿಡಿ ಬೇಡ, ದಲಿತ ಸಿಎಂ ಆಗೋದು ನಿಶ್ಚಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.