![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 12:18 PM IST
ವಿಜಯವಾಡ(Vijayawada): ವಿಜಯವಾಡದ ಪಯಕಪುರಂ ಪ್ರದೇಶದಲ್ಲಿನ “ಪಾಕಿಸ್ತಾನ ಕಾಲೋನಿ” ಹೆಸರನ್ನು ಇದೀಗ ಭಗೀರಥ ಕಾಲೋನಿ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಹಿಂದಿನ ಹೆಸರಿಗೆ ಭಾರೀ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ದೀರ್ಘಕಾಲದ ಬೇಡಿಕೆಯನ್ನು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಮರುನಾಮಕರಣ ಮಾಡಿರುವುದಾಗಿ ವರದಿ ವಿವರಿಸಿ.
ಈ ಕಾಲೋನಿಗೆ ಪಾಕಿಸ್ತಾನ ಕಾಲೋನಿ ಎಂಬ ಹೆಸರು ಬರಲು ಮೂಲ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮಹಾನಗರ ಪಾಲಿಕೆ ದಾಖಲೆಯಲ್ಲಿ ದೀರ್ಘಕಾಲದಿಂದ ಈ ಹೆಸರು ದಾಖಲೆಯಲ್ಲಿದೆ ಎಂದು ವರದಿ ಹೇಳಿದೆ.
ಕಾಲೋನಿಯ ಹೆಸರು ಬದಲಾಯಿಸಲು ವಿಜಯವಾಡ ಮುನ್ಸಿಪಲ್ ಕಾರ್ಪೋರೇಶನ್ ಅನುಮತಿ ನೀಡಿರುವುದಾಗಿ ಎನ್ ಟಿಆರ್ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಶ್ ಖಚಿತಪಡಿಸಿದ್ದಾರೆ. ಹೆಸರು ಬದಲಾವಣೆ ನಂತರ ಕಾಲೋನಿಯಲ್ಲಿರುವ 270 ನಿವಾಸಿಗಳು ಈಗಾಗಲೇ ತಮ್ಮ ಆಧಾರ್, ಪಾನ್, ರೇಷನ್ ಕಾರ್ಡ್ ಗಳಲ್ಲಿನ ವಿಳಾಸವನ್ನು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ರಾಜ್ಯ ಸಗರ್ ರಜಪೂತ್ ಸೇವಾ ಸಮಿತಿ ಮತ್ತು ನಿವಾಸಿಗಳು ಕೆಲವು ದಶಕಗಳಿಂದ ಹೆಸರು ಬದಲಾವಣೆಗೆ ಮನವಿ ನೀಡಿದ್ದರು. ಈ ಕಾಲೋನಿಗೆ ಪಾಕಿಸ್ತಾನ ಕಾಲೋನಿ ಹೆಸರು ಹೇಗೆ ಬಂತು ಎಂಬ ಬಗ್ಗೆ ನೀಡಿರುವ ವಿವರಣೆ ಹೀಗಿದೆ-1971ರ ಭಾರತ-ಪಾಕ್ ಯುದ್ಧದ ವೇಳೆ ಭಾರತ ಪಶ್ಚಿಮ ಬಂಗಾಳಕ್ಕೆ(ಈಗ ಬಾಂಗ್ಲಾದೇಶ) ಬೆಂಬಲ ನೀಡಿತ್ತು. ಈ ವೇಳೆ ವಿಜಯವಾಡದಲ್ಲಿ ಠಿಕಾಣಿ ಹೂಡಿದ್ದ ಪಶ್ಚಿಮಬಂಗಾಳದ ನಿರಾಶ್ರಿತರು ಕಾಲೋನಿಗೆ ಈ ಹೆಸರು ನೀಡಿದ್ದಾರೆನ್ನಲಾಗಿದೆ.
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Indian Deportees: ಭಾರತೀಯರಿಗೆ ಮತ್ತೆ ಕೋಳ ತೊಡಿಸಿ ಗಡೀಪಾರು!
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.