ಬಜಪೆಯಲ್ಲಿದೆ ಅಮೆರಿಕ-ಬ್ರಿಟನ್‌ನ ಹಳೆ ಜಮಾನದ ಕಾರು!


Team Udayavani, Dec 12, 2020, 4:28 PM IST

ಬಜಪೆಯಲ್ಲಿದೆ ಅಮೆರಿಕ-ಬ್ರಿಟನ್‌ನ ಹಳೆ ಜಮಾನದ ಕಾರು!

ಮಹಾನಗರ: ಹೊಸ ಮಾಡೆಲ್‌ ಕಾರು ಖರೀದಿಗೆ ಜನರು ಮನಸ್ಸು ಮಾಡುವುದು ಸಾಮಾನ್ಯ. ಆದರೆ ಹಳೆ ಜಮಾನದ ವಿಂಟೇಜ್‌ ಕಾರು ಖರೀದಿಸಿ ಅದಕ್ಕೆ ಹೊಸತನವನ್ನು ನೀಡುವವರು ಬಲು ಅಪರೂಪ. ಅಮೆರಿಕ, ಬ್ರಿಟನ್‌ ಮಾಡೆಲ್‌ನ ಹಳೆ ಕಾರಿನ
ಸರದಾರರೊಬ್ಬರು ಮಂಗಳೂರು ಹೊರ ವಲಯದ ಬಜಪೆಯಲ್ಲಿದ್ದಾರೆ!

ಬಜಪೆ ನಿವಾಸಿ ಗುರುಪುರ ದೋಣಿಂಜಗುತ್ತು ಡಿ. ರತ್ನಾಕರ ಭಂಡಾರಿ ಅವರು ಹಲವು ವರ್ಷಗಳಿಂದ ಈ ಅಪರೂಪದ ಹವ್ಯಾಸ ಬೆಳೆಸಿಕೊಂಡಿದ್ದಾರೆ. 15 ವರ್ಷಗಳಿಂದ 8 ಜೀಪು ಸಹಿತ 18 ಹಳೆಯ ಕಾರು ಖರೀದಿಸಿದ್ದ ಅವರು, ಸದ್ಯ ಮೋರಿಸ್‌ ಮೈನರ್‌, ಆಸ್ಟಿನ್‌, ಹೆರಾಲ್ಡ್‌ ಎಂಬ ಮೂರು ಕಾರು, ವಿಲ್ಲೀಸ್‌ ಜೀಪು ಹೊಂದಿದ್ದಾರೆ.

1960ರ ಮಾಡೆಲ್‌ನ ಅಮೆರಿಕದ ವಿಲೀಸ್‌ ಜೀಪನ್ನು 14 ವರ್ಷದ ಹಿಂದೆ ಹೊಸದಿಲ್ಲಿಯಿಂದ ರತ್ನಾಕರ್‌ ಅವರು ತಂದಿದ್ದರು. ಅಂದು ಸುಮಾರು 20 ಸಾವಿರ ರೂ. ಪಾವತಿಸಿ ತಂದಿರುವ ಈ ಜೀಪನ್ನು ಅನಂತರ ಮಂಗಳೂರಲ್ಲಿ 7 ಲಕ್ಷ ರೂ.ವರೆಗೆ ಖರ್ಚು ಮಾಡಿ ನವೀಕರಿಸಲಾಗಿದೆ. 1937ರ ಮಾಡೆಲ್‌ನ ಬ್ರಿಟನ್‌ನ ಆಸ್ಟಿನ್‌ 7 ರೂಬಿ ಕಾರು ಗುಜರಾತ್‌ನ ಜಡೇಜ ಕುಟುಂಬದವರಲ್ಲಿ ಇದೆ ಎಂಬ ವಿಷಯ ಗೊತ್ತಾಗಿ 8 ಲಕ್ಷ ರೂ. ನೀಡಿ ಅಲ್ಲಿಂದ ತರಲಾಗಿತ್ತು. ನಾದುರಸ್ತಿಯಲ್ಲಿದ್ದ ಈ ಕಾರನ್ನು ರತ್ನಾಕರ್‌ ಅವರು ತಮ್ಮ ಜೀಪಿನ ಸಹಾಯದಿಂದ ಮಂಗಳೂರಿಗೆ ತಂದಿದ್ದರು. ಬಳಿಕ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿ ಈ ಕಾರನ್ನು
ನವೀಕರಿಸಿದ್ದಾರೆ. ಕಾರಿನ ಮೂಲ ಎಂಜಿನ್‌/ತಾಂತ್ರಿಕ ವಸ್ತುಗಳ ಬಳಕೆ ಮಾಡುವ ಕಾರಣದಿಂದ ಆನ್‌ಲೈನ್‌ನಲ್ಲಿ ಬಿಡ್‌ನ‌ಲ್ಲಿ ಭಾಗವಹಿಸಿ ಬ್ರಿಟನ್‌ನಿಂದ ಸಾಮಗ್ರಿ ಪಡೆದು ಕಾರಿಗೆ ಜೋಡಿಸಲಾಗಿದೆ. 1951ರ ಮೋರಿಸ್‌ ಮೈನರ್‌ (ಎಂ.ಜಿ.) ಕಾರನ್ನು ಗದಗದಿಂದ ಏಳು ವರ್ಷಗಳ ಹಿಂದೆ ತರಲಾಗಿತ್ತು. ಇದಕ್ಕೂ ಬ್ರಿಟನ್‌ನ ಮೂಲ ವಸ್ತುಗಳನ್ನು 10 ಲಕ್ಷ ರೂ. ವೆಚ್ಚ ಮಾಡಿ ಅಳವಡಿಸಲಾಗಿತ್ತು. 1964ರ ಮಾಡೆಲ್‌ನ ಸ್ಟ್ಯಾಂಡರ್ಡ್ ಹೆರಾಲ್ಡ್‌ (ಓಪನ್‌ ಟಾಪ್‌) ಕಾರನ್ನು ಮೂರು ವರ್ಷಗಳ ಹಿಂದೆ ಉತ್ತರಪ್ರದೇಶದಿಂದ ತರಿಸಿದ್ದಾರೆ. ಕಾರ್ಗೊ ಲಾರಿಯಲ್ಲಿ ಬೆಂಗಳೂರಿಗೆ ತಂದು ಬಳಿಕ ಮಂಗಳೂರಿಗೆ ತರಲಾಗಿತ್ತು. 3.5 ಲಕ್ಷ ರೂ.ಗೆ
ಸಿಕ್ಕಿದ ಕಾರಿಗೆ ಅಷ್ಟೇ ಮೊತ್ತದಲ್ಲಿ ನವೀಕರಣವನ್ನು ಮತ್ತೆ ಮಾಡಲಾಗಿದೆ.

ಮನೆ ಹಿರಿಯ ಸದಸ್ಯರಂತೆ ಪ್ರೀತಿ-ಗೌರವ!
ಚಿಕ್ಕಂದಿನಿಂದಲೇ ನನಗೆ ಅಟೋಮೊಬೈಲ್‌ ಕ್ಷೇತ್ರದಲ್ಲಿ ಆಸಕ್ತಿ. ಇದೇ ವಿಷಯದಲ್ಲಿ ಆಟೋಮೊಬೈಲ್‌ ಡಿಪ್ಲೊಮಾ
ಎಂಜಿನಿಯರಿಂಗ್‌ ಮಾಡಿದ್ದೆ. ಈ ವೇಳೆ ಅಂಬಾಸಿಡರ್‌, ಕಾಂಟೆಸ್‌, ಫಿಯೆಟ್‌ ಕಾರು ಚಲಾವಣೆ ಮಾಡುತ್ತಿದ್ದೆ. ಒಂದೆರಡು ವರ್ಷ ಕಾರು ಶೋರೂಂನಲ್ಲಿ ಕೆಲಸ ಮಾಡಿದ್ದೆ. ಜತೆಗೆ ಮನೆಯ ಗದ್ದೆಗೆ ಟಿಲ್ಲರ್‌ ತಂದಾಗ ಅದರ ರಿಪೇರಿ ನಾನೇ ಮಾಡುತ್ತಿದ್ದೆ. ದಿನ ಕಳೆದಂತೆ ಹಳೆಯ ಕಾರಿನ ಕ್ರೇಜ್‌ ಶುರುವಾಯಿತು. ನನ್ನ ಸಹಪಾಠಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಹಳೆಯ ಕಾರಿನ ಬಗ್ಗೆ ಆಸಕ್ತಿ ಮೂಡಿತು. ಇದೇ ಕಾರಣದಿಂದ ಕಾರು ಖರೀದಿಗೆ ಮನಸ್ಸು ಮಾಡಿದೆ. ಮನೆಯಲ್ಲಿ ಹಿರಿಯ ವ್ಯಕ್ತಿ ಇದ್ದರೆ ಅವರನ್ನು ಎಷ್ಟು ಪ್ರೀತಿ, ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೋ ಹಾಗೆ ನಾನೂ ಕೂಡ ಹಳೆಯ ಕಾರನ್ನು ನೋಡಿಕೊಳ್ಳುತ್ತೇನೆ. ಸಮಯ ಕಳೆಯಲು ಮನೆ ಮಂದಿ ಇದೇ ಕಾರು/ ಜೀಪಲ್ಲಿ ಕೆಲವೊಮ್ಮೆ ಹೋಗುತ್ತೇವೆ. ಈ ವಾಹನ ಕಂಡಾಗ ಜನರು ಬಹಳಷ್ಟು ಗೌರವ ನೀಡುತ್ತಾರೆ. ಇದನ್ನೇ ಅವಕ್ಕಾಗಿ ನೋಡುತ್ತಾರೆ. ಗಣರಾಜ್ಯೋತ್ಸವದ ವೇಳೆಯಲ್ಲಿ ನೆಹರೂ ಮೈದಾನದಲ್ಲಿ ಇದರ ಪ್ರದರ್ಶನ ಕೂಡ ಇತ್ತು. ವಿದೇಶಿಯರು ಒಮ್ಮೆ ಮಂಗಳೂರಲ್ಲಿ ಸುತ್ತಾಡುವಾಗ ನಾನು ಚಲಾಯಿಸುತ್ತಿದ್ದ ಹೆರಾಲ್ಡ್‌ ಕಾರನ್ನು ನೋಡಿ ಖುಷಿಯಿಂದ ಸಂಭ್ರಮಿಸಿದ ಬಗ್ಗೆ ನೆನಪು ಮಾಡುತ್ತಾರೆ ಕಾರಿನ ಮಾಲಕ ರತ್ನಾಕರ ಭಂಡಾರಿ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.