![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 18, 2022, 11:43 AM IST
ಪುತಿನ್ರನ್ನು ಅಮೆರಿಕ ಅಧ್ಯಕ್ಷ ಯುದ್ಧಾಪರಾಧಿ (ವಾರ್ ಕ್ರಿಮಿನಲ್) ಎಂದು ನೇರವಾಗಿ ಆರೋಪಿಸಿದ್ದಾರೆ. ಆದರೆ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಯುದ್ಧಾಪರಾಧಿ ಎಂದು ಕರೆಯುವು ದಕ್ಕಾಗದು. ಯುದ್ಧಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಕಾನೂನನ್ನು ಉಲ್ಲಂ ಸಿದರೆ ಮಾತ್ರ ಅವರನ್ನು ಹಾಗೆ ಕರೆಯಲಾಗುತ್ತದೆ. ಆ ಕಾನೂನು ಏನು, ಅದರಲ್ಲಿರುವ ಅಂಶಗಳು ಯಾವುವು? ಇತ್ಯಾದಿಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಪೊಲೀಸರಿಂದ ಮೋಸ ಆರೋಪ: ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ
ಕಾನೂನು ಮುರಿದರೆ ಅಪರಾಧಿಯಾಗಿ ಪರಿಗಣನೆ
ಶತಮಾನಗಳ ಹಿಂದೆ, ವಿಶ್ವ ನಾಯಕ ರೆಲ್ಲರೂ ಒಟ್ಟಾಗಿ ರೂಪಿಸಿರುವ “ಲಾ ಆಫ್ ಆರ್ಮ್ಡ್ ಕಾನ್ ಪ್ಲಿಕ್ಟ್’ ಎಂಬ ಕಾನೂನನ್ನು ಉಲ್ಲಂ ಸುವವರನ್ನು ಯುದ್ಧಾಪರಾಧಿ ಎಂದು ಕರೆಯಬಹುದು. ಕಾಲಾನುಕ್ರಮದಲ್ಲಿ ಈ ಕಾನೂನಿನಲ್ಲಿ ಹಲವಾರು ಬದಲಾವಣೆಗಳು, ಪರಿಷ್ಕರಣೆಗಳು ಆಗಿವೆ. 2ನೇ ಮಹಾಯುದ್ಧದ ಅನಂತರ ಏರ್ಪಟ್ಟ ಜಿನಿವಾ ಒಪ್ಪಂದಗಳನ್ನು ಇಂದಿಗೂ ಅನುಸರಿಸಬೇಕಿರುತ್ತದೆ.
ಜಿನಿವಾ ಒಪ್ಪಂದದ ಪ್ರಮುಖಾಂಶಗಳೇನು?
ಯುದ್ಧದಲ್ಲಿ ಪಾಲ್ಗೊಳ್ಳದ ಜನರ ರಕ್ಷಣೆಗೆ ಯುದ್ಧ ಮಾಡುವ ಎರಡೂ ರಾಷ್ಟ್ರಗಳು ಬದ್ಧರಾಗಿರಬೇಕು ಎಂಬುದು ಈ ಕಾನೂನಿನಲ್ಲಿರುವ ಪ್ರಮುಖ ನಿಯಮ. ವೈದ್ಯರು, ಶುಶ್ರೂಷಕಿಯರಿಗೆ, ಗಾಯಗೊಂಡ ಸೈನಿಕರಿಗೆ, ಕೈದಿಗಳಿಗೆ ಸೂಕ್ತವಾದ ರಕ್ಷಣೆ ನೀಡಬೇಕು ಎಂದೂ ಈ ಕಾನೂನಿನಲ್ಲಿ ಉಲ್ಲೇಖೀಸಲಾಗಿದೆ. ಇದಲ್ಲದೆ, ಎಂಥ ಪರಿಸ್ಥಿತಿಯಲ್ಲಿ ಯುದ್ಧ ಮಾಡಬೇಕು, ಯುದ್ಧ ಮಾಡುವುದೇ ಆದರೆ ಯಾವ ಶಸ್ತ್ರಾಸ್ತ್ರಗಳನ್ನು ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ನಿಯಮಗಳಿವೆ.
ಯಾವುದು ವಾರ್ಕ್ರೈಂ?
*ಉದ್ದೇಶಪೂರ್ವಕವಾಗಿ ನಗರಗಳನ್ನು ವ್ಯಾಪಕವಾಗಿ ಹಾನಿಗೊಳಿಸುವುದು.
*ಆವಶ್ಯಕತೆ ಇಲ್ಲದ ಕಡೆಯಲ್ಲೆಲ್ಲ ದಾಳಿ ನಡೆಸುವುದು.
*ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವುದು ಅಥವಾ ಅವರನ್ನು ಸೆರೆಹಿಡಿದು ಅವರನ್ನು ತಮ್ಮ ಗುರಾಣಿಯನ್ನಾಗಿ ಬಳಸುವುದು
*ಸೆರೆ ಹಿಡಿಯಲ್ಪಟ್ಟ ನಾಗರಿಕರನ್ನು ಕೊಲ್ಲುವುದು, ನಿರ್ನಾಮಗೊಳಿಸುವುದು, ಬಲವಂತವಾಗಿ ಬೇರೆಡೆ ರವಾನಿಸುವುದು, ಹಿಂಸಿಸುವುದು, ಅತ್ಯಾಚಾರ ಹಾಗೂ ಇನ್ನಿತರ ಹೇಯ ಕೃತ್ಯಗಳನ್ನು ಮಾಡುವುದು.
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್ಲಾಲ್ ನಂತಹ 20 ಸ್ಟಾರ್ಸ್ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.