ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…

ಈಕೆ ಅಮೇರಿಕಾ ಮೂಲದವಳಾಗಿದ್ದು ಹುಟ್ಟು ಕನಸುಗಾರ್ತಿ ಇವರಾಗಿದ್ದಾರೆ.

Team Udayavani, Sep 24, 2021, 3:23 PM IST

ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…

ರಾಧಿಕಾ ಕುಂದಾಪುರ

ಕನಸೊಂದು ಮಾಯೆಯಂತೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಕಾಣುವ ಕನಸು ಹೇಗಿರಬೇಕೆಂದರೆ ನಿದ್ದೆಯಲ್ಲೂ ನಮ್ಮನ್ನು ಎಚ್ಚರಿಸುವಂತಿರಬೇಕು. ಹಾಗೆಂದು ಪ್ರತಿಯೊಬ್ಬರು ತಮ್ಮ ಬಾಲ್ಯದ ವಯಸ್ಸಿನಲ್ಲಿ ಭವಿಷ್ಯತ್ತಿನ ಕನಸು ಕಾಣುತ್ತಲೇ ಇರುತ್ತಾರೆ. ಆದರೆ ಅದು ಕಾಲ ಕಳೆದಂತೆ ಬದಲಾಗುತ್ತಾ ಕೊನೆಗೊಂದು ಬೇರೆ ಆಯಾಮವನ್ನೇ ಪಡೆಯುತ್ತಾ ಜೀವನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಕನಸಿಗೂ ಒಲ್ಲದ ಮಗದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡು ಬಿಡುತ್ತಾರೆ.

ಹಾಗೆಂದು ಅವರು ಕಂಡ ಕನಸು ಈಡೇರಲು ಬೇಕಾದ ಪರಿಶ್ರಮ ಪಡುವಲ್ಲಿ ಅವರು ಹಿಂದಡಿ ಇಟ್ಟಿದ್ದೇ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗಲಿಲ್ಲವೆನ್ನಬಹುದು. ಇನ್ನೂ ಕೆಲವರಿಗೇ ತಾನು ಸಾಧಿಸಬೇಕೆನ್ನುವ ಹಂಬಲವಿರುತ್ತದೆ ಆದರೆ ಹೇಗೆ? ಏನು? ಮುಂತಾದವುಗಳಿಗೆ ಉತ್ತರ ಹುಡುಕದೆ ಸೋತು ಬಿಡುತ್ತಾರೆ. ವಯಸ್ಸಿನ ಕಾರಣ ನೀಡಿ ಕನಸಿನ ಬೆನ್ನಟ್ಟಲು ಸಾಧ್ಯವಾಗಿಲ್ಲ ಎನ್ನುವ ಗುಂಪು ಒಂದೆಡೆಯಾದರೆ ವಯಸ್ಸಿಗೂ ಕನಸಿಗೂ ಸಂಬಂಧವಿಲ್ಲ ಎಂಬಂತೆ ಬದುಕುವವರೂ ಇನ್ನೊಂದೆಡೆ ಅಂತವರ ಪಟ್ಟಿಯಲ್ಲಿ ನಾವು ವಾಲಿ ಫಂಕ್ ಅವರನ್ನು ಕಾಣಬಹುದಾಗಿದೆ.

ಈಕೆ ಅಮೇರಿಕಾ ಮೂಲದವಳಾಗಿದ್ದು ಹುಟ್ಟು ಕನಸುಗಾರ್ತಿ ಇವರಾಗಿದ್ದಾರೆ. ಫೆಬ್ರವರಿ 1, 1939ರಂದು ಜನಿಸಿದ್ದು ಬಾಲ್ಯದಿಂದಲೂ ವಿಮಾನ ಏರುವ ಕನಸಿನೊಂದಿಗೆ ತನ್ನ ಬದುಕನ್ನು ಕಳೆಯುತ್ತಿದ್ದರಂತೆ. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಆಟೋ ಮೆಕ್ಯಾನಿಕಲ್‌ ಕೋರ್ಸ್‌ ಕಲಿಯಲು ಆಸಕ್ತಿ ಈಕೆಗಿತ್ತು ಆದರೆ ಹುಡುಗಿ ಎಂಬ ಕಾರಣಕ್ಕೆ ಅವಳನ್ನು ಅಲ್ಲಿ ನಿರ್ಲಕ್ಷಿಸಿದ್ದು ಹತಾಶೆ ಭಾವನೆ ಈಕೆಯಲ್ಲಿ ಮೂಡಿಸಿತಂತೆ.

ಸ್ಟೀಫ‌ನ್‌ ಕಾಲೇಜಿನಲ್ಲಿ ಏವೀಯೇಷನ್‌ ಸಂಬಂಧಿತ ಕೋರ್ಸ್‌ಗೆ ಸೇರಿಕೊಂಡು ತನ್ನ 18ನೇ ವಯಸ್ಸಿನಲ್ಲಿ ಪೈಲಟ್‌ ಆಗಲು ಪರವಾನಿಗೆಯನ್ನು ಸಹ ಪಡೆಯುತ್ತಾಳೆ. ಸ್ಟೀಫ‌ನ್‌ ಕಾಲೇಜಿನಲ್ಲಿ ಅಲ್ಯುಮಿನಿಯಂ ಅಚೀವ್‌ ಮೆಂಟ್‌ ಅನ್ನು ಅತೀ ಸಣ್ಣ ವಯಸ್ಸಿಗೆ ಪಡೆದವರೆಂಬ ಹೆಗ್ಗಳಿಕೆಯೂ ಈಕೆಗಿದೆ. 1994ರಲ್ಲಿ ನ್ಯಾಷನಲ್‌ ಟ್ರಾನ್ಸ್‌ಫೋರ್ಟ್‌ ಸೇಫ್ ಬೋರ್ಡ್‌ಗೆ ಪ್ರಥಮ ಮಹಿಳಾ ಸೇಫ್ಟಿ ಸೇಫ‌ರ್‌ ಆಗಿ ನೇಮಕವಾಗುತ್ತಾರೆ. ಇಲ್ಲಿ 11ವರ್ಷ ಸೇವೆ ಸಲ್ಲಿಸಿ 450ಕ್ಕೂ ಅಧಿಕ ವಿಮಾನ ಅಪಘಾತ ತಡೆಯಲು ಯಶಸ್ವಿಯಾಗುತ್ತಾರೆ. ತಮ್ಮ 82ನೇ ವಯಸ್ಸಿನಲ್ಲಿ ಅಮೇಜಾನ್‌ ಸಂಸ್ಥೆಯ ಖಾಸಗಿ ಒಡೆತನದ ಬ್ಲೂ ಒರಿಜಿನ್‌ ಬಾಹ್ಯಾಕಾಶ ಪ್ರಯಾಣ ಮಾಡಿದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆ ಈಕೆಗಿದ್ದು ಈ ಕನಸು ಈಡೇರಿಕೆಗೆ 60ವರ್ಷ ಕಾದಿದ್ದರು. ಶ್ರಮಿಸಿದ್ದರು ಎಂಬುದು ಇಲ್ಲಿ ಸ್ಮರಿಸಲೇ ಬೇಕಾಗಿದೆ. ಹೀಗಾಗಿಯೇ ಕನಸು ಕಾಣುವುದು ಸುಲಭ ಅದರ ಈಡೇರಿಕೆಗಾಗಿ ಪಡುವ ಶ್ರಮ ಕಷ್ಟ. ಕನಸಿನ ಈಡೇರಿಕೆಗೆ ವಯಸ್ಸಿನ ಹಂಗು ತೊರೆದ ಈಕೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎನ್ನಬಹುದು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.