Ayodhya: ದಕ್ಷಿಣ ಕೊರಿಯನ್ನರ ಪಾಲಿಗೆ ಅಯೋಧ್ಯೆ ಮಾತೃಭೂಮಿ…ಯಾರೀಕೆ ರಾಜಕುಮಾರಿ ಸುರೀರತ್ನ!

ಬೆಳಕಿನ ಮೂಲವನ್ನು ಕಂಡುಹಿಡಿಯುವ ಸಾಹಸಕ್ಕೆ ಮುಂದಾಗಿದ್ದಳು!

ನಾಗೇಂದ್ರ ತ್ರಾಸಿ, Jan 13, 2024, 5:08 PM IST

Ayodhya: ದಕ್ಷಿಣ ಕೊರಿಯನ್ನರ ಪಾಲಿಗೆ ಅಯೋಧ್ಯೆ ಮಾತೃಭೂಮಿ…ಯಾರೀಕೆ ರಾಜಕುಮಾರಿ ಸುರೀರತ್ನ!

ಅಯೋಧ್ಯೆಯಲ್ಲಿ ಜನವರಿ 22ರಂದು ಭವ್ಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರರಾಗಿದ್ದಾರೆ. ಏತನ್ಮಧ್ಯೆ ಈ ಕಾತುರ ವಿದೇಶಿಯರಲ್ಲೂ ಹೆಚ್ಚಾಗಿದ್ದು, ದಕ್ಷಿಣ ಕೊರಿಯಾಕ್ಕೂ, ಉತ್ತರಪ್ರದೇಶದ ಅಯೋಧ್ಯೆಗೂ ವಿಶೇಷವಾದ ಸಂಬಂಧವಿದೆ. ರಾಮಜನ್ಮಸ್ಥಳವಾದ ಅಯೋಧ್ಯೆಗೂ, ದಕ್ಷಿಣ ಕೊರಿಯಾಕ್ಕೂ ವಿಶೇಷ ನಂಟಿನ ಹಿಂದೆ ರೋಚಕ ಕಥೆ ಇದೆ…

ಪ್ರತಿವರ್ಷ ಸಾವಿರಾರು ದಕ್ಷಿಣ ಕೊರಿಯನ್ನರು ಅಯೋಧ್ಯೆಗೆ ಆಗಮಿಸಿ ರಾಣಿ ಹೂ ಹ್ವಾಂಗ್‌ ಓಕ್‌ (ಸುರೀರತ್ನ) ಗೆ ಗೌರವ ಸಲ್ಲಿಸಿ ತೆರಳುತ್ತಾರೆ. ಇದಕ್ಕೆ ಕಾರಣ ಅಯೋಧ್ಯೆ ತಮ್ಮ ಪೂರ್ವಜರ ಮೂಲ ಎಂಬ ನಂಬಿಕೆ ದಕ್ಷಿಣ ಕೊರಿಯಾ ಜನರದ್ದಾಗಿದೆ.

ಯಾರೀಕೆ ರಾಜಕುಮಾರಿ ಸುರೀರತ್ನ:

ರಾಣಿ ಹೂ ಹ್ವಾಂಗ್‌ ಓಕ್‌ ಅಲಿಯಾಸ್‌ ರಾಜಕುಮಾರಿ ಸುರೀರತ್ನ ಅಯೋಧ್ಯೆಯ ರಾಣಿಯಾಗಿದ್ದಳು. ಅಯುತಾಯನ ರಾಜಕುಮಾರಿ ಸುರೀರತ್ನ ಅತೀ ಸೌಂದರ್ಯವತಿಯಾಗಿದ್ದಳು. ಅವಳು ರಾಜ ಸೂರ್ಯವರ್ಮನ್‌ ಮತ್ತು ರಾಣಿ ಮಯೂರ್ಚತನ ಮಗಳು. ಒಂದು ದಿನ ರಾಜಕುಮಾರಿ ಸುರೀರತ್ನಗೆ ಕನಸು ಬಿದ್ದಿದ್ದು, ಅದರಲ್ಲಿ ಆಕೆ ದೂರದ ದೇಶದಿಂದ ಬೆಳಕು ಬಂದಿದ್ದನ್ನು ಕಂಡಿದ್ದಳು. ಕೊನೆಗೆ ರಾಜಕುಮಾರಿ ಸುರೀರತ್ನ ಬೆಳಕಿನ ಮೂಲವನ್ನು ಕಂಡುಹಿಡಿಯುವ ಸಾಹಸಕ್ಕೆ ಮುಂದಾಗಿದ್ದಳು!

ಇದಕ್ಕಾಗಿ ಸುರೀರತ್ನ ತನ್ನ ಸಂಗಡಿರ ಜತೆ ಸಮುದ್ರಯಾನ ಕೈಗೊಂಡಿದ್ದಳು. ಸುದೀರ್ಘ ಪ್ರಯಾಣದ ನಂತರ ಆಕೆ ದಕ್ಷಿಣ ಕೊರಿಯಾ ಕರಾವಳಿ ಪ್ರದೇಶ ತಲುಪಿದ್ದಳು. ಆಗ ಅವಳ ವಯಸ್ಸು ಕೇವಲ 16 ವರ್ಷ!

ದಕ್ಷಿಣ ಕೊರಿಯಾಕ್ಕೆ ಬಂದ ಸುರೀರತ್ನಳನ್ನು ಅಲ್ಲಿನ ಸ್ಥಳೀಯ ರಾಜ ಕಿಮ್‌ ಸುರೋ ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದ. ತನ್ನನ್ನು ವಿವಾಹವಾಗಬೇಕೆಂದು ಕೇಳಿಕೊಂಡಾಗ ಸುರೀರತ್ನ ಅದಕ್ಕೆ ಒಪ್ಪಿಗೆ ಸೂಚಿಸಿ ರಾಜ ಕಿಮ್‌ ಸುರೋನನ್ನು ಕ್ರಿ.ಶ.48ರಲ್ಲಿ ವಿವಾಹವಾಗಿದ್ದಳು.

ಚೀನಾ ಭಾಷೆಯ ಕೆಲವು ಇತಿಹಾಸದ ಪ್ರಕಾರ, ನಿನ್ನ ಮಗಳು ಸುರೀರತ್ನಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸು, ಅಲ್ಲಿ ರಾಜನನ್ನು ವಿವಾಹವಾಗಲಿ ಎಂದು ಅಯೋಧ್ಯೆಯ ರಾಜನಿಗೆ ಕನಸಲ್ಲಿ ದೇವರು ಬಂದು ಆದೇಶ ನೀಡಿದ್ದ ಎಂದು ತಿಳಿಸಿದೆ.

ಸುರೀರತ್ನ ಮತ್ತು ಸುರೋ ದಂಪತಿಗೆ ಹತ್ತು ಗಂಡು ಮಕ್ಕಳಿದ್ದು, ಈ ದಂಪತಿ ಸುಮಾರು 150ಕ್ಕೂ ಅಧಿಕ ವರ್ಷಗಳ ಕಾಲ ಬದುಕಿದ್ದರು ಎಂದು ನಂಬಲಾಗಿದೆ. ದಕ್ಷಿಣ ಕೊರಿಯಾ ಸುರೋ ರಾಜನನ್ನು ವಿವಾಹವಾದ ನಂತರ ಸುರೀರತ್ನ ಹೆಸರನ್ನು ಹೂ ಹ್ವಾಂಗ್‌ ಓಕ್‌ ಎಂದು ಬದಲಾಯಿಸಲಾಯಿತು!

ಅಯೋಧ್ಯೆ ಪಾರ್ಕ್‌ ನಲ್ಲಿದೆ ರಾಣಿ ಹೂ ಹ್ವಾಂಗ್‌ ಓಕ್‌ ಸ್ಮಾರಕ!

ದಕ್ಷಿಣ ಕೊರಿಯಾ ರಾಣಿ ಹೂ ಹ್ವಾಂಗ್‌ ಓಕ್‌ ಸ್ಮಾರಕವನ್ನು ಅಯೋಧ್ಯೆಯಲ್ಲಿ 2001ರಲ್ಲಿ  ಸಾಂಕೇತಿಕವಾಗಿ ಉದ್ಘಾಟಿಸಲಾಗಿತ್ತು. ಓಕ್‌ ಸ್ಮಾರಕವನ್ನು ವಿಸ್ತರಣೆ ಮಾಡಬೇಕೆಂದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಮೂನ್‌ ಜಾಯೆ ಅವರ ನೇತೃತ್ವದಲ್ಲಿ MoUಗೆ ಸಹಿ ಹಾಕಲಾಗಿತ್ತು. 2022ರಲ್ಲಿ ರಾಣಿಯ ಸುಂದರ ಸ್ಮಾರಕದ ಪಾರ್ಕ್‌ ಅನ್ನು ಉದ್ಘಾಟಿಸಲಾಗಿತ್ತು.

ಸುರೀರತ್ನ ಸ್ಮಾರಕ ಪಾರ್ಕ್‌ ಅನ್ನು ಅಯೋಧ್ಯೆಯ ಸರಯೂ ನದಿ ತಟದ ಸಮೀಪ ನಿರ್ಮಿಸಲಾಗಿದೆ. ಇದಕ್ಕಾಗಿ 21 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸ್ಮಾರಕದ ಆಗ್ನೇಯ ಭಾಗದಲ್ಲಿ ರಾಣಿ ಹೂ ಹ್ವಾಂಗ್‌ ಓಕ್‌ ಪ್ರತಿಮೆ ಇದ್ದು, ಈಶಾನ್ಯ ಭಾಗದಲ್ಲಿ ರಾಜ ಕಿಮ್‌ ಸುರೋ ಪ್ರತಿಮೆ ಇದೆ.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ಸುಮಾರು 60 ಲಕ್ಷ ರಾಜ ಸುರೋ ವಂಶಸ್ಥ ಜನರು ಅಯೋಧ್ಯೆಯನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುತ್ತಾರೆ. 2019ರಲ್ಲಿ ಭಾರತ ಸರ್ಕಾರ ರಾಣಿಯ ಗೌರವಾರ್ಥವಾಗಿ 25 ರೂಪಾಯಿ  ಹಾಗೂ 5 ರೂಪಾಯಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.