Womens T-20 World Cup: ಸೆಮಿಫೈನಲ್‌ ಪ್ರವೇಶಿಸಿದ ನ್ಯೂಜಿಲ್ಯಾಂಡ್‌; ಭಾರತ ಹೊರಕ್ಕೆ

ಪಾಕಿಸ್ಥಾನ ವಿರುದ್ಧ 54 ರನ್‌ಗಳ ಗೆಲುವು ಸಾಧಿಸಿದ ಕಿವೀಸ್‌, ಭಾರತದ ಕನಸು ಭಗ್ನ

Team Udayavani, Oct 15, 2024, 12:01 AM IST

NZ–Pak

ದುಬಾೖ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ “ಎ’ ಬಣದ ಅಂತಿಮ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನು 54 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದ ನ್ಯೂಜಿಲ್ಯಾಂಡ್‌ ತಂಡವು ಸೆಮಿಫೈನಲ್‌ ಹಂತಕ್ಕೇರಿತು.

ಬೌಲರ್‌ಗಳು ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ಪಾಕಿಸ್ಥಾನ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್‌ ತಂಡವು 6 ವಿಕೆಟಿಗೆ 110 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಆರಂಭದಿಂದಲೇ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಪಾಕಿಸ್ಥಾನ 11.4 ಓವರ್‌ಗಳಲ್ಲಿ ಕೇವಲ 56 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ತಂಡದ ಮುನೀಬಾ ಅಲಿ ಮತ್ತು ನಾಯಕಿ ಫಾತಿಮಾ ಸನಾ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು. ಈ ಗೆಲುವಿನಿಂದ ನ್ಯೂಜಿಲ್ಯಾಂಡ್‌ ತಾನಾಡಿದ ನಾಲ್ಕು ಪಂದ್ಯಗಳಿಂದ ಆರಂಕ ಪಡೆದು ದ್ವಿತೀಯ ತಂಡವಾಗಿ ಸೆಮಿಫೈನಲಿಗೇರಿದೆ.

ಬಣದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಆಸ್ಟ್ರೇಲಿಯ ತಂಡವು ಅಜೇಯ ತಂಡವಾಗಿ ಸೆಮಿಫೈನಲಿಗೇರಿತ್ತು. ಈ ಮಹತ್ವದ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ಥಾನ ಜಯ ಸಾಧಿಸಿದ್ದರೆ ಭಾರತಕ್ಕೆ ಸೆಮಿಫೈನಲಿಗೇರುವ ಅವಕಾಶವೊಂದಿತ್ತು. ನ್ಯೂಜಿಲ್ಯಾಂಡ್‌ ತಂಡ 110 ರನ್‌ ಗಳಿಸಿದಾಗ ಪಾಕಿಸ್ಥಾನ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ನ್ಯೂಜಿಲ್ಯಾಂಡಿನ ನಿಖರ ದಾಳಿಗೆ ಪಾಕಿಸ್ಥಾನ ನೆಲಕಚ್ಚಿದರಿಂದ ಭಾರತ ಸೆಮಿಫೈನಲಿಗೇರುವ ಆಸೆ ದೂರ ಆಯಿತು.

ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿತು. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸೂಜಿ ಬೇಟ್ಸ್‌, ಸೋಫಿ ಡಿವೈನ್‌ ಮತ್ತು ಬ್ರೂಕ್‌ ಹಾಲಿಡೇ ಉತ್ತಮ ನಿರ್ವಹಣೆ ನೀಡಿದರು. ಬೌಲಿಂಗ್‌ನಲ್ಲಿ ನಿಖರ ದಾಳಿ ಸಂಘಟಿಸಿದ ಅಮೇಲಿಯಾ ಕೆರ್ರ 14 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು. ಎಡೆನ್‌ ಕಾರ್ಸನ್‌ 7 ರನ್ನಿಗೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 110 (ಸೂಜಿ ಬೇಟ್ಸ್‌ 28, ಬ್ರೂಕ್‌ ಹಾಲಿಡೇ 22, ನಸ್ರಾ ಸಂಧು 18ಕ್ಕೆ 3); ಪಾಕಿಸ್ಥಾನ 11.4 ಓವರ್‌ಗಳಲ್ಲಿ 56 (ಮುನೀಬಾ ಅಲಿ 15, ಫಾತಿಮಾ ಸನಾ 21, ಅಮೇಲಿಯಾ ಕೆರ್ರ 14ಕ್ಕೆ 3, ಎಡೆನ್‌ ಕಾರ್ಸನ್‌ 7ಕ್ಕೆ 2).

ಟಾಪ್ ನ್ಯೂಸ್

nobel-award

Nobel Award: ಅಮೆರಿಕದ ಮೂವರು ಪ್ರಾಧ್ಯಾಪಕರಿಗೆ ಒಲಿದ ಅರ್ಥಶಾಸ್ತ್ರ ನೊಬೆಲ್‌

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

SACHIN

America: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ಗೆ ಜೆರ್ಸಿ ಗೌರವ

High Court: ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ: ಮಧ್ಯಾಂತರ ತಡೆ

High Court: ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ: ಮಧ್ಯಾಂತರ ತಡೆ

Ben-Stokes

Pakistan-England Test: ಇಂಗ್ಲೆಂಡ್‌ ತಂಡಕ್ಕೆ ಮರಳಿದ ಬೆನ್‌ ಸ್ಟೋಕ್ಸ್‌

High Court: ಎಚ್‌ಡಿಕೆ ವಿರುದ್ಧದ ಎಫ್ಐಆರ್‌ ವಿಚಾರಣೆ ಅ. 21ಕ್ಕೆ ಮುಂದೂಡಿಕೆ

High Court: ಎಚ್‌ಡಿಕೆ ವಿರುದ್ಧದ ಎಫ್ಐಆರ್‌ ವಿಚಾರಣೆ ಅ. 21ಕ್ಕೆ ಮುಂದೂಡಿಕೆ

KEA: ಗ್ರಾಮ ಆಡಳಿತಾಧಿಕಾರಿ: ಕನ್ನಡ ಕಡ್ಡಾಯ ಫ‌ಲಿತಾಂಶ ಪ್ರಕಟ

KEA: ಗ್ರಾಮ ಆಡಳಿತಾಧಿಕಾರಿ: ಕನ್ನಡ ಕಡ್ಡಾಯ ಫ‌ಲಿತಾಂಶ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SACHIN

America: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ಗೆ ಜೆರ್ಸಿ ಗೌರವ

Ben-Stokes

Pakistan-England Test: ಇಂಗ್ಲೆಂಡ್‌ ತಂಡಕ್ಕೆ ಮರಳಿದ ಬೆನ್‌ ಸ್ಟೋಕ್ಸ್‌

ranaji-Trophy

Ranaji Trophy: ಮಧ್ಯಪ್ರದೇಶ- ಕರ್ನಾಟಕ ಪಂದ್ಯ ಡ್ರಾ

T20-Womens

Womens T-20 World Cup: ಇಂದು ಇಂಗ್ಲೆಂಡಿಗೆ ವೆಸ್ಟ್‌ ಇಂಡೀಸ್‌ ಸವಾಲು

1-goutham-gambhir

Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nobel-award

Nobel Award: ಅಮೆರಿಕದ ಮೂವರು ಪ್ರಾಧ್ಯಾಪಕರಿಗೆ ಒಲಿದ ಅರ್ಥಶಾಸ್ತ್ರ ನೊಬೆಲ್‌

1-alvas

Yoga Competition; ಆಳ್ವಾಸ್‌ ಕಾಲೇಜಿನ ಐವರು ರಾಷ್ಟ್ರಮಟ್ಟಕ್ಕೆ

1-koraga

Mangaluru; ಅಪ್ಪಿ ಕೊರಗ ಅವರಿಗೆ ‘ಸಂಜೀವಿನಿ ಪ್ರಶಸ್ತಿ’

1-shiv

Koragajja; ಕುತ್ತಾರು ಕೊರಗಜ್ಜನ ಕಟ್ಟೆಗೆ ನಟ ಶಿವರಾಜ್‌ ಕುಮಾರ್‌ ಭೇಟಿ

1-ratha

Mangaluru; ರಥಬೀದಿಯ ಶಾರದಾ ಮಹೋತ್ಸವ ಭಕ್ತಿ, ಸಂಭ್ರಮದಿಂದ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.