World Tourism Day 2024: ಟ್ರಕ್ಕಿಂಗ್ ಪಾಯಿಂಟ್-ನಾ ಕಂಡ ‘ನ’ರಸಿಂಹಗ’ಡ’!
ಕುಡಿಯಲು ಬೇಕಾದ ನೀರು, ಆಹಾರ ಮರೆಯದೇ ತನ್ನಿ.,
Team Udayavani, Sep 27, 2024, 10:50 AM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರಕ್ಕೆ ತಲೆಯೆತ್ತಿ ನಿಂತಿರುವ ಇತಿಹಾಸ ಪ್ರಸಿದ್ಧ ಶಿಲೆಯೇ ನರಸಿಂಹಗಡ. ಗಡಾಯಿಕಲ್ಲು ಎಂದೇ ಜನಜನಿತವಾಗಿ ಗುರುತಿಸಲ್ಪಡುವ ಈ ಬೃಹದಾಕಾರದ ಶಿಲೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಸ್ತಿತ್ವದಲ್ಲಿರುವುದೇ ವೈಜ್ಞಾನಿಕ ಪ್ರಪಂಚಕ್ಕೆ ಅಚ್ಚರಿ ಮೂಡಿಸುತ್ತದೆ.
ಇದರ ಇತಿಹಾಸ ಎಷ್ಟು ರೋಮಾಂಚಕಾರಿಯಾಗಿದೆಯೋ, ಅದರ ನೋಟವೂ ನಯನ ಮನೋಹರ. ಕೃಷ್ಣ ವರ್ಣದ ಶಿಲೆ, ಒಂದೊಂದು ದಿಕ್ಕಿನಿಂದಲೂ ಒಂದೊಂದು ಬಗೆಯ ಆಕಾರವನ್ನು ಪ್ರದರ್ಶಿಸುವ ಬೃಹತ್ ಮಾಯಾವಿಯಂತೆಯೂ ಭಾಸವಾಗುತ್ತದೆ ಎಂದರೂ ಉತ್ಪ್ರೇಕ್ಷೆಯಾಗಲಾರದು.
‘ಗಡಾಯಿ’ ಎಂದರೆ ಬೃಹತ್ ಎಂದರ್ಥ. ಈ ಗಡಾಯಿಕಲ್ಲು ಚಾರಣ ಪ್ರಿಯರಿಗೆ ಸ್ವರ್ಗವಿದ್ದಂತೆ. 1,000ಕ್ಕೂ ಮಿಕ್ಕಿ ಮೆಟ್ಟಿಲುಗಳನ್ನು ಹೊಂದಿದ್ದರೂ, ಎಣಿಸಿದಷ್ಟು ಸುಲಭದಲ್ಲಿ ನೆಲಕಡಲೆ ತಿಂದು ಕೈತೊಳೆದಂತೆ ಖಂಡಿತವಾಗಿ ಅಲ್ಲ. ಪ್ರತೀ ಮೆಟ್ಟಿಲುಗಳ ಆಕಾರವೂ, ಎತ್ತರವೂ ಒಂದಕ್ಕಿಂತ ಒಂದು ಭಿನ್ನವಾಗಿದೆ.
ಚಾರಣಕ್ಕೆ ಸೆಪ್ಟೆಂಬರ್ ನಿಂದ ಮೇ ತಿಂಗಳವರೆಗೆ ಉತ್ತಮ ಸಮಯ. ಕುಡಿಯಲು ಬೇಕಾದ ನೀರು, ಆಹಾರ ಮರೆಯದೇ ತನ್ನಿ., ಏಕೆಂದರೆ, ಮೇಲೆ ಮೊಬೈಲ್ ನೆಟ್ವರ್ಕ್ ಬಿಟ್ಟು ಬೇರೆ ಇನ್ನೇನೂ ಲಭಿಸದು.
ಇಲ್ಲಿಗೆ ಹೋಗುವುದು ಹೇಗೆ?
ಸ್ವಂತ ವಾಹನ ಅತೀ ಉತ್ತಮ. ಬಸ್ಸಿನಲ್ಲಿ ಬರುವವರಾಗಿದ್ದಲ್ಲಿ, ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ ಕಿಲ್ಲೂರು ಕಡೆಗೆ 15 ನಿಮಿಷಕ್ಕೊಂದು ಬಸ್ಸಿನ ಸೌಲಭ್ಯವಿದೆ. ‘ಮಂಜೊಟ್ಟಿ’ ಎನ್ನುವ ನಿಲ್ದಾಣದಲ್ಲಿ ಇಳಿದು 2 ಕಿ.ಮೀ. ರಿಕ್ಷಾದಲ್ಲಿ ಅಥವಾ ನಡೆಯುತ್ತಲೂ ಸಾಗಬಹುದು.
ನೆನಪಿಡಿ: ಯಾವುದೇ ಪ್ರವಾಸಿತಾಣಕ್ಕೆ ಹೋದರೂ ಜವಾಬ್ದಾರಿಯುತವಾಗಿ ವರ್ತಿಸಿ, ಮಾಲಿನ್ಯ ಮಾಡದೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ.
ಅಭಿಲಾಷ್ ಕೆ. ಎಸ್.
ಸಹಾಯಕ ಪ್ರಾಧ್ಯಾಪಕರು
ಸಸ್ಯಶಾಸ್ತ್ರ ವಿಭಾಗ
ಎಸ್. ಡಿ. ಎಮ್. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!
World Tourism Day:ಚಾರಣ- ಇದು ಮಲೆಕುಡಿಯರ ಊರಿನ ನಡುವಿನ ನಿಗೂಢ ಜಲಪಾತ
World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?
World Tourism Day 2024: “ಕರ್ನಾಟಕ ಒಂದು ರಾಜ್ಯ…ಇಲ್ಲಿದೆ ವಿಸ್ಮಯದ ಹಲವು ಜಗತ್ತು”
Tour:ವಿಜಯನಗರ ಅರಸರ ಕಾಲದ ಪ್ರಮುಖ ವ್ಯಾಪಾರ ಕೇಂದ್ರ ಈ ಪ್ರಕೃತಿ ಸೌಂದರ್ಯದ ಮಿರ್ಜಾನ್ ಕೋಟೆ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!
Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ
ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!
KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ
World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.