![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-415x249.jpg)
Encounter: ವಿವಾಹ ನಿಶ್ಚಯವಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಗುಂಡೇಟಿನಿಂದ ಮೃತ್ಯು!
ಒಂದು ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯ ವೇಳೆ ಸಚಿನ್ ಗೆ ಗುಂಡು ತಗುಲಿತ್ತು.
Team Udayavani, Dec 26, 2023, 1:27 PM IST
![Encounter: ವಿವಾಹ ನಿಶ್ಚಯವಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಗುಂಡೇಟಿನಿಂದ ಮೃತ್ಯು!](https://www.udayavani.com/wp-content/uploads/2023/12/Cop-620x381.jpg)
ಲಕ್ನೋ: ಪೊಲೀಸ್ ಕಾನ್ಸ್ ಟೇಬಲ್ ಸಚಿನ್ ರಾಟೆ ಕುಟುಂಬವು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಆದರೆ ಇದೀಗ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಅದಕ್ಕೆ ಕಾರಣ ಕಳೆದ ರಾತ್ರಿ ನಟೋರಿಯಸ್ ಕ್ರಿಮಿನಲ್ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ ಟೇಬಲ್ ಸಚಿನ್ ರಾಟೆ (30ವರ್ಷ) ಕೊನೆಯುಸಿರೆಳೆದಿದ್ದಾರೆ.!
ಇದನ್ನೂ ಓದಿ:ಮಕ್ಕಳಲ್ಲಿ ಕಂಡುಬರುವ ಹೊಟ್ಟೆನೋವಿನ ಕುರಿತು ಖ್ಯಾತ ವೈದ್ಯರು ಹೇಳುವುದೇನು ? |
ಸುಮಾರು 20 ಪಕ್ಷರಣಗಳಲ್ಲಿ ಬೇಕಾಗಿದ್ದ ಕೊಲೆ ಆರೋಪಿ ಅಶೋಕ್ ಯಾದವ್ ಬಂಧನಕ್ಕಾಗಿ ತೆರಳಿದ್ದ ನಾಲ್ವರು ಪೊಲೀಸ್ ತಂಡದ ಜತೆ ಸಚಿನ್ ಕೂಡಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಶೋಕ್ ಯಾದವ್ ಹಾಗೂ ಆತನ ಪುತ್ರ ಅಭಯ್ ಯಾದವ್ ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಒಂದು ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯ ವೇಳೆ ಸಚಿನ್ ಗೆ ಗುಂಡು ತಗುಲಿತ್ತು.
ಗುಂಡಿನ ಚಕಮಕಿ ಮುಂದುವರಿದ ಪರಿಣಾಮ ಪೊಲೀಸರು ಸ್ಥಳಕ್ಕೆ ಹೆಚ್ಚಿನ ಪಡೆಯನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭಾರೀ ಪ್ರಮಾಣದ ಪೊಲೀಸರು ಆಗಮಿಸಿದ್ದು,ನಂತರ ಅಶೋಕ್ ಯಾದವ್ ಮತ್ತು ಅಭಯ್ ಯಾದವ್ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿತ್ತು ಎಂದು ವರದಿ ವಿವರಿಸಿದೆ.
ಗುಂಡೇಟು ತಗುಲಿದ್ದ ಪೊಲೀಸ್ ಕಾನ್ಸ್ ಟೇಬಲ್ ರಾಟೆಯನ್ನು ಕಾನ್ಪುರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅತೀಯಾದ ರಕ್ತಸ್ತಾವದ ಪರಿಣಾಮ ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲತಃ ಮುಜಾಫರ್ ನಗರದ ನಿವಾಸಿಯಾಗಿರುವ ಸಚಿನ್ ರಾಟೆ 2019ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. 2024ರ ಫೆಬ್ರುವರಿ 5ರಂದು ಮಹಿಳಾ ಕಾನ್ಸ್ ಟೇಬಲ್ ಜತೆ ವಿವಾಹ ನಿಶ್ಚಯವಾಗಿತ್ತು. ಈ ನಿಟ್ಟಿನಲ್ಲಿ ಕುಟುಂಬ ಸದಸ್ಯರು ವಿವಾಹ ಸಿದ್ಧತೆಯಲ್ಲಿದ್ದರು. ಆದರೆ ಇದೀಗ ಶೋಕಾಚರಣೆಯಲ್ಲಿ ಮುಳುಗುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-PTI](https://www.udayavani.com/wp-content/uploads/2024/07/1-PTI-150x91.jpg)
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
![1-anurag](https://www.udayavani.com/wp-content/uploads/2024/07/1-anurag-150x89.jpg)
Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್
![1-a-baaba](https://www.udayavani.com/wp-content/uploads/2024/07/1-a-baaba-150x84.jpg)
Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 121ಕ್ಕೆ
![1993 Mumbai riot accused arrested after 31 years](https://www.udayavani.com/wp-content/uploads/2024/07/riot-150x83.jpg)
Mumbai; 31 ವರ್ಷ ಬಳಿಕ ಸೆರೆಸಿಕ್ಕ 1993 ಮುಂಬೈ ಗಲಭೆ ಆರೋಪಿ
MUST WATCH
ಹೊಸ ಸೇರ್ಪಡೆ
![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-150x90.jpg)
SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
![1-mangaluru](https://www.udayavani.com/wp-content/uploads/2024/07/1-mangaluru-150x97.jpg)
Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.