![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 3, 2023, 5:41 PM IST
ನವದೆಹಲಿ: ಭಾರತ-ಆಸ್ಟ್ರೇಲಿಯ ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಮುಗ್ಗರಿಸಿದೆ. ಆದರೆ ಇಂದೋರ್ ಪಿಚ್ನ ಸ್ಪಿನ್ ಮೋಡಿ ಇತ್ತಂಡಗಳ ಆಟಗಾರರನ್ನೂ ಬಾಧಿಸಿತ್ತು. ಈದೀಗ ಮೂರೇ ದಿನದಲ್ಲಿ ಪಂದ್ಯ ಮುಗಿದಿದ್ದರೂ ನೆಟ್ಟಿಗರು ಈ ಪಿಚ್ ಬಗೆಗಿನ ಚರ್ಚೆಯನ್ನು ಇನ್ನೂ ಬಿಟ್ಟಂತಿಲ್ಲ.
ಇಂದೋರ್ ಪಿಚ್ ಬಗ್ಗೆ ಕ್ರಿಕೆಟ್ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗಳನ್ನು ನಡೆಸುತ್ತಿರುವ ಮಧ್ಯೆಯೇ ಪ್ರಖ್ಯಾತ ಆಹಾರ ಡೆಲಿವರಿ ಕಂಪೆನಿ ಝೋಮ್ಯಾಟೋ ಎಂದಿನಂತೆ ತನ್ನ ಫನ್ನಿ ಕಾಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದಿದೆ.
ಇಂದೋರ್ನ ಡ್ರೈ ಪಿಚ್ನಿಂದಾಗಿ ಪಂದ್ಯ ಅನಿರೀಕ್ಷಿತ ತಿರುವು ಪಡೆದುಕೊಂಡು ಭಾರತದ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿತ್ತು.
ಆದರೆ ಈ ನಡುವೆಯೂ ಟ್ವಿಟರ್ನಲ್ಲಿ ಪಿಚ್ ಬಗ್ಗೆ ಆಹಾರ ಸಂಬಂಧಿ ಟ್ವೀಟ್ ಮಾಡಿರುವ ಝೊಮ್ಯಾಟೋ ಇಂದೋರ್ ಪಿಚ್ನ್ನು ಭಾರತದ ಪ್ರಸಿದ್ಧ ಸಿಹಿ ತಿಂಡಿ ಜಿಲೇಬಿಗೆ ಹೋಲಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ.
there is more turn on this pitch than on a jalebi #IndvsAus
— zomato (@zomato) March 1, 2023
ಝೋಮ್ಯಾಟೋ ಮಾಡಿರುವ ವೈರಲ್ ಟ್ವೀಟ್ನಲ್ಲಿ ʻಈ ಪಿಚ್ನಲ್ಲಿ ಜಿಲೇಬಿಯಲ್ಲಿರುವುದಕ್ಕಿಂತಲೂ ಹೆಚ್ಚು ಸುತ್ತುಗಳಿದ್ದವುʼ ಎಂದು ಹೇಳಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದ್ದು ಸುಮಾರು 30.3 ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿದೆ. ಈ ಟ್ವೀಟ್ಗೆ ರಿಪ್ಲೈ ಮಾಡಿರುವ ಟಾಟಾ ಪ್ಲೇ ಬಿಂಗ್, ʻಆದರೂ ಸಾಲು ಸಾಲು ವಿಕೆಟ್ ಬೀಳುತ್ತಿದ್ದದ್ದು ಅಷ್ಟು ಸಿಹಿಯಾಗಿರಲಿಲ್ಲʼ ಎಂದಿದೆ.
Though the fall of wickets wasn’t as sweet!🥲
— Tata Play Binge (@TataPlayBinge) March 1, 2023
ಇದನ್ನೂ ಓದಿ : ಇಂದೋರ್ ಟೆಸ್ಟ್ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಆಸೀಸ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.