“108” ಟೆಂಡರ್‌ ಗೋಲ್‌ಮಾಲ್‌: ಜೀವ ರಕ್ಷಕರ ಸ್ಥಿತಿ ಶೋಚನೀಯ!

-ಟೆಂಡರ್‌ಗೆ ಅನರ್ಹವಾಗಿರುವ ಜಿವಿಕೆ-ಇಎಂಆರ್‌ಐಗೆ ಮತ್ತೆ 108 ಜವಾಬ್ದಾರಿ

Team Udayavani, Jul 10, 2023, 7:47 AM IST

108

ಬೆಂಗಳೂರು: ರಾಜ್ಯದಲ್ಲಿ ತುರ್ತು ಅನಾರೋಗ್ಯಕ್ಕೀಡಾದವರ ಜೀವ ರಕ್ಷಿಸುವ 108 ಆ್ಯಂಬುಲೆನ್ಸ್‌ ನಿರ್ವಹಣೆಯಲ್ಲಿ ಭಾರೀ ಗೋಲ್‌ಮಾಲ್‌ ನಡೆದಿದ್ದು, ಮತ್ತೂಂದೆಡೆ ವೇತನವಿಲ್ಲದೇ ಜೀವರಕ್ಷಕರ ಸ್ಥಿತಿಯೂ ಶೋಚನೀಯವಾಗಿದೆ.

ಸರಕಾರದ 108-ಆರೋಗ್ಯ ಕವಚ ಯೋಜನೆ ನಿರ್ವಹಿಸುತ್ತಿರುವ ಹೈದರಾಬಾದ್‌ ಮೂಲದ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಕರ್ನಾಟಕದಲ್ಲಿ ಒಟ್ಟು 711 ಆ್ಯಂಬುಲೆನ್ಸ್‌ಗಳನ್ನು 108 ಸೇವೆಗೆ ಮೀಸಲಿಟ್ಟಿದೆ. ಈ ಪೈಕಿ ಕನಿಷ್ಠ 650 ಆ್ಯಂಬುಲೆನ್ಸ್‌ಗಳು (ಶೇ.90) ಸಾರ್ವಜನಿಕರ ಲಭ್ಯತೆಗೆ ಇರಬೇಕೆಂಬ ನಿಯಮವಿದೆ. ಆದರೆ 400 ಆ್ಯಂಬುಲೆನ್ಸ್‌ಗಳು ಮಾತ್ರ ಸೇವೆಯಲ್ಲಿದ್ದು, ತುರ್ತು ಅನಾರೋಗ್ಯಕ್ಕೀಡಾದ ಸಾವಿರಾರು ರೋಗಿಗಳು ಆ್ಯಂಬುಲೆನ್ಸ್‌ ಸಿಗದೆ ಜೀವನ್ಮರಣದ ನಡುವೆ ಹೋರಾಡುವಂತಾಗಿದೆ. ಈ ನಡುವೆ ಗುತ್ತಿಗೆ ಆಧಾರದಲ್ಲಿ 108 ಆ್ಯಂಬುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,500 ನೌಕರರಿಗೆ ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ 4 ತಿಂಗಳ ವೇತನ ಸಿಗದೆ ಸಂಕಷ್ಟದಲ್ಲಿದ್ದಾರೆ.

ಅನರ್ಹ ಕಂಪೆನಿಗೆ ಮತ್ತೆ ಜವಾಬ್ದಾರಿ
2008ರಲ್ಲಿ 108 ಆ್ಯಂಬುಲೆನ್ಸ್‌ ಸೇವೆಯ ಟೆಂಡರನ್ನು 5 ವರ್ಷಗಳ ಅವಧಿಗೆ ಜಿವಿಕೆ-ಇಎಂಆರ್‌ಐ ಕಂಪೆನಿಗೆ ನೀಡಿ ಆರೋಗ್ಯ ಇಲಾಖೆಯು ಒಪ್ಪಂದ (ಎಂಒಯು) ಮಾಡಿಕೊಂಡಿತ್ತು. 2013ರಲ್ಲಿ ಟೆಂಡರ್‌ ಕರೆಯದೆ ಇದೇ ಕಂಪೆನಿಗೆ ಆ್ಯಂಬುಲೆನ್ಸ್‌ ಸೇವೆಯ ಜವಾಬ್ದಾರಿ ವಹಿಸಿ 5 ವರ್ಷಗಳ ಅವಧಿಗೆ ಟೆಂಡರ್‌ ವಿಸ್ತರಿಸಲಾಗಿತ್ತು. 2017ರಲ್ಲಿ ಜಿವಿಕೆ ಕಂಪೆನಿ 108 ಆ್ಯಂಬುಲೆನ್ಸ್‌ ಸೇವೆ ಹೆಸರಿನಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್‌ ಎಸಗಿರುವುದು ದೃಢಪಟ್ಟ ಬೆನ್ನಲ್ಲೇ ಈ ಕಂಪೆನಿ ಟೆಂಡರ್‌ ಪಡೆಯಲು ಅನರ್ಹ ಎಂದು ಪರಿಗಣಿಸಲಾಗಿತ್ತು. ಆದರೆ, ತಾತ್ಕಾಲಿಕವಾಗಿ ಬೇರೆ ಕಂಪೆನಿ ಟೆಂಡರ್‌ ಪಡೆಯುವವರೆಗೂ ಜಿವಿಕೆಯೇ ಈ ಸೇವೆ ಮುಂದುವರಿಸಿಕೊಂಡು ಹೋಗುವಂತೆ ಸರಕಾರ ಸೂಚಿಸಿತ್ತು.

ಟೆಂಡರ್‌ಗೆ ಸಮಸ್ಯೆಯಾದ ಬಿಗಿ ಷರತ್ತು
2022ರ ಮಾರ್ಚ್‌ನಲ್ಲಿ 108 ಆ್ಯಂಬುಲೆನ್ಸ್‌ ಸೇವೆ ನಿರ್ವಹಣೆಗೆ 1,800 ಕೋಟಿ ರೂ.ಟೆಂಡರ್‌ ಕರೆದರೂ ಸರಕಾರ ವಿಧಿಸಿದ್ದ ಬಿಗಿ ಷರತ್ತುಗಳಿಂದಾಗಿ ಕಂಪೆನಿಗಳು ಬಿಡ್‌ಗೆ ಹಿಂದೇಟು ಹಾಕಿವೆ. ಟೆಂಡರ್‌ನಲ್ಲಿ ಭಾಗವಹಿಸುವ ಕಂಪೆನಿಗಳು ಕನಿಷ್ಠ 6 ವರ್ಷ ಆ್ಯಂಬುಲೆನ್ಸ್‌ ಸೇವೆ ಸಲ್ಲಿಸಿರಬೇಕು. 500 ಆ್ಯಂಬುಲೆನ್ಸ್‌ ನಿರ್ವಹಿಸಿದ ಅನುಭವ, ವಾರ್ಷಿಕವಾಗಿ 250 ಕೋಟಿ ರೂ. ವಹಿವಾಟು, 100 ಕೋಟಿ ರೂ. ಮುಂಗಡವಾಗಿ ನೀಡುವುದು ಎಂಬಿತ್ಯಾದಿ ಷರತ್ತುಗಳನ್ನು ಸರಕಾರ ವಿಧಿಸಿತ್ತು. ಹೀಗಾಗಿ ಬಿಡ್‌ನ‌ಲ್ಲಿ ಪಾಲ್ಗೊಂಡಿದ್ದ 4 ಕಂಪೆನಿಗಳು ಟೆಂಡರ್‌ ಪಡೆಯುವಲ್ಲಿ ವಿಫ‌ಲವಾಗಿತ್ತು.

ಗ್ಯಾರೇಜ್‌ಗೆ 3 ಕೋಟಿ ರೂ. ಬಾಕಿ
ದುರಸ್ತಿಗಿರುವ ಆ್ಯಂಬುಲೆನ್ಸ್‌ಗಳನ್ನು ಗ್ಯಾರೇಜ್‌ಗೆ ಹಾಕಿ 10 ಸಾವಿರ ರೂ. ಬಿಲ್‌ ಆದರೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ 20 ಸಾವಿರ ರೂ. ಬಿಲ್‌ ತೋರಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಆರೋಪವಿದೆ. ಬೆಂಗಳೂರಿನಲ್ಲಿ ಗ್ಯಾರೇಜ್‌ಗಳಿಗೆ ಆ್ಯಂಬುಲೆನ್ಸ್‌ ದುರಸ್ತೆಯ ಅಂದಾಜು 3 ಕೋಟಿ ರೂ. ಬಿಲ್‌ ಬಾಕಿ ಇದೆ. ಆದ್ದರಿಂದ ಈ ಗ್ಯಾರೇಜ್‌ ಮಾಲಕರು ಆ್ಯಂಬುಲೆನ್ಸ್‌ ದುರಸ್ತಿ ಮಾಡುವುದನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಶಿರಾ, ತುಮಕೂರು ಸಹಿತ ಬೇರೆ ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್‌ಗಳು ಕೆಲವು ತಿಂಗಳಿನಿಂದ ದುರಸ್ತಿಗಾಗಿ ನಿಂತಿವೆ.

ನೌಕರರ ಗೋಳು ಕೇಳುವವರೇ ಇಲ್ಲ
108 ಆ್ಯಂಬುಲೆನ್ಸ್‌ ನೌಕರರಿಗೆ 4 ತಿಂಗಳ ವೇತನಕ್ಕೆ ಅಂದಾಜು 28 ಕೋಟಿ ರೂ. ಬೇಕಾಗುತ್ತದೆ. ಸರಕಾರದಿಂದ ಜಿವಿಕೆ ಕಂಪೆನಿಗೆ ಹಣ ಮಂಜೂರಾದರೂ ವೇತನ ನೀಡದೇ ನೌಕರರನ್ನು ಸತಾಯಿಸುತ್ತಿದೆ. ಈ ಸಮಸ್ಯೆ ಹಲವು ಬಾರಿ ಸರಕಾರದ ಗಮನಕ್ಕೆ ತಂದರೂ ನೌಕರರ ಗೋಳು ಕೇಳುವವರಿಲ್ಲ.

ಜಿವಿಕೆ-ಇಎಂಆರ್‌ಐಗೆ 108 ಸೇವೆಯ ಜವಾಬ್ದಾರಿ ನೀಡಬಾರದು. ಈ ಕಂಪೆನಿಯು ಆರಂಭದಿಂದಲೂ ನೌಕರರಿಗೆ ವೇತನ ಬಾಕಿ ಉಳಿಸಿಕೊಂಡೇ ಬಂದಿದೆ. ಸರಕಾರ ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ನೌಕರರು ಕರ್ತವ್ಯಕ್ಕೆ ಗೈರಾಗಿ ಹೋರಾಟ ನಡೆಸಬೇಕಾಗುತ್ತದೆ.
| ಆರ್‌. ಶ್ರೀಧರ್‌, ರಾಜ್ಯಾಧ್ಯಕ್ಷ, 108 ಆ್ಯಂಬುಲೆನ್ಸ್‌ ನೌಕರರ ಸಂಘ.

ಟಾಪ್ ನ್ಯೂಸ್

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.