ಮುದ್ರಣ ಮಾಧ್ಯಮ ಆದಾಯ ಏರಿಕೆ-ಆದಾಯದಲ್ಲಿ ಶೇ.13ರಿಂದ 15 ಹೆಚ್ಚಳ:ಕ್ರಿಸಿಲ್‌ ರೇಟಿಂಗ್ಸ್‌


Team Udayavani, Jul 14, 2023, 7:33 AM IST

printing

ಹೊಸದಿಲ್ಲಿ: ಕೊರೊನಾ ಸಮಯದಲ್ಲಿ ಸೊರಗಿದ್ದ ಮುದ್ರಣ ಮಾಧ್ಯಮ ಇದೀಗ ಚೇತರಿಕೆ ಕಾಣುತ್ತಿದೆ. ಈ ಅಂಶವು ಕ್ರಿಸಿಲ್‌ ರೇಟಿಂಗ್ಸ್‌ ವರದಿಯಿಂದ ಸಾಬೀತಾಗಿದೆ. ವರದಿಯ ಪ್ರಕಾರ, ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಪೊರೇಟ್‌ ಮತ್ತು ಸರಕಾರದ ಜಾಹೀರಾತು­ಗಳು ಹೆಚ್ಚಲಿವೆ. ಇದರ ಪರಿಣಾಮ 2023-24ರ ಅವಧಿಯಲ್ಲಿ ಭಾರತದ ಮುದ್ರಣ ಕ್ಷೇತ್ರದ ಆದಾಯದಲ್ಲಿ ಶೇ.13ರಿಂದ 15ರಷ್ಟು ಏರಿಕೆಯಾಗಲಿದೆ. ಈ ಅವಧಿಯಲ್ಲಿ ಮಾಧ್ಯಮ ಸಂಸ್ಥೆಗಳ ಒಟ್ಟು ಆದಾಯವು 30,000 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಿದೆ.

ಲಾಭದಲ್ಲಿ ಏರಿಕೆ ಸಾಧ್ಯತೆ: ಇನ್ನೊಂದೆಡೆ, ನ್ಯೂಸ್‌ಪ್ರಿಂಟ್‌ ಬೆಲೆಯು ಕಡಿಮೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಮುದ್ರಣ ಕ್ಷೇತ್ರದ ಲಾಭದಲ್ಲಿ ಶೇ.10ರಿಂದ ಶೇ. 14.5ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಮುದ್ರಣ ಮಾಧ್ಯಮಕ್ಕೆ 70:30 ಅನುಪಾತ­ದಲ್ಲಿ ಆದಾಯ ಬರುತ್ತದೆ. ಶೇ.70ರಷ್ಟು ಜಾಹೀರಾತುಗಳಿಂದ ಹಾಗೂ ಶೇ.30ರಷ್ಟು ಚಂದಾದಾರರಿಂದ. ಕೊರೊನಾ ಸಮಯದಲ್ಲಿ ಅಂದರೆ 2020-21ನೇ ಹಣಕಾಸು ವರ್ಷದಲ್ಲಿ ಭಾರತದ ಮುದ್ರಣ ಕ್ಷೇತ್ರದ ಆದಾಯವು ಶೇ.40ರಷ್ಟು ಕುಸಿದಿತ್ತು. ಆದರೆ ಅನಂತರ ಪುನಃ 2021-22 ಹಾಗೂ 2022-23ರ ಅವಧಿಯಲ್ಲಿ ಆದಾಯವು ಕ್ರಮವಾಗಿ ಶೇ.25­ರಷ್ಟು ಹಾಗೂ ಶೇ.15ರಷ್ಟು ಏರಿಕೆಯಾಯಿತು ಎಂದು ವರದಿ ತಿಳಿಸಿದೆ.

ಆದಾಯ ಬೆಳವಣಿಗೆ ಮುಂದುವರಿಯಲಿದೆ: “ಚಿಲ್ಲರೆ ವ್ಯಾಪಾರ, ಬಟ್ಟೆ, ಆಭರಣ, ಹೊಸ ವಾಹನಗಳ ಬಿಡುಗಡೆ, ಶಿಕ್ಷಣ, ಆನ್‌ಲೈನ್‌ ಖರೀದಿ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಿಂದ ಮುದ್ರಣ ಮಾಧ್ಯಮದ ಮೂರನೇ ಎರಡರಷ್ಟು ಆದಾಯ ಬರುತ್ತದೆ. ಈ ಕ್ಷೇತ್ರಗಳು ಮುದ್ರಣ ಮಾಧ್ಯಮಗಳ ನಿರಂತರ ಆದಾಯ ಬೆಳವಣಿಗೆಯಲ್ಲಿ ವೇಗವನ್ನು ಮುಂದುವರಿಸಲಿವೆ’ ಎಂದು ಕ್ರಿಸಿಲ್‌ ರೇಟಿಂಗ್ಸ್‌ನ ನಿರ್ದೇಶಕ ನವೀನ್‌ ವೈದ್ಯನಾಥನ್‌ ಹೇಳಿದ್ದಾರೆ.

ಓದುಗರ ಸಂಖ್ಯೆಯಲ್ಲಿ ಏರಿಕೆ
“ಸರ್ಕಾರಿ ಜಾಹಿರಾತುಗಳು ಮುದ್ರಣ ಮಾಧ್ಯಮದ ಐದನೇ ಒಂದು ಭಾಗದಷ್ಟು ಆದಾಯ ತರುತ್ತದೆ. ಚುನಾವಣೆಗಳ ಹಿನ್ನೆಲೆಯಲ್ಲಿ ಜಾಹೀರಾತುಗಳು ಕೂಡ ಹೆಚ್ಚಲಿವೆ. ಇನ್ನೊಂದೆಡೆ, ಓದುಗರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಓದುಗರ ಸಂಖ್ಯೆ ಶೇ.8ರಿಂದ ಶೇ10ರಷ್ಟು ಏರಿಕೆಯಾಗಿದೆ. ಜತೆಗೆ ಆನ್‌ಲೈನ್‌ ನ್ಯೂಸ್‌ಪೇಪರ್‌ ಸಬ್‌ಸ್ಕ್ರಿಪ್ಶನ್‌ನಲ್ಲೂ ಶೇ.5ರಿಂದ ಶೇ.7ರಷ್ಟು ಏರಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.