20 ಕೋಟಿ ಖರ್ಚು: ಕನ್ನಡ ಶಾಲೆಗಳು ಪುನಶ್ಚೇತನವಾಗಲಿ;ಸರಕಾರಕ್ಕೆ ಅರಳಿ ನಾಗರಾಜ್

ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Team Udayavani, Mar 6, 2022, 7:36 PM IST

1-dsads

ಕುಷ್ಟಗಿ: ಪ್ರಸಕ್ತ ಬಜೆಟ್ ನಲ್ಲಿ ಸರಕಾರ ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಸಮ್ಮೇಳನಕ್ಕಾಗಿ 20 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ಈ 20 ಕೋಟಿಯನ್ನು ಮೂರು ದಿನಗಳ ಜಾತ್ರೆಗೆ ಖರ್ಚು ಮಾಡಿ, ಕನ್ನಡ ಶಾಲೆಗಳು ಅಲ್ಲೇ ಉಳಿದರೇ ನಾವು ಸಾಧಿಸಿರುವುದಾದರೂ ಏನು? ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕಸಾಪ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ ಅರಳಿ ನಾಗರಾಜ್ ಪ್ರಶ್ನಿಸಿದರು.

ಭಾನುವಾರ, ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳು ಪುನಶ್ಚೇತನಕ್ಕಾಗಿ ಪ್ರತ್ಯೇಕ ಆ್ಯಪ್ ತಯಾರಿಸಲು ಉದ್ದೇಶಿಸಲಾಗಿದೆ.ಕನ್ನಡ ಸಾಹಿತ್ಯ ಮೌಲ್ಯಗಳನ್ನು ಉಳಿಸಲು ಕನ್ನಡ ಶಾಲೆಗಳ ಪುಶ್ಚೇತನವನ್ನು ಆದ್ಯತೆಯಾಗಿ ಕೆಲಸ ಮಾಡಬೇಕಿದೆ. ಚುನಾವಣೆ, ನೊಂದಣಿ ಆ್ಯಪ್ ತಯಾರಿಸಲು ಬೈಲಾ ತಿದ್ದುಪಡಿಯಂತೆ, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಆ್ಯಪ್ ತಯಾರಿಸುವಂತೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರಿಗೆ ಸಲಹೆ ನೀಡಿರುವೆ ಎಂದ ಅವರು ಜಿಲ್ಲಾ, ತಾಲೂಕಾ ಹಾಗೂ ಹೋಬಳಿ ಘಟಕಗಳ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನದ ವಾಸ್ತವಿಕ ಸ್ಥಿತಿಗತಿಯನ್ನು ಆ್ಯಪ್ ಮೂಲಕ ಸಮೀಕ್ಷಿಸಿ, ವಿಸ್ತೃತ ವರದಿ ತಯಾರಿಸಿ ಸಕರ್ಾರಕ್ಕೆ ಸಲ್ಲಿಸಿ ಇಂತಿಷ್ಟು ಅವಧಿಯೊಳಗೆ ಅನುದಾನ ಬಿಡುಗಡೆ ಮಾಡಿ ಈ ಶಾಲೆಗಳ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವುದು ಮೊದಲಾದ್ಯತೆಯಾಗಿದೆ ಎಂದರು.

ಕನ್ನಡ ಶಾಲೆಗಳು ಪುನಶ್ಚೇತನಗೊಂಡು, ಅಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಮಾತ್ರ ಸಾಹಿತಿಗಳ ಬರೆದ ಪುಸ್ತಕಗಳ ಓದುಗರು ಸಿಗಲು ಸಾದ್ಯವಿದೆ. ಓದುಗರ ಅಭಾವ ಸೃಷ್ಟಿಯಾದರೆ ಸಾಹಿತಿಗಳಿಗೆ ನಿರಾಸೆಯಾಗಲಿದೆ. ಮುಂದಿನ ದಿನಮಾನಗಳಲ್ಲಿ ಬರಹಗಾರರು ಬರಹ ನಿಲ್ಲಿಸುತ್ತಾರೆ. ಬರೆದು ಪುಸ್ತಕಗಳು ಖಚರ್ಾಗದೇ ಇದ್ದರೆ ಪ್ರಕಾಶಕರು ಮುಂದೆ ಬರುವುದಿಲ್ಲ. ಹಡರ್ೇಕರ ಮಂಜಪ್ಪ, ಫ.ಗು. ಹಳಕಟ್ಟಿ, ಬಸವಾದಿ ಶರಣರ ವಚನಗಳನ್ನು ಮುದ್ರಿಸಿದ್ದರಿಂದಲೇ ಓದುಗರನ್ನು ಸೃಷ್ಟಿಸಿತು ಬಸವಾದಿ ಶರಣರ ವಚನಗಳು ಇಂದಿಗೂ ಜೀವಂತವಾಗಲು ಸಾಧ್ಯವಾಯಿತು ಎಂದರು.

ಗೊತ್ತು ಗುರಿ ಇಲ್ಲದ ಗೊತ್ತುವಳಿಗಳು
ಅದೇಷ್ಟೋ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಿರುವ ಗೊತ್ತುವಳಿಗಳು, ಗೊತ್ತುವಳಿಗಳಾಗಿ ಉಳಿದಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಸಾಹಿತ್ಯ ಪರಿಷತ್ ಗೆ ಹೆಚ್ಚು ಪರಿಚಯವಿದ್ದವರು ಹೇಳಲಿ ಈ ಬಗ್ಗೆ ಹೇಳಲಿ ನೋಡೋಣ? ಎಂದವರು, ಇಲ್ಲಿಯವರೆಗೂ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಮಂಡನೆಯಾಗಿರುವ ಗೊತ್ತುವಳಿಗಳು ಅನುಷ್ಠಾನಗೊಂಡಿರುವ ಗೊತ್ತುವಳಿಗಳನ್ನು ಪ್ರತ್ಯೇಕಿಸಿ, ಅನುಷ್ಠಾನಕ್ಕೆ ಯೋಗ್ಯವಿರುವ ಗೊತ್ತುವಳಿಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.ನಾಡು, ನುಡಿ, ಜಲ, ಗಡಿ ಇತ್ಯಾಧಿ ವಿಷಯಗಳ ಗೊತ್ತುವಳಿಗಳು ಹೋಬಳಿ ಸಮ್ಮೇಳನದಿಂದ ಅಖಿಲ ಭಾರತ ಸಮ್ಮೇಳನದವರೆಗೆ ಗೊತ್ತುವಳಿಗಳು ಅನುಷ್ಠಾನಗೊಳಿಸಬೇಕಿದ್ದು ಇಲ್ಲವಾದರೆ ಗೊತ್ತುವಳಿಗಳಿಗೆ ಅರ್ಥವೇ ಇರುವುದಿಲ್ಲ ಎಂದರು.

ಗ್ರಂಥ ದಾಸೋಹ
ಪರಿಷ್ಕೃತ ಬೈಲಾದಲ್ಲಿ ಗ್ರಂಥ ದಾಸೋಹ ಕಲ್ಪನೆ ಹಿನ್ನೆಲೆಯಲ್ಲಿ ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಯಾರದರೂ ಗ್ರಂಥ ದಾಸೋಹಕ್ಕೆ ನಿಧಿ ನೀಡಿದರೆ, ಗ್ರಂಥ ದಾನಿಗಳ ಭಾವಚಿತ್ರ ಮುದ್ರಿಸಿ ಪುಸ್ತಕ ಪ್ರಕಟಿಸಿ ಕಸಾಪ ಮೂಲಕ ಅರ್ಧ ಬೆಲೆಗೆ ಮಾರಾಟ ಮಾಡಲು ಸಾದ್ಯವಿದ್ದು ಓದುಗರಿಗೆ ಕಡಿಮೆ ಬೆಲೆಗೆ ಪುಸ್ತಕಗಳು ಲಭಿಸಲಿವೆ ಎಂದ ಅವರು ಖಾಸಗಿ ಪ್ರಕಾಶಕರಿಗೆ ಮೊರೆ ಹೋಗುವ ಪರಿಸ್ಥಿತಿ ಬರುವುದಿಲ್ಲ ಎಂದರು. ಕಸಾಪ ರಾಜ್ಯ ಘಟಕದ ಸಂಘ ಸಂಸ್ಥೆ ಪ್ರತಿನಿಧಿ ನಭಿಸಾಬ್ ಕುಷ್ಟಗಿ, ಮೋಹನಲಾಲ್ ಜೈನ್ ಮೊದಲಾದವರಿದ್ದರು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.