![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 4, 2021, 3:42 PM IST
ಮಂಗಳೂರು : ಅಳಕೆ ಮತ್ತು ಬೋಳೂರು ಗ್ಯಾಂಗ್ ಗಳ ನಡುವಿನ ದ್ವೇಷ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲವಾರು ದಾಳಿ ನಡೆಸಿದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 28 ರ ನಸುಕಿನ 2 ಗಂಟೆಯ ವೇಳೆಗೆ ಅಂಕಿತ್ ಮತ್ತು ಶ್ರವಣ್ ಎನ್ನುವವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ ಆರೋಪಿಗಳಾದ ಅಳಕೆ ಗ್ಯಾಂಗಿನ ಹತ್ಯೆಗೀಡಾದ ಇಂದ್ರಜಿತ್ ಸ್ನೇಹಿತರಾದ ನವನೀತ್ ಅಶೋಕನಗರ , ಹೇಮಂತ್ ಹೊಯಿಗೆ ಬೈಲ್ , ದೀಕ್ಷಿತ್ ಬೋಳೂರು, ಮತ್ತು ಆರೋಪಿಗಳು ತಲೆ ಮರೆಸಿಕೊಳ್ಳಲು ನೆರವಾದ ಸಂದೇಶ್ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಇತರರ ಬಂಧನ ಬಾಕಿ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಬಳಸಿದ 3 ತಲವಾರುಗಳು, 3 ದ್ವಿಚಕ್ರ ವಾಹನಗಳನ್ನು ಮತ್ತು ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಈ ಹಿಂದೆಯೂ ಅಪರಾಯಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಹೇಮಂತ್ ಮೂರು ಪ್ರಕರಣಗಳಲ್ಲಿ, ನವನೀತ್ 2 ಪ್ರಕರಣಗಳಲ್ಲಿ ಮತ್ತು ದೀಕ್ಷಿತ್ 1 ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದರು.
2020 ರಲ್ಲಿ ಇಂದ್ರಜಿತ್ ನನ್ನ ಬೋಳೂರು ಗ್ಯಾಂಗ್ ಹತ್ಯೆ ಮಾಡಿತ್ತು.
2014 ರಲ್ಲಿ ಬೋಳೂರು ಗ್ಯಾಂಗ್ ನ ತಲ್ವಾರ್ ಜಗ್ಗ ಸೇರಿ ಮೂವರ ಹತ್ಯೆ ನಡೆದಿತ್ತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.