ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್


Team Udayavani, Jul 14, 2020, 5:33 PM IST

ಹೆತ್ತವರ ಪ್ರೇರಣೆ ಮತ್ತು ಕಾಲೇಜಿನ ವಾತಾವರಣ ನನ್ನ ಯಶಸ್ಸಿನ ಮೂಲ : ಅಭಿಜ್ಞಾ ರಾವ್

ಉಡುಪಿ : ಹೆತ್ತವರ ಪ್ರೇರಣೆ ಜೊತೆಗೆ ನಾನು ಕಲಿತ ಕಾಲೇಜಿನ ವಾತಾವರಣ ನನ್ನ ಸಾಧನೆಗೆ ಮೂಲ ಕಾರಣ ಎಂದು ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಅಭಿಜ್ಞಾ ರಾವ್ ಅವರ ಮನದಾಳದ ಮಾತು.

ಉಡುಪಿ ಜಿಲ್ಲೆಯ ನಿವಾಸಿಯಾಗಿರುವ ವಿಠ್ಠಲ್ ರಾವ್ ಮತ್ತು ಆಶಾ ರಾವ್ ಅವರ ಪುತ್ರಿಯಾಗಿರುವ ಅಭಿಜ್ಞಾ ರಾವ್ ಹೇಳುವುದು ಹೀಗೆ:
ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡ ನಾನು ನನ್ನ ಓದಿನ ಸಮಯದಲ್ಲಿ ಯಾವುದೇ ವಿಷಯವನ್ನು ಒತ್ತಡದಲ್ಲಿ ಓದುತ್ತಿರಲಿಲ್ಲ ಬದಲಾಗಿ ದಿನದ ಪಾಠಕ್ಕೆ ಸಂಬಂದಿಸಿದ ವಿಷಯಗಳನ್ನು ಅಂದೇ ಸಂಪೂರ್ಣವಾಗಿ ಓದುತ್ತಿದ್ದೆ ನನ್ನ ಕಾಲೇಜು ಕೃಷ್ಣಾ ಮಠದ ಪರಿಸರದಲ್ಲಿ ಇದ್ದುದರಿಂದ ಕಾಲೇಜಿನ ವಾತಾವರಣ, ಕಾಲೇಜಿನ ಶಿಕ್ಷಕರು ಆಡಳಿತ ಮಂಡಳಿ ಸೇರಿದಂತೆ ಎಲ್ಲರ ಪ್ರೋತ್ಸಾಹದಿಂದ ನನ್ನ ಸಾಧನೆ ಸಾಧ್ಯವಾಯಿತು.

ಇದನ್ನೂ ಓದಿ: ನನ್ನ ನಿರೀಕ್ಷೆಯ ಕನಸು ನನಸಾಗಿದೆ…4th Rank ವಿಜೇತೆ ಕುಂದಾಪುರ ಸ್ವಾತಿ ಪೈ ಮನದಾಳದ ಮಾತು

ಎಸ್ಎಸ್ಎಲ್ ಸಿಯಲ್ಲಿ 625ಕ್ಕೆ 624 ಅಂಕ
ನಾನು ಎಸ್ಎಸ್ಎಲ್ ಸಿ ಕಲಿಯುವಾಗಲು 625 ರಲ್ಲಿ 624 ಅಂಕಗಳನ್ನು ಪಡೆಯುದರೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದೆ ಆಗಲೇ ನನ್ನಲ್ಲಿ ಒಂದು ಛಲ ಹುಟ್ಟಿತ್ತು ಮುಂದೆ ಪಿಯುಸಿಯಲ್ಲಿಯೂ ಒಳ್ಳೆಯ ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ನಮ್ಮ ಮನೆಯವರಿಗೂ ಒಳ್ಳೆಯ ಹೆಸರು ತರಬೇಕೆಂಬುದು, ಆದರೆ ಅದು ಇಂದು ಎಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗಿದೆ.

ಕೋವಿಡ್ ಸಮಯ ನನಗೆ ವರವಾಯಿತು :
ಎಲ್ಲಾ ಪರೀಕ್ಷೆಗಳು ನಡೆದು ಇನ್ನು ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಉಳಿದಿತ್ತು ಅಷ್ಟರಲ್ಲಿ ಕೋವಿಡ್ ವ್ಯಾಪಿಸಿದ ಪರಿಣಾಮ ನಮ್ಮ ಇಂಗ್ಲೀಷ್ ಪರೀಕ್ಷೆ ಮುಂದೂಡಲಾಯಿತು ಇದೆ ನನಗೆ ಉತ್ತಮವಾದ ಸಮಯ ಎಂದು ತಿಳಿದು ಆ ಅವಧಿಯನ್ನು ವ್ಯರ್ಥ ಮಾಡದೆ ಪರೀಕ್ಷೆಗೆ ಸಂಬಂಧಿಸಿದ ಹಳೆ ಪ್ರಶ್ನಾ ಪತ್ರಿಕೆಗಳನ್ನು ಅಭ್ಯಾಸ ಮಾಡಿದೆ ಇದರಿಂದ ನನಗೆ ಬಹಳ ಉಪಕಾರಿಯಾಯಿತು.

ಅಕ್ಕನ ಹಾದಿಯಲ್ಲೇ ಸಾಗುವ ಅಸೆ:
ನನ್ನ ಅಕ್ಕ ಇಂಜಿನಿಯರ್ ಮಾಡಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ ಅವಳ ಹಾದಿಯಲ್ಲೇ ನಾನು ಮುಂದುವರೆಯಬೇಕೆಂಬ ಆಸೆ ಹಾಗಾಗಿ ಮುಂದೆ ಇದಕ್ಕೆ ಬೇಕಾದ ಪೂರಕ ಪರೀಕ್ಷೆಗಳನ್ನು ಬರೆದು ಇಂಜಿನಿಯರ್ ಆಗಬೇಕೆಂದಿದ್ದೇನೆ ಎನ್ನುತ್ತಾರೆ ಅಭಿಜ್ಞಾ ರಾವ್ .

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.