ಆನಂದ್ ಮಹೀಂದ್ರಾ ಹಂಚಿಕೊಂಡ ಭಾರತದ ಸುಂದರ ತಾಣಗಳಲ್ಲಿ ಕರ್ನಾಟಕದ ಈ ಗ್ರಾಮವೂ ಸೇರಿದೆ!
ಮಹೀಂದ್ರಾ ಅವರು ಸುಂದರ ಹಳ್ಳಿಗಳ ಪಟ್ಟಿ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ
Team Udayavani, Jun 12, 2023, 1:54 PM IST
ಮುಂಬೈ: ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸೃಜನಶೀಲ ಹಾಗೂ ಸ್ಫೂರ್ತಿದಾಯಕ ಟ್ವೀಟ್ ಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಆ ನಿಟ್ಟಿನಲ್ಲಿ ಮಹೀಂದ್ರಾ& ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಅವರು ಭಾರತದಲ್ಲಿ ತಾವು ಪ್ರಯಾಣಿಸಲು ಬಯಸುವ ದೇಶದ ಹತ್ತು ಸುಂದರ ಪ್ರದೇಶಗಳ (Bucket List) ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಪ್ರಕೃತಿ ಸೌಂದರ್ಯದ ಸ್ಥಳಗಳ ಪಟ್ಟಿಯನ್ನು ಗಮನಿಸಿದರೆ ನಿಮಗೂ ಕೂಡಾ ಅಲ್ಲಿಗೆ ಭೇಟಿ ನೀಡಲು ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಭಾರತದ ವಿವಿಧ ಸುಂದರ ಹಳ್ಳಿಗಳ ಬಗ್ಗೆ ಆನಂದ್ ಮಹೀಂದ್ರಾ ಅವರೇ ಮಂತ್ರ ಮುಗ್ಧರಾಗಿದ್ದಾರೆ. ಕುತೂಹಲದ ವಿಷಯವೇನೆಂದರೆ ಹತ್ತು ಹಳ್ಳಿಗಳಲ್ಲಿ ಕರ್ನಾಟಕದ ಒಂದು ಹಳ್ಳಿಯೂ ಸೇರಿದೆ.
ಭಾರತದಲ್ಲಿ ನಾನು ಪ್ರಯಾಣಿಸಲು ಬಯಸಿರುವ ಪಟ್ಟಿ ಈಗ ತುಂಬಿ ತುಳುಕುತ್ತಿದೆ ಎಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ಸುಂದರ ಹಳ್ಳಿಗಳ ಪಟ್ಟಿ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ ಕಲರ್ಸ್ ಆಫ್ ಭಾರತ್ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಹತ್ತು ಸುಂದರ ಹಳ್ಳಿಗಳ ಪಟ್ಟಿ ಯಾವುದು?
1)ಕಲ್ಪಾ(ಹಿಮಾಚಲ ಪ್ರದೇಶ), 2)ಮಾವ್ಲಿನ್ನಾಂಗ್ (ಮೇಘಾಲಯ), 3)ಕೊಲ್ಲೆಂನ್ ಗೋಡ್ ಹಳ್ಳಿ (ಕೇರಳದ ಪಾಲಕ್ಕಾಡ್), 4)ಮಾಥೂರ್ ಗ್ರಾಮ (ಕನ್ಯಾಕುಮಾರಿ, ತಮಿಳುನಾಡು), 5)ವರಂಗಾ ಗ್ರಾಮ (ಕರ್ನಾಟಕ) 6) ಗೋರ್ಖಿ ಖೋಲಾ(ದಾರ್ಜಿಲಿಂಗ್, ಪಶ್ಚಿಮಬಂಗಾಳ), 7)ಜಿರಾಂಗ್ ಗ್ರಾಮ (ಒಡಿಶಾ), 8)ಜಿರೋ ಗ್ರಾಮ (ಅರುಣಾಚಲ ಪ್ರದೇಶ), 9)ಮನಾ (ಉತ್ತರಾಖಂಡ್) 10) ಖಿಮ್ಸಾರ್ ಗ್ರಾಮ (ರಾಜಸ್ಥಾನ).
This beauty around us just left me speechless…My bucket list for travel in India now overflows…. https://t.co/WXunxChIKg
— anand mahindra (@anandmahindra) June 8, 2023
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಸುಂದರ ಹಳ್ಳಿಗಳ ಪ್ರಯಾಣದ ಪಟ್ಟಿಗೆ ಟ್ವೀಟರ್ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆನಂದ್ ಮಹೀಂದ್ರಾ ಅವರು ಕರ್ನಾಟಕದ ನಂದಿ ಬೆಟ್ಟ ಮತ್ತು ಕೇರಳದ ಇಡುಕ್ಕಿ ಪ್ರದೇಶಕ್ಕೆ ಭೇಟಿ ನೀಡಬೇಕೆಂದು ಟ್ವೀಟರ್ ಬಳಕೆದಾರರು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು
Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…
Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!
Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್ಪೆಕ್ಟರ್!
Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.