![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 7, 2022, 8:00 PM IST
ಅಮರಾವತಿ : 2024 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಇಡೀ ಕ್ಯಾಬಿನೆಟ್ ಗುರುವಾರ ರಾಜೀನಾಮೆ ನೀಡಿದೆ. ಕ್ಯಾಬಿನೆಟ್ ಸಭೆಯ ನಂತರ 24 ಸಚಿವರು ತಮ್ಮ ರಾಜೀನಾಮೆಯನ್ನು ನೀಡಿದ್ದು, ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಉಳಿದಿರುವ ಏಕೈಕ ಸಂಪುಟ ಸದಸ್ಯ ಸಿಎಂ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಜಗನ್ ರೆಡ್ಡಿ ಅವರು ತಮ್ಮ ಉಳಿದ ಅವಧಿಯಲ್ಲಿ ಸಂಪೂರ್ಣ ಹೊಸ ತಂಡಕ್ಕೆ ಹುದ್ದೆಗಳನ್ನು ನೀಡುವುದಾಗಿ ಹೇಳಿದ್ದರಿಂದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್ನಲ್ಲಿ ನಡೆಯಬೇಕಾಗಿದ್ದ ಈ ಬದಲಾವಣೆ ಕೋವಿಡ್ನಿಂದಾಗಿ ಮುಂದೂಡಲಾಲಾಗಿತ್ತು.ಹೊರ ಹೋಗಿರುವ ತಂಡದಿಂದ ಒಬ್ಬರು ಅಥವಾ ಇಬ್ಬರು ಸಚಿವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಸಚಿವ ಸಂಪುಟದಲ್ಲಿ ಹೊಸದಾಗಿ ರಚನೆಯಾಗಿರುವ ರಾಜ್ಯದ 26 ಜಿಲ್ಲೆಗಳ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. 2019 ರ ಜೂನ್ನಲ್ಲಿ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂತೆ ಜಾತಿ, ಪ್ರದೇಶ, ಧರ್ಮ ಮತ್ತು ಲಿಂಗ ಆದ್ಯತೆ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಕಾಪು ಜಾತಿ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದಿಂದ ತಲಾ ಒಬ್ಬರಂತೆ ಐದು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು . ಸಂಪುಟದಲ್ಲಿ ಮೂವರು ಮಹಿಳೆಯರಿದ್ದರು. ದಲಿತ ಸಮುದಾಯದ ಮಹಿಳೆ ಎಂ ಸುಚರಿತಾ ಗೃಹ ಸಚಿವರಾಗಿದ್ದರು.
ಇದು ಆಂಧ್ರಪ್ರದೇಶದ ಇತಿಹಾಸದಲ್ಲಿ ಇಡೀ ಸಚಿವ ಸಂಪುಟ ಅಧಿಕಾರದ ಮಧ್ಯದಲ್ಲಿ ರಾಜೀನಾಮೆ ನೀಡುತ್ತಿರುವುದು ಎರಡನೇ ಬಾರಿಗೆ ನಡೆಯುತ್ತಿದೆ.
ಬೈ ಬೈ ಜಗನ್ ಟ್ರೆಂಡಿಂಗ್
ವೈಎಸ್ ಜಗನ್ ರೆಡ್ಡಿಯವರ ಕರಾಳ ಆಡಳಿತದಿಂದಾಗಿ 2022 ರಲ್ಲಿ ಎಲ್ಲೆಡೆ ಕತ್ತಲೆ ತುಂಬಿದೆ ಎಂದು ವಿದ್ಯುತ್ ಸಮಸ್ಯೆಯ ಕುರಿತಾಗಿ ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬೈ ಬೈ ಜಗನ್ ಟ್ರೆಂಡಿಂಗ್ ಆಗಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಅನಿಯಂತ್ರಿತ ಮತ್ತು ಘೋಷಿಸದ ವಿದ್ಯುತ್ ಕಡಿತವು ದೊಡ್ಡ ಚರ್ಚೆಯಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.