![Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/GOA-415x244.jpg)
Belve ಕೆನರಾ ಬ್ಯಾಂಕ್ ಪ್ರಬಂಧಕರಿಂದ ವಂಚನೆ: ದೂರು ದಾಖಲು
Team Udayavani, Jul 4, 2024, 11:06 PM IST
![Belve ಕೆನರಾ ಬ್ಯಾಂಕ್ ಪ್ರಬಂಧಕರಿಂದ ವಂಚನೆ: ದೂರು ದಾಖಲು](https://www.udayavani.com/wp-content/uploads/2024/07/FRAUD-3-620x465.jpg)
ಸಿದ್ದಾಪುರ: ಬೆಳ್ವೆ ಕೆನರಾ ಬ್ಯಾಂಕ್ನಲ್ಲಿ ಮಾಡಿದ್ದ 50 ಸಾವಿರ ರೂಪಾಯಿ ಸಾಲವನ್ನು ತೀರಿಸಿದರೂ ಬ್ಯಾಂಕ್ ಪ್ರಬಂಧಕ ದಿನೇಶ್ ಕೋಟ್ಯಾನ್ 5 ಲಕ್ಷ ರೂ. ಸಾಲ ಬಾಕಿ ಇದೆ ಎಂದು ಪಹಣಿ ಪತ್ರದಲ್ಲಿ ನಮೂದು ಮಾಡಿ ವಂಚಿಸಿದ್ದಾರೆ ಎಂದು ಉಡುಪಿ ಕೆಮ್ಮಣ್ಣು ಗುಜ್ಜರಬೆಟ್ಟು ಕೆ. ಸಕುಬಾಯಿ (74) ಪೊಲೀಸರಿಗೆ ದೂರು ನೀಡಿದ್ದಾರೆ.
ಸಕುಬಾಯಿ ಅವರು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಸರ್ವೇ ನಂಬರ್ 203/6ಎ ಯಲ್ಲಿರುವ 0.40 ಎಕರೆ ಜಾಗದ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2013-14ನೇ ಸಾಲಿನಲ್ಲಿ ಬೆಳ್ವೆ ಕೆನರಾ ಬ್ಯಾಂಕ್ನಲ್ಲಿ 50 ಸಾವಿರ ರೂ. ಸಾಲ ಮಾಡಿದ್ದು, ಬಳಿಕ ಮರುಪಾವತಿ ಮಾಡಿದ್ದರು. ಇತ್ತೀಚೆಗೆ ಪಹಣಿ ಪತ್ರ ತೆಗೆಸಿದಾಗ 50 ಸಾವಿರ ರೂ. ಜತೆಯಲ್ಲಿ 5 ಲಕ್ಷ ರೂ. ಹೆಚ್ಚುವರಿಯಾಗಿ ಋಣಭಾರ ಇರುವುದಾಗಿ ದಾಖಲಾಗಿರುವುದು ತಿಳಿದು ಬಂದಿತು.
ಪ್ರಬಂಧಕ ದಿನೇಶ್ ಕೋಟ್ಯಾನ್ ಅವರು ತನ್ನ ಸಹೋದರ ಮತ್ತು ಸಹೋದರಿಯ ಸಹಿ ಫೋರ್ಜರಿ ಮಾಡಿ, ಫಾರಂ ನಂಬರ್ 3 ಡಿಕ್ಲರೇಶನ್ ಫಾರಂ ಸೃಷ್ಟಿಸಿ ಅದನ್ನು ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ನೀಡಿ ಪಹಣಿಯಲ್ಲಿ ಸಾಲ ನಮೂದಿಸುವ ಮೂಲಕ ವಂಚಿಸಿದ್ದಾರೆ ಎಂದು ಕೆ. ದೂರಿನಲ್ಲಿ ತಿಳಿಸಲಾಗಿದೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/GOA-415x244.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/GOA-150x88.jpg)
Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ
![Hubli; CM-DCM issue not to be debated on sidewalks: RB Thimmapura](https://www.udayavani.com/wp-content/uploads/2024/07/RB-150x83.jpg)
Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ
![ಪ್ರಹ್ಲಾದ ಜೋಶಿ](https://www.udayavani.com/wp-content/uploads/2024/07/prahlad-joshi-1-150x83.jpg)
Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ
![INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ](https://www.udayavani.com/wp-content/uploads/2024/07/gill-1-150x83.jpg)
INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ
![Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು](https://www.udayavani.com/wp-content/uploads/2024/07/surta-150x83.jpg)
Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.