![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 12, 2023, 7:17 AM IST
ನವದೆಹಲಿ/ಅಹಮದಾಬಾದ್: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಬೈಪರ್ಜಾಯ್ ಚಂಡಮಾರುತ ಭಾನುವಾರ ಮತ್ತಷ್ಟು ತೀವ್ರಗೊಂಡಿದೆ. ಅದು ಜು.15ರ ವೇಳೆಗೆ ಗುಜರಾತ್ನ ಕಛ… ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿಯ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇದರ ಜತೆಗೆ ಸೌರಾಷ್ಟ್ರ ಮತ್ತು ಕಛ್ ಪ್ರದೇಶ ವ್ಯಾಪ್ತಿಯ ಪ್ರದೇಶಗಳಿಗೆ ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆಯನ್ನೂ ನೀಡಿದೆ. ಈ ಎರಡೂ ಪ್ರದೇಶಗಳ ಕಡಲ ಕಿನಾರೆಗಳಲ್ಲಿ ಜನರ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜತೆಗೆ ಬೀಚ್ಗಳಿಗೆ ಜನರ ಪ್ರವೇಶವನ್ನೂ ನಿಷೇಧಿಸಲಾಗಿದೆ.
ಜೂ.14ರಂದು ಬೆಳಗ್ಗೆ ಈಶಾನ್ಯದತ್ತ ಚಂಡಮಾರುತ ಮುಂದುವರಿಯಲಿದೆ. ಜು.15ರಂದು ಸೌರಾಷ್ಟ್ರ ಮತ್ತು ಕಛ…ಗಳ ಮೂಲಕ ಚಂಡಮಾರುತ ಹಾದು ಹೋಗಿ ಕರಾಚಿ ಮತ್ತು ಕಛ್ ನಡುವೆ ಅಪ್ಪಳಿಸಲಿದೆ. ಈ ವೇಳೆಗೆ ಪ್ರತಿಗಂಟೆಗೆ 125ರಿಂದ 135 ಕಿಮೀ ವೇಗದಿಂದ ಗಾಳಿ ಬೀಸಲಿದೆ. ಅದರ ವೇಗ ಪ್ರತಿ ಗಂಟೆಗೆ 150 ಕಿಮೀಗೆ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ. ಇದರಿಂದಾಗಿ ದೇಶದ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಭೀತಿ ದೂರವಾಗಿದೆ. ಆದರೆ, ದ್ವಾರಕ, ಪೋರ್ಬಂದರ್, ಜಾಮ್ನಗರ, ರಾಜ್ಕೋಟ್, ಜುನಾಗಢ, ಮೊರ್ಬಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.