![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 10, 2021, 7:10 AM IST
ಜೈಪುರ: ಮೇ 14ರ ಈ ಬಾರಿಯ ಅಕ್ಷಯ ತೃತೀಯದ ವಿವಾಹ ಸಮಾರಂಭಗಳಿಗೆ ರಾಜಸ್ಥಾನ ಸರಕಾರ ಕಟ್ಟಾಜ್ಞೆ ಜಾರಿಗೊಳಿಸಿದ್ದು, ಈ ಮೂಲಕ ಬಾಲ್ಯ ವಿವಾಹ ಕಡಿವಾಣದ ಶಪಥ ತೊಟ್ಟಿದೆ.
ಬಾಲ್ಯ ವಿವಾಹಗಳ ಸೂತ್ರಧಾರರ ವಿರುದ್ಧ ಮಾತ್ರವಲ್ಲದೆ ಮದುವೆಗೆ ಊಟ ಪೂರೈಸಿದ ಕೇಟರಿಂಗ್ನವರ ಮೇಲೂ ಕೇಸು ದಾಖಲಿಸಲು ಆದೇಶ ನೀಡಲಾಗಿದೆ. ಅಷ್ಟೇ ಅಲ್ಲದೆ, ಅಂಥ ವಿವಾಹದಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಅಡುಗೆ ಸಿಬಂದಿ, ಪುರೋಹಿತರು, ಬ್ಯಾಂಡ್ನವರು, ಟೆಂಟ್ನವರೆಲ್ಲರ ಮೇಲೂ ಕೇಸ್ ಬೀಳಲಿದೆ ಎಂದು ಸರಕಾರ ಎಚ್ಚರಿಸಿದೆ.
ಜನ್ಮದಿನಾಂಕ ನಮೂದು ಕಡ್ಡಾಯ: ಪ್ರತಿಯೊಂದು ಬಾಲ್ಯ ವಿವಾಹಗಳ ಆಮಂತ್ರಣ ಕಾರ್ಡ್ನಲ್ಲಿ ವಧು- ವರರ ಹುಟ್ಟಿದ ದಿನಾಂಕ ಮುದ್ರಿಸಲು ಸೂಚಿಸಿದೆ. ಅಲ್ಲದೆ, ಆಹ್ವಾನ ಪತ್ರಿಕೆ ಮುದ್ರಿಸುವ ಪ್ರಿಂಟಿಂಗ್ ಪ್ರಸ್ಗಳಿಗೆ ಜೋಡಿ ತಮ್ಮ ಜನನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯಗೊಳಿಸಿದೆ. ಒಂದು ವೇಳೆ ವಧುವಿಗೆ 18 ವರ್ಷ ಪೂರ್ಣಗೊಳ್ಳದೇ ಇದ್ದಲ್ಲಿ ವಧು- ವರನ ಕಡೆಯವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ.
ಸಮಯೋಚಿತ ಆದೇಶ: ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿ ನಲ್ಲಿ ರಾಜಸ್ಥಾನ ಗೃಹ ಇಲಾಖೆ ಕಠಿಣ ನಿಯಮ ಜಾರಿಗೊಳಿಸಿದೆ. ಮೇ 14 ರಂದು ಅಕ್ಷಯ ತೃತೀಯ, ಪೀಪಲ್ ಪೂರ್ಣಿಮಾ ಮೇ 26ರಂದು ನಡೆ ಯಲಿದೆ. ಈ ಸಂದರ್ಭಕ್ಕೆ ಅನುಸಾರವಾಗಿ ಹೆಚ್ಚಿನ ಮದುವೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಈ ಆದೇಶ ಮಹತ್ವದ್ದಾಗಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.