ಇಂದಿನಿಂದ ಚಾರ್ಧಾಮ್ ಯಾತ್ರೆ ಆರಂಭ
Team Udayavani, Apr 22, 2023, 7:51 AM IST
ಡೆಹ್ರಾಡೂನ್: ಪ್ರಸಕ್ತ ಸಾಲಿನ ಚಾರ್ಧಾಮ್ ಯಾತ್ರೆ ಶನಿವಾರದಿಂದ ಶನಿವಾರದಿಂದ ಆರಂಭವಾಗಲಿದೆ. ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ದೇಗುಲಗಳು ಶನಿವಾರ ತೆರೆಯಲಿವೆ. ಕೇದರನಾಥ ದೇಗುಲವು ಏ.25ರಂದು ಮತ್ತು ಬದರಿನಾಥ ದೇಗುಲವು ಏ.27ರಂದು ತೆರೆಯಲಿದೆ.
ಇದೇ ವೇಳೆ ಉತ್ತರಾಖಂಡ ಮುಖ್ಯಮಂತ್ರಿ ಪುಶ್ಕರ್ ಸಿಂಗ್ ಧಾಮಿ ಅವರು ಚಾರ್ಧಾಮ್ ಯಾತ್ರೆಗೆ ದಿನದ ಆಧಾರದಲ್ಲಿ ಯಾತ್ರಿಗಳ ಸಂಖ್ಯೆ ಮೇಲೆ ವಿಧಿಸಿದ್ದ ಮಿತಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ. ಈ ಬಗ್ಗೆ ಹಲವು ಒತ್ತಾಯಗಳು ವ್ಯಕ್ತವಾಗಿದ್ದವು.
ಬದರಿನಾಥ್ ಹೆದ್ದಾರಿ ಬಂದ್:
ಉತ್ತರಖಂಡದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಹನುಮಾನ್ ಚಟ್ಟಿಯಲ್ಲಿ ಹಿಮಪಾತ ಮತ್ತು ಮಳೆಯ ಕಾರಣ ಭೂಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಬದರಿನಾಥ್ ದೇಗುಲದಿಂದ 10 ಕಿ.ಮೀ. ದೂರದಲ್ಲಿರುವ ಹನುಮಾನ್ ಚಟ್ಟಿಯಲ್ಲಿ ಗಡಿ ರಸ್ತೆಗಳ ಸಂಸ್ಥೆಯು(ಬಿಆರ್ಒ) ಹೆದ್ದಾರಿ ಮೇಲೆ ಬಿದ್ದಿರುವ ಬಂಡೆ ಕಲ್ಲುಗಳು ಮತ್ತು ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.