![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 22, 2023, 3:42 PM IST
ನವದೆಹಲಿ : ವಿದೇಶಾಂಗ ಸಚಿವರಾಗಿ ಎಸ್.ಜೈಶಂಕರ್ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಚೀನಾದ ಬಗ್ಗೆ ಎಸ್.ಜೈಶಂಕರ್ ಅವರ ಹೇಳಿಕೆಗಳು ಭಾರತದ ಸಶಸ್ತ್ರ ಪಡೆಗಳ ಶೌರ್ಯವನ್ನು ಕೀಳಾಗಿಸುತ್ತಿವೆ ಮತ್ತು ಅವರ ನೈತಿಕತೆಯನ್ನು ಕಡಿಮೆ ಮಾಡುತ್ತಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
“ನಮ್ಮದು ಸಣ್ಣ ಆರ್ಥಿಕತೆ ಮತ್ತು ಚೀನಾ ದೊಡ್ಡ ಆರ್ಥಿಕತೆ ಮತ್ತು ನಾವು ಅವರೊಂದಿಗೆ ಜಗಳವಾಡಲು ಹೋಗುವುದಿಲ್ಲ” ಎಂದು ಹೇಳುವ ಮೂಲಕ ಜೈಶಂಕರ್ “ನಿಂದೆಯ” ಹೇಳಿಕೆ ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರು ವಿದೇಶಾಂಗ ನೀತಿಯನ್ನು ಎದೆಗುಂದಿಸುವ ಕಸರತ್ತಿಗೆ ಇಳಿಸಿದ್ದಾರೆ. ಇದನ್ನು ಉದ್ಯಮಿಯೊಬ್ಬರಿಗೆ ಗುತ್ತಿಗೆ ಪಡೆಯಲು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
“ಜೈಶಂಕರ್ ಅವರು ಈ ರೀತಿಯ ಹೇಳಿಕೆಯ ಮೂಲಕ ನಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಸಮರ್ಥರಲ್ಲ ಎನ್ನುತ್ತಿದ್ದಾರೆಯೇ? ಅವರೊಬ್ಬ “ವಿಫಲ ವಿದೇಶಾಂಗ ಸಚಿವ” ಎಂದು ಆರೋಪಿಸಿದರು.
ನಮ್ಮ ಭಾರತೀಯ ಸೇನೆಯ ಆತ್ಮವಿಶ್ವಾಸವನ್ನು ಮುರಿಯುವುದು ಮತ್ತು ಅಲುಗಾಡಿಸುವುದು ಮತ್ತು ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಅವಮಾನಿಸುವುದು. ಯಾವುದೇ ವಿದೇಶಾಂಗ ಸಚಿವರು ನೀಡಿದ ಅತ್ಯಂತ ದೂಷಣೆಯ ಹೇಳಿಕೆಗಳಲ್ಲಿ ಇದು ಒಂದಾಗಿದೆ”ಎಂದರು.
You seem to have an Ad Blocker on.
To continue reading, please turn it off or whitelist Udayavani.