Congress ವಿದ್ಯುತ್‌ ಉಚಿತ: ನಿಗದಿತ ಶುಲ್ಕ ಖಚಿತ!

ಬಳಸಿ, ಬಿಡಿ-ಬಿಲ್‌ ಪಾವತಿ ಮಾತ್ರ ಗ್ಯಾರಂಟಿ

Team Udayavani, May 20, 2023, 7:42 AM IST

power lines

ಬೆಂಗಳೂರು: ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಎಲ್ಲೆಡೆ ವಿದ್ಯುತ್‌ ಬಿಲ್‌ ಪಾವತಿಗೆ ನಿರಾಕರಣೆ ಕೂಗು ಕೇಳಿಬರುತ್ತಿದೆ. ಆದರೆ ಜನರು ವಿದ್ಯುತ್‌ ಬಳಸಿ ಅಥವಾ ಬಿಡಿ; ನಿಗದಿತ ಶುಲ್ಕ ಪಾವತಿಸುವುದು ತಪ್ಪದು!

ಕಾಂಗ್ರೆಸ್‌ ಈಗಾಗಲೇ 5 ಗ್ಯಾರಂಟಿ ಗಳನ್ನು ಘೋಷಿಸಿದ್ದು, ಆ ಪೈಕಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಕೂಡ ಒಂದಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನಡೆಯ ಲಿರುವ ಮೊದಲ ಸಚಿವ ಸಂಪುಟ ಸಭೆ ಯಲ್ಲಿ ಉಚಿತ ವಿದ್ಯುತ್‌ ಘೋಷಣೆ ಯನ್ನು ಅಂಗೀಕರಿಸುವ ಸಾಧ್ಯತೆ ಇದೆ. ಆದರೆ ಸರಕಾರ ವಿದ್ಯುತ್‌ ಉಚಿತ ವಾಗಿ ಕೊಟ್ಟರೂ ಗ್ರಾಹಕರಿಗೆ ನಿಗದಿತ ಶುಲ್ಕದ ರೂಪದಲ್ಲಿ ಬಿಲ್‌ ಪಾವತಿ ಸುವುದರಿಂದ ಮುಕ್ತಿ ಸಿಗುವುದು ಅನುಮಾನ.

ಯಾಕೆಂದರೆ ಪ್ರತೀ ತಿಂಗಳು ಬರುವ ವಿದ್ಯುತ್‌ ಬಿಲ್‌ನಲ್ಲಿ ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕ ಎಂಬ 2 ವಿಭಾಗಗಳು ಇರುತ್ತವೆ. ಕಾಂಗ್ರೆಸ್‌ ಹೇಳಿದ್ದು 200 ಯೂನಿಟ್‌ವರೆಗೆ ವಿದ್ಯುತ್‌ ಉಚಿತ ಎಂದಷ್ಟೇ. ಹೀಗಾಗಿ ನಿಗದಿತ ಶುಲ್ಕವನ್ನು ಎಂದಿನಂತೆ ಭರಿಸಬೇಕಾಗುತ್ತದೆ. ಪ್ರಸ್ತುತ ಗೃಹ ಬಳಕೆದಾರರಿಗೆ ಕನಿಷ್ಠ 110 ರಿಂದ ಗರಿಷ್ಠ 210 ರೂ. ನಿಗದಿತ ಶುಲ್ಕ ಇದೆ.

ಇತ್ತೀಚೆಗಿನ ವರ್ಷಗಳಲ್ಲಿ ವಿದ್ಯುತ್‌ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕಕ್ಕೆ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಒತ್ತು ನೀಡುತ್ತಿವೆ. ಕಳೆದ ಒಂದು ವರ್ಷದ ಅಂತರದಲ್ಲಿ ಎರಡು ಬಾರಿ ವಿದ್ಯುತ್‌ ದರ ಪರಿಷ್ಕರಣೆ ಆಗಿದ್ದು, ಶುಲ್ಕವನ್ನು 2022 ರಲ್ಲಿ ಪ್ರತೀ ಯೂನಿಟ್‌ಗೆ 48 ಪೈಸೆ ಮತ್ತು 2023ರಲ್ಲಿ 70 ಪೈಸೆ ಹೆಚ್ಚಿಸ ಲಾಗಿದೆ. 48 ಪೈಸೆಯಲ್ಲಿ 30 ಪೈಸೆ ಹಾಗೂ 70 ಪೈಸೆಯಲ್ಲಿ 55 ಪೈಸೆ ನಿಗದಿತ ಶುಲ್ಕವಾಗಿದೆ. ಮುಂಬರುವ ದಿನಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ “ಉಚಿತ ವಿದ್ಯುತ್‌ ಗ್ಯಾರಂಟಿ’ಯಿಂದ ಗ್ರಾಹಕರಿಗೆ ನಿರೀಕ್ಷಿತ ಮಟ್ಟದ ಲಾಭ ಸಿಗುವುದು ಅನುಮಾನ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಷರತ್ತುಗಳ ಸುಳಿವು
ಈ ಮಧ್ಯೆ ಷರತ್ತುಗಳ ಸುಳಿವನ್ನು ಕಾಂಗ್ರೆಸ್‌ ನಾಯಕರು ನೀಡಿದ್ದಾರೆ. 200 ಯೂನಿಟ್‌ ದಾಟಿದವರಿಗೆ ಅಂದರೆ, ಉದಾಹರಣೆಗೆ, 201 ಯೂನಿಟ್‌ ಬಳಕೆಯಾಗಿದ್ದರೆ ಪೂರ್ತಿ ಬಿಲ್‌ ಪಾವತಿಸಬೇಕಾಗುತ್ತದೆಯೇ? 250 ಯೂನಿಟ್‌ ಬಳಕೆಯಾಗಿದ್ದರೆ ಕೇವಲ 50 ಯೂನಿಟ್‌ಗೆ ಬಿಲ್‌ ಪಾವತಿಸಿದರೆ ಸಾಕೇ? ಬಿಪಿಎಲ್‌ನವರಿಗೆ ಮಾತ್ರ ಇದು ಅನ್ವಯವೇ? -ಇಂತಹ ಹಲವು ಗೊಂದಲಗಳಿಗೆ ಶನಿವಾರ ತೆರೆಬೀಳುವ ಸಾಧ್ಯತೆ ಇದೆ.

100 ಯೂನಿಟ್‌ಗಿಂತ ಕಡಿಮೆ ಬಳಕೆದಾರರು 1 ಕೋಟಿ
200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಘೋಷಣೆಯಿಂದ ಗ್ರಾಹಕರಿಗೆ ಅನುಕೂಲ ಆಗುವುದಿಲ್ಲ ಎಂದಲ್ಲ; ರಾಜ್ಯದಲ್ಲಿ 1.92 ಕೋಟಿ ಗೃಹ ಬಳಕೆದಾರರಿದ್ದಾರೆ. ಅವರಲ್ಲಿ ಸುಮಾರು ಶೇ. 50ರಷ್ಟು ಅಂದರೆ ಒಂದು ಕೋಟಿ ಗ್ರಾಹಕರು ತಿಂಗಳಿಗೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವವರೇ ಇದ್ದಾರೆ. ಅವರೆಲ್ಲರಿಗೂ ಯೋಜನೆಯಿಂದ ಪ್ರಯೋಜನವಾಗಲಿದೆ. ಆದರೆ ಸರಕಾರ ಯಾವ ರೀತಿಯ ಷರತ್ತುಗಳನ್ನು ವಿಧಿಸುತ್ತದೆ ಎನ್ನುವುದನ್ನು ಕಾದು ನೋಡ ಬೇಕು ಎಂದು ಕೆಇಆರ್‌ಸಿ ಸಲಹಾ ಸಮಿತಿ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್‌ ತಿಳಿಸಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, ಗೃಹಬಳಕೆಗೆ ವಾರ್ಷಿಕ 14,089 ದಶ ಲಕ್ಷ ಯೂನಿಟ್‌ಗೆ ಅನುಮೋದನೆ ನೀಡಲಾ ಗಿದೆ. ಪ್ರತೀ ಯೂನಿಟ್‌ಗೆ 9.12 ರೂ. ವೆಚ್ಚ ಆಗುತ್ತದೆ. 14,089 ದಶ ಲ ಕ್ಷ ಯೂನಿಟ್‌ಗೆ ಲೆಕ್ಕ ಹಾಕಿದರೆ 12,849 ಕೋಟಿ ರೂ. ಆಗುತ್ತದೆ. ಇದರಲ್ಲಿ ಅರ್ಧಕ್ಕರ್ಧ ಗ್ರಾಹಕರು 100 ಯೂನಿಟ್‌ಗಿಂತ ಕಡಿಮೆ ಬಳಸುವವರು ಎಂದಾದರೆ, ಅಂದಾಜು 6,400 ಕೋ. ರೂ. ಆಗುತ್ತದೆ. ಇದರ ಜತೆಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಪಂಪ್‌ಸೆಟ್‌ಗಳಿಗೆ ನೀಡಿದ ವಿದ್ಯುತ್‌ಗೆ ಪ್ರತಿಯಾಗಿ ವಾರ್ಷಿಕ ಸುಮಾರು 14,500 ಕೋ. ರೂ. ಆಗುತ್ತದೆ. ಇದರ ಹಳೆಯ ಬಾಕಿ ಕೂಡ ಸಾವಿರಾರು ಕೋ. ರೂ. ಇದೆ ಎಂದೂ ಹೇಳಿದ್ದಾರೆ.

 ವಿಜಯ ಕುಮಾರ ಚಂದರಗಿ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.