Harish Poonja ಭ್ರಷ್ಟ ಕುಟುಂಬದಿಂದ ಬಂದವರಿಂದ ಭ್ರಷ್ಟಾಚಾರದ ಪಾಠ: ಹರೀಶ್‌ ಪೂಂಜ

ಅಭಿವೃದ್ಧಿ ಯೋಚನೆಯಿಲ್ಲದ ರಾಜಕೀಯ ವ್ಯಕ್ತಿ ರಕ್ಷಿತ್‌ ಶಿವರಾಮ್‌

Team Udayavani, Aug 14, 2024, 6:30 AM IST

Harish Poonja ಭ್ರಷ್ಟ ಕುಟುಂಬದಿಂದ ಬಂದವರಿಂದ ಭ್ರಷ್ಟಾಚಾರದ ಪಾಠ: ಹರೀಶ್‌ ಪೂಂಜ

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಆಮದು ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ನನ್ನ ಮೇಲೆ ಮಾಡಿರುವ ಐಬಿ ಹಗರಣ, ರಾಷ್ಟ್ರೀಯ ಹೆದ್ದಾರಿ ಕಿಕ್‌ ಬ್ಯಾಕ್‌ ಆರೋಪ, ಬಿಮಲ್‌ನಲ್ಲಿ ನನ್ನ ಪಾಲುದಾರಿಕೆ ಈ ಎಲ್ಲ ಆರೋಪಕ್ಕೆ ಪ್ರತ್ಯುತ್ತರವಾಗಿ ನಾನು ಆ. 14ರಂದು ಬೆಳ್ತಂಗಡಿ ಮಾರಿಗುಡಿಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಇದರಲ್ಲಿ ನನ್ನ ಯಾವುದೇ ಶಾಮೀಲು ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ.

ಜತೆಗೆ ಇವರದೇ ಸರಕಾರ ಎಸ್‌ಐಟಿ ತನಿಖೆ ನಡೆಸಲಿ ಎಂದು ಶಾಸಕ ಹರೀಶ್‌ ಪೂಂಜ ನೇರ ಸವಾಲೆಸೆದರು.

ಉಜಿರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಿಟಿಷರ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿ ಬ್ರಿಟೀಷರ ಬಂಗಲೆ ಕೆಡವಿದರು ಎಂದು ಹೇಳಿದ್ದಾರೆ. ಅಲ್ಲಿ ಸೋರುತ್ತಿದ್ದ ಕಟ್ಟಡ, ಗಬ್ಬು ನಾರುತ್ತಿದ್ದ ವ್ಯವಸ್ಥೆ ಬಗ್ಗೆ, ಒಬ್ಬ ಅಧಿಕಾರಿ ಬಂದರೆ ಉಳಿದುಕೊಳ್ಳಲಾಗದ ಸ್ಥಿತಿಯ ಬಗ್ಗೆ ಮಾತನಾಡಿಲ್ಲ. ಪ್ರವಾಸೋಧ್ಯಮ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯಡಿ ಸುಂದರ ಐಬಿ ನಿರ್ಮಾಣ ಕೆಲಸವಾಗಿದೆ. ಶೇ. 60 ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದ್ದಾರೆ.

ಅದರಲ್ಲಿ ನಾನು 1 ರೂ. ತೆಗೆದುಕೊಂಡಿಲ್ಲ. ಬಿಮಲ್‌ನಲ್ಲಿ ನನ್ನ ಯಾವುದೇ ಪಾಲುದಾರಿಕೆಯಿಲ್ಲ. ರೆಖ್ಯದಲ್ಲಿ ತಡೆಗೋಡೆ ಬಿದ್ದ ವಿಚಾರದಲ್ಲಿ ಗುಣಮಟ್ಟ ಪರಿಶೀಲಿಸಿಯೇ ಬಿಲ್‌ ಪಾಸ್‌ ಅಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಡಿ.ಪಿ.ಜೈನ್‌ ಗುತ್ತಿಗೆಯಡಿ 3 ಕೋಟಿ.ರೂ. ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂಬ ಆರೋಪ ಮಾಡಿರುವ ರಕ್ಷಿತ್‌ಗೆ ಬೆಳ್ತಂಗಡಿ ಕುಗ್ರಾಮ ಸ್ಥಿತಿಯಲ್ಲಿರಬೇಕೆಂಬುದು ಅವರ ಚಿಂತನೆ. ಅಭಿವೃದ್ಧಿ ಯೋಚನೆಯಿಲ್ಲದ ರಾಜಕೀಯ ವ್ಯಕ್ತಿ ಎಂದು ಆರೋಪಿಸಿದರು.

ಮಳೆಗಾಲದ ವಿಚಾರದಲ್ಲಿ ರಾಜಕೀಯ ಮಾಡಿದ ರಕ್ಷಿತ್‌ ಶಿವರಾಮ್‌ ಕಳೆದ 2019ರಲ್ಲಿ ನೆರೆ ಬಂದಾಗ ಇದೇ ಬೆಳ್ತಂಗಡಿಯಲ್ಲಿ ಹುಟ್ಟಿದ್ದೇನೆ ಎಂದು ತಿರುಗಾಡುತ್ತಿದ್ದ ವ್ಯಕ್ತಿ ಯಾರಿಗೆ ಏನು ಸಹಾಯ ಹಸ್ತ ಚಾಚಿದ್ದಾರೆ. ಅಂದು ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿನ ಜನತೆಯ ಕಷ್ಟ ಆಲಿಸಿ ನನ್ನ ಸ್ವಂತ ದುಡಿಮೆಯಿಂದ 45 ಲಕ್ಷ ರೂ. ವರೆಗೆ ನೀಡಿದ್ದೇನೆ. ಮೊನ್ನೆ ಮಳೆಗೆ ಮನೆ ಬಿದ್ದ ಸ್ಥಳಗಳಿಗೆ ತೆರಳಿ 4ರಿಂದ 5 ಲಕ್ಷ ರೂ. ವೈಯಕ್ತಿಕ ದುಡಿಮೆಯ ಹಣ ನೀಡಿದ್ದೇನೆ. ನಿಮ್ಮ ಬೆಸ್ಟ್‌ ಫೌಂಡೇಶನ್‌ ವೇಸ್ಟ್‌ ಫೌಂಡೇಶನ್‌ ಆಗಿದೆಯಾ? ನಿಮ್ಮ ಡೋಂಗಿ ರಾಜಕೀಯ ಜನತೆಗೆ ತಿಳಿದಿದೆ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ನಿಮ್ಮ ಕುಟುಂಬ ಬೆಂಗಳೂರಿನ ಮಲ್ಲೇಶ್ವರಂನಿಂದ ಬಂದ ರೋಲ್‌ಕಾಲ್‌ ಸಹಿತ ಅನೇಕ ದಂಧೆಗಳಿಂದ ಬಂದ ಹಣದಿಂದ ಹಫ್ತಾ ಮಸೂಲಿ ಮಾಡಿ ನಿಮ್ಮ ರಕ್ತದಲ್ಲೇ ಭ್ರಷ್ಟತೆ ಇರುವಂತಹದು. ನಾನು ಅಂಗ ರಕ್ಷಕ ಇಟ್ಟು ತಿರುಗಾಡುತ್ತೇನೆ ಎನ್ನುವ ನೀವು ನಿಮ್ಮದೇ ಸರಕಾರವಿದೆ ತಾಕತ್ತಿದ್ದರೆ ತೆಗೆಸಿ. ಅಷ್ಟಕ್ಕೂ ನನ್ನ ಇಡೀ ಕುಟುಂಬ ಮತ್ತು ನಿಮ್ಮ ಇಡೀ ಕುಟುಂಬ ಲೋಕಾಯುಕ್ತ ತನಿಖೆಗೆ ಇರಿಸೋಣ ಇದು ನನ್ನ ನೇರ ಸವಾಲು ಭ್ರಷ್ಟಾಚಾರ ಯಾರು ಮಾಡಿದ್ದಾರೆ ಎಂದು ಸಾಬೀತು ಆಗಲಿ ಎಂದು ಸವಾಲೆಸೆದರು.

ಜಿಲ್ಲಾ ಉಪಾಧ್ಯಕ್ಷ ಜಯಂತ್‌ ಕೋಟ್ಯಾನ್‌, ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್‌, ಪ್ರ.ಕಾರ್ಯದರ್ಶಿಗಳಾದ ಪ್ರಶಾಂತ್‌ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

kalla

Vittalpadanur: 36 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.