![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 8, 2020, 7:00 AM IST
ಹೊಸದಿಲ್ಲಿ: ಕೋವಿಡ್ ಆರ್ಭಟ ತಗ್ಗುತ್ತಿರುವುದರ ನಡುವೆ ಲಸಿಕೆಯ ಪ್ರಯೋಗ ಅಂತಿಮ ಹಂತದಲ್ಲಿದ್ದು, ಅದು ಲಭ್ಯವಾದ ಬಳಿಕ ವಿತರಣೆಗೂ ನೀಲನಕ್ಷೆಸಿದ್ಧವಾಗುತ್ತಿದೆ.
ಲಸಿಕೆ ಹಂಚಿಕೆಗಾಗಿ ಅಂಗನವಾಡಿಗಳು, ಶಾಲೆಗಳು, ಪಂಚಾಯತ್ ಮತ್ತು ಇತರ ಸರಕಾರಿ ಕಟ್ಟಡಗಳನ್ನು ಬಳಸಲು ನಿರ್ಧರಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಘಟಕಗಳನ್ನೂ ಉಪಯೋಗಿಸಲಾಗುತ್ತದೆ ಎಂದು ಕೇಂದ್ರ ಸರಕಾರಿ ಮೂಲಗಳು ಹೇಳಿವೆ.
ಕೇಂದ್ರ ಆರೋಗ್ಯ ಇಲಾಖೆಯೇ ಲಸಿಕೆ ತಲುಪಿಸುವ ಹೊಣೆ ಹೊರಲಿದೆ. ಎಸ್ಸೆಮ್ಮೆಸ್ ರವಾನೆ, ಕ್ಯುಆರ್ ಕೋಡ್ ಜನರೇಟ್ ಮಾಡುವ ಮೂಲಕ ಪ್ರತೀ ಫಲಾನುಭವಿಯನ್ನೂ ಟ್ರ್ಯಾಕ್ ಮಾಡಲಾಗುತ್ತದೆ.
ಇಲಾಖೆಯು ಎಲ್ಲರಿಗೂ ಲಸಿಕೆ ಸಂಬಂಧ ಎಸ್ಸೆಮ್ಮೆಸ್ ಕಳುಹಿಸಲಿದೆ. ಆಧಾರ್ ಜತೆ ಇದನ್ನು ಲಿಂಕ್ ಮಾಡಲಾಗುತ್ತದೆ.
ಮೊದಲು ಯಾರಿಗೆ ಲಸಿಕೆ?
ಮೊದಲು ಲಸಿಕೆ ನೀಡುವ ಸಲುವಾಗಿ 30 ಕೋಟಿ ಮಂದಿಯನ್ನು ಗುರುತಿಸಲಾಗಿದೆ. ಅವರೆಂದರೆ,
1. ಆರೋಗ್ಯ ಸೇವೆಯಲ್ಲಿರುವ 1 ಕೋಟಿ ವೈದ್ಯರು, ಎಂಬಿಬಿಎಸ್ ವಿದ್ಯಾರ್ಥಿಗಳು, ನರ್ಸ್ಗಳು ಮತ್ತು ಆಶಾಕಾರ್ಯಕರ್ತೆಯರು.
2. 2 ಕೋಟಿ ಮುಂಚೂಣಿ ಕಾರ್ಯಕರ್ತರು.
3. ಪೊಲೀಸರು ಮತ್ತು ಸೇನಾ ಸಿಬಂದಿ.
4. 50 ವರ್ಷಕ್ಕಿಂತ ಮೇಲ್ಪಟ್ಟ 26 ಕೋಟಿ ಮಂದಿ.
5. ಇತರ ಅನಾರೋಗ್ಯಗಳನ್ನು ಹೊಂದಿರುವವರು.
ಕೋವಿಡ್ ಬೂತ್
ಲಸಿಕೆ ಹಂಚಿಕೆ ಬಗ್ಗೆ ತಜ್ಞರ ಸಮಿತಿ ನೀಲನಕ್ಷೆ ರೂಪಿಸಿದೆ. ಇದರ ಪ್ರಕಾರ, ಲಸಿಕೆ ನೀಡುವುದಕ್ಕಾಗಿ ರಾಜ್ಯ ಸರಕಾರಗಳು ಸರಕಾರಿ ಕಟ್ಟಡಗಳನ್ನು ಗುರುತಿಸಬೇಕು. ಇವುಗಳನ್ನು ಕೊರೊನಾ ಲಸಿಕೆ ಬೂತ್ಗಳನ್ನಾಗಿ ಪರಿವರ್ತಿಸಬೇಕು. ಈಗಿರುವ ಸಾರ್ವಜನಿಕ ಲಸಿಕೆ ಕಾರ್ಯಕ್ರಮದ ಜತೆಯಲ್ಲೇ ಈ ಅಭಿಯಾನವನ್ನೂ ನಡೆಸಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಆರೋಗ್ಯ ಕೇಂದ್ರಗಳು ಅಥವಾ ಘಟಕಗಳ ಜತೆಗೆ ಅಂಗನವಾಡಿ ಕಟ್ಟಡ, ಶಾಲೆಗಳು, ಪಂಚಾಯತ್ ಕಟ್ಟಡಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆಯಾಗಬೇಕು ಎಂಬುದು ಸಮಿತಿಯ ಅಭಿಪ್ರಾಯ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.