![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 24, 2020, 6:43 AM IST
ಫೈಜರ್- ಬಯೋಎನ್ಟೆಕ್ ಮತ್ತು ಮಾಡೆರ್ನಾ! ಇವು ಕೊರೊನಾದಿಂದ ಜಗತ್ತನ್ನು ಕಾಪಾಡುವಲ್ಲಿ ಹೆಚ್ಚು ಭರವಸೆ ಹುಟ್ಟುಹಾಕಿರುವ ಮುಂಚೂಣಿಯ ಲಸಿಕೆಗಳು. ಇದರ ಹೊರತಾಗಿಯೂ ಕೆಲವು ಲಸಿಕೆಗಳು ಸಫಲತೆಯ ಹಾದಿಯಲ್ಲಿವೆ. ಈ ಕುರಿತಾದ ಸಮಗ್ರ ಮುನ್ನೋಟ ಇಲ್ಲಿದೆ..
ಭಾರತಕ್ಕೆ ಲಸಿಕೆ ಯಾವಾಗ?
ಭಾರತ ಇದುವರೆಗೆ ಯಾವುದೇ ವಿದೇಶಿ ಲಸಿಕೆ ಉತ್ಪಾದನಾ ಸಂಸ್ಥೆಗಳ ಜತೆ ಖರೀದಿ ಒಪ್ಪಂದ ಮಾಡಿ ಕೊಂಡಿಲ್ಲ. ಆದರೆ, ಆಕ್ಸ್ ಫರ್ಡ್ – ಅಸ್ಟ್ರಾಜೆನಿಕಾ ಮತ್ತು ನೊವಾವ್ಯಾಕ್ಸ್ ಲಸಿಕೆ ಪೂರೈಸಲು ಭಾರತ ನಿರ್ಧರಿಸಿದೆ. ಇವೆರಡೂ ಲಸಿಕೆಗಳನ್ನು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶೀಯವಾಗಿ ಉತ್ಪಾದಿಸುತ್ತಿದೆ. ಒಂದು ವೇಳೆ ಇವು ಸಫಲತೆ ಕಂಡರೆ, ಉತ್ಪಾದನೆಯ ಅರ್ಧದಷ್ಟು ಲಸಿಕೆಗಳನ್ನು ಭಾರತವೇ ಬಳಸಿಕೊಳ್ಳಲಿದೆ. ಮಧ್ಯಂತರ ವಿಶ್ಲೇಷಣೆ ಪ್ರಕಾರ, ಇವೆರಡೂ ಲಸಿಕೆಗಳು ಮುಂದಿನ ವರ್ಷದ ಮೊದಲ ತ್ತೈಮಾಸಿಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
ಇಂದು ಸಿಎಂಗಳ ಜತೆ ಪ್ರಧಾನಿ ಚರ್ಚೆ
ಕೊರೊನಾ ಸೋಂಕಿನ ಬಿಕ್ಕಟ್ಟು, ಲಸಿಕೆ ಉತ್ಪಾದನೆ ಮತ್ತು ಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಿಎಂಗಳ ಜತೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 10ರಿಂದ ವಿಡಿಯೊ ಕಾನ್ಫರೆನ್ಸ್ ಆರಂಭವಾಗಲಿದೆ.
ಲಸಿಕೆ ಬರುವ ದಿನಾಂಕ ವ್ಯತ್ಯಾಸವಾಗುವುದೇಕೆ?
ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಪ್ರದೇಶದ ಸೋಂಕುಗಳ ಏರಿಳಿತದ ಮೇಲೆ ಇದು ನಿರ್ಧರಿತವಾಗುತ್ತದೆ. ಉದಾ: ಆಕ್ಸ್ಫರ್ಡ್- ಅಸ್ಟ್ರಾಜೆನಿಕಾ (ಮೇ) ಪ್ರಯೋಗಗಳು, ಫೈಜರ್ ಮತ್ತು ಮಾಡೆರ್ನಾಗಿಂತ (ಎರಡೂ ಜುಲೈ) ಮೊದಲೇ ಆರಂಭಗೊಂಡಿತ್ತು. ಆದರೆ, ಈ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿರುವ ಇಂಗ್ಲೆಂಡ್- ಬ್ರೆಜಿಲ್ನಲ್ಲಿ ಸೋಂಕಿನ ತೀವ್ರಗತಿ ಅಷ್ಟಾಗಿಲ್ಲ. ಅಮೆರಿಕ ಈಗಾಗಲೇ ಪ್ರಯೋಗಕ್ಕೆ ಅಗತ್ಯವಿರುವ ಸೋಂಕಿನ ಪ್ರಮಾಣವನ್ನು ತಲುಪಿದ್ದು, “ಫೈಜರ್’ ಈಗ ಮುಂಚೂಣಿಗೆ ಬಂದಿದೆ.
ಭಾರತಕ್ಕೆ ಎಷ್ಟು ಲಸಿಕೆ ಬೇಕು?
ಕೇಂದ್ರ ಸರಕಾರದ ಸದ್ಯದ ಅಂದಾಜಿನ ಪ್ರಕಾರ, ಪ್ರಾಥಮಿಕ ಆದ್ಯತೆಯಲ್ಲಿ 25-30 ಕೋಟಿ ಮಂದಿಗೆ ನೀಡಲು 50-60 ಕೋಟಿ ಡೋಸ್ಗಳು ಬೇಕು. ಒಟ್ಟು ಇಡೀ ದೇಶಕ್ಕೆ 200-250 ಕೋಟಿ ಡೋಸ್ಗಳು ಅವಶ್ಯ. 4 ಶ್ರೇಣಿಗಳಲ್ಲಿ ಲಸಿಕೆ ನೀಡಲು ಸರಕಾರ ತೀರ್ಮಾನಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.