ಪಡಿತರ ಬಳಕೆದಾರರಿಗಾಗಿ ಮನೆ ಮನೆ ಸಮೀಕ್ಷೆ!

ಮೂರು ತಿಂಗಳಲ್ಲಿ 5.32 ಲಕ್ಷ ಮಂದಿ ಪಡಿತರ ಪಡೆದಿಲ್ಲ- ಆಹಾರ ಧಾನ್ಯಕ್ಕಿಂತ ವೈದ್ಯಕೀಯ ಸೇವೆಗೆ ಹೆಚ್ಚು ಬಳಕೆ

Team Udayavani, Jul 27, 2023, 7:14 AM IST

ration

ಬೆಂಗಳೂರು: ಆಹಾರ ಧಾನ್ಯ ಪಡೆಯದ ಪಡಿತರ ಚೀಟಿ ಬಳಕೆದಾರರ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಇವರ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಲು ಚಿಂತನೆ ನಡೆಸಿದೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಈ ಮಾಹಿತಿ ನೀಡಿದ್ದಾರೆ. ಮಾರ್ಚ್‌, ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆಹಾರ ಧಾನ್ಯವನ್ನೇ ಪಡೆಯದ 5.32 ಲಕ್ಷ ಪಡಿತರ ಚೀಟಿಗಳಿದ್ದು, ಅನೇಕರು ಆಹಾರ ಧಾನ್ಯ ಪಡೆಯುವುದಕ್ಕಿಂತ ಹೆಚ್ಚು ವೈದ್ಯಕೀಯ ಬಳಕೆಗಷ್ಟೇ ಉಪಯೋಗಿಸುತ್ತಿದ್ದಾರೆ ಎಂಬುದು ಕಂಡು ಬಂದಿದೆ. ಹೀಗಾಗಿ ಪಡಿತರ ಧಾನ್ಯಗಳ ಅಗತ್ಯ ಎಷ್ಟು ಜನರಿಗಿದೆ? ಆರೋಗ್ಯ ಸೇವೆಗಾಗಿ ಪಡಿತರ ಚೀಟಿಯನ್ನು ಬಳಸುತ್ತಿರುವವ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸದ್ಯದಲ್ಲೇ ಮನೆಮನೆ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.

509 ಕೋಟಿ ರೂ. ಸಂದಾಯ

ಸದ್ಯ ಒಟ್ಟು 87,96,409 ಪಡಿತರ ಚೀಟಿಯ 3,10,86,328 ಫ‌ಲಾನುಭವಿಗಳ ಖಾತೆಗೆ 509.95 ಕೋಟಿ ರೂ. ಪಾವತಿ ಮಾಡಿದ್ದು, ಶೇ.75ರಷ್ಟು ಫ‌ಲಾನುಭವಿಗಳಿಗೆ ಹಣ ಸಂದಾಯ ಆಗಿದೆ. ಶಿವಮೊಗ್ಗದ 3.08 ಲಕ್ಷ ಕಾರ್ಡ್‌ಗಳ 10.83 ಲಕ್ಷ ಫ‌ಲಾನುಭವಿಗಳಿಗೆ 17.47 ಕೋಟಿ ರೂ.ಗಳನ್ನು 2 ದಿನಗಳಲ್ಲಿ ಹಾಗೂ ಉಡುಪಿ, ವಿಜಯಪುರ ಜಿಲ್ಲೆಗಳ 3.84 ಲಕ್ಷ ಪಡಿತರ ಚೀಟಿಗಳ 15.55 ಲಕ್ಷ ಫ‌ಲಾನುಭವಗಳಿಗೆ ಖಾತೆಗೆ 25.43 ಕೋಟಿ ರೂ.ಗಳನ್ನು ನಾಲ್ಕೈದು ದಿನದಲ್ಲಿ ಜಮೆ ಮಾಡಲಾಗುತ್ತದೆ. ಒಟ್ಟಾರೆ ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಜುಲೈ ತಿಂಗಳ ಪಡಿತರ ಧಾನ್ಯದ ಬದಲು 170 ರೂ. ಕೊಡುವ ಕಾರ್ಯಕ್ರಮ ಎಲ್ಲರಿಗೂ ತಲುಪಲಿದೆ ಎಂದು ತಿಳಿಸಿದರು.

– ಒಟ್ಟು ಪಡಿತರ ಚೀಟಿ- 1,28,17,337

– ಅರ್ಹ ಪಡಿತರ ಚೀಟಿ- 97,27,165

– ಕುಟುಂಬದ ಮಾಲಕರನ್ನು ನಿರ್ಧರಿಸದವು- 53,547

– ಬಹು ಮಾಲಕತ್ವ ಹೊಂದಿರುವಂಥವು- 4,845

– ಆಧಾರ್‌ ವಿಲೀನಗೊಳ್ಳದ್ದು – 53,349

– 3 ತಿಂಗಳುಗಳಿಂದ ಆಹಾರ ಧಾನ್ಯ ಪಡೆಯದ್ದು- 5,32,349

– 1-3 ಸದಸ್ಯರಿರುವ ಅಂತ್ಯೋದಯ ಅನ್ನ ಕಾರ್ಡ್‌- 3,40,425

– ಬ್ಯಾಂಕ್‌ ಖಾತೆ, ಆಧಾರ್‌ ವಿಲೀನಗೊಳ್ಳದ ಕಾರ್ಡ್‌ಗಳು- 21,69,650

– ನಕಲಿ ಆಧಾರ್‌ ಸಂಖ್ಯೆ ವಿಲೀನಗೊಂಡ ಕಾರ್ಡ್‌ಗಳು- 14

– ಅನರ್ಹತೆಗೆ ಅರ್ಹವಿರುವ ಪಡಿತರ ಚೀಟಿಗಳು- 30,90,172

– ಹೊಸದಾಗಿ ಬಂದಿರುವ ಅರ್ಜಿಗಳ ಸಂಖ್ಯೆ-3 ಲಕ್ಷ

ಆಗಸ್ಟ್‌ನಲ್ಲೂ ಖಾತೆಗೆ ಹಣ

ಅನ್ನಭಾಗ್ಯ ಯೋಜನೆಗೆ ಆಗಸ್ಟ್‌ ತಿಂಗಳಲ್ಲೂ ಅಕ್ಕಿ ಸಿಗುವುದು ಅನುಮಾನವಾಗಿರುವುದರಿಂದ ಅಕ್ಕಿಯ ಬದಲು ಹಣವನ್ನೇ ಕೊಡಲು ಸರಕಾರ ನಿರ್ಧರಿಸಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಬೇಕಿರುವ 2.40 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಹೊಂದಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಒಂದು ವೇಳೆ ಆಗಸ್ಟ್‌ ವೇಳೆಗೆ ಹೆಚ್ಚುವರಿ ಅಕ್ಕಿ ಸಿಗದಿದ್ದರೆ, ಈಗಿರುವ ವ್ಯವಸ್ಥೆಯಂತೆ 5 ಕೆ.ಜಿ. ಹಾಗೂ ಉಳಿದ 5 ಕೆ.ಜಿ. ಅಕ್ಕಿಯ ಬದಲು ನಗದು ನೀಡುವುದನ್ನೇ ಮುಂದುವರಿಸಲಿದೆ. ಹೆಚ್ಚುವರಿ 2.40 ಲಕ್ಷ ಟನ್‌ ಅಕ್ಕಿಗಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸುತ್ತೇವೆ. ಸ್ಥಳೀಯವಾಗಿ ಆಹಾರಧಾನ್ಯ ಖರೀದಿಸುವ ಬಗ್ಗೆ ರೈತ ಸಂಘಟನೆ, ಅಕ್ಕಿ ಗಿರಣಿ ಮಾಲಕರ ಜತೆಗೂ ಸಮಾಲೋಚನೆ ಮಾಡುತ್ತೇವೆ. ಅದರ ಇನ್ನೊಂದು ತಿಂಗಳು ಕಷ್ಟ ಆಗಬಹುದು ಎಂದರು.

ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿಗಳಿದ್ದು, ಅವುಗಳ ಪೈಕಿ 97.27 ಲಕ್ಷ ರೇಷನ್‌ ಕಾರ್ಡ್‌ ಮಾತ್ರ ಅರ್ಹವಾಗಿವೆ. ಹೊಸದಾಗಿ 3 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

-ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ

ಟಾಪ್ ನ್ಯೂಸ್

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ತೋಡಿಗೆ ಅಡಿಕೆ ಮರವೇ ಸಂಕ!

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.