![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 19, 2022, 11:11 AM IST
ಬೆಂಗಳೂರು : ದೋಟಿ ಕೊಕ್ಕೆಗೂ ಸಬ್ಸಿಡಿ ಕೊಡಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಈಗ ಉತ್ತರ ಕನ್ನಡದಲ್ಲಿ ದೋಟಿ ಸಬ್ಸಿಡಿಗಾಗಿ ಅಡಿಕೆ ಬೆಳೆಗಾರರ ಧ್ವನಿ ಗಟ್ಡಿಯಾಗಿದೆ.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಒಂದು ದೋಟಿ ಕೊಕ್ಕೆಯ ಬೆಲೆ ಈಗ 80 ಸಾವಿರ ರೂ. ಇದೆ. ಎರಡು ಕ್ವಿಂಟಾಲ್ ಚಾಲಿ ಅಡಕೆ ಕೊಟ್ಟರೂ ಒಂದು ದೋಟಿ ಕೊಕ್ಕೆ ಖರೀದಿ ಮಾಡಲಾಗದ ಸ್ಥಿತಿ ಇದೆ. “ಅಡಕೆಗೆ ಹೋದ ಮಾನ ದೋಟಿ ಕೊಕ್ಕೆ ಕೊಟ್ಟರೂ ಬಾರದು ” ಎಂಬ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ಹೀಗಾಗಿ ಸ್ಪೀಕರ್ ಕಾಗೇರಿ ಸಬ್ಸಿಡಿ ವ್ಯಾಪ್ತಿಗೆ ದೋಟಿ ಕೊಕ್ಕೆಯನ್ನೂ ಸೇರಿಸಿ ಎಂದು ತೋಟಗಾರಿಕಾ ಸಚಿವರಿಗೆ ಸೂಚನೆ ನೀಡಿರುವುದು ಬೆಳೆಗಾರರಿಗೆ ಸ್ವಲ್ಪ ಬಲ ಬಂದಂತಾಗಿದೆ.
ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಶಿರಸಿಯ ಹಕ್ಕಿಮನೆ ನಾಗರಾಜ್ ಹೆಗಡೆಯವರ ಪ್ರಕಾರ ” ಅಡಿಕೆ ಬೆಳೆಗಾರರಲ್ಲಿ ಎರಡು ವಿಧ. ದೊಡ್ಡ ಜಮೀನುದಾರರು, ಚಿಕ್ಕ ಹಿಡುವಳಿಧಾರರು ಎಂದು ಪ್ರತ್ಯೇಕ. ಆದರೆ ಸಮಸ್ಯೆ ಎರಡೂ ಜನರಿಗೂ ಒಂದೆ. ಐದಾರು ಎಕರೆ ತೋಟ ಇರುವವರಿಗೆ ವರ್ಷಕ್ಕೊಂದು ದೋಟಿ ತರುವುದು ಸಮಸ್ಯೆಯಾಗಲಿಕ್ಕಿಲ್ಲ. ಆದರೆ ಒಂದು ಎಕರೆ ಹೊಂದಿರುವ ಚಿಕ್ಕ ಹಿಡುವಳಿಧಾರರಿಗೆ ಇದು ದೊಡ್ಡ ಬಾಬತ್ತಾಗುತ್ತದೆ. ಅದರಲ್ಲಿಯೂ ಘಟ್ಟದ ಕೆಳಗಿನ ತಾಲೂಕಿನ ರೈತರಿಗಂತೂ ನಿಶ್ಚಿತವಾಗಿ ಹೊರೆ. ಹೀಗಾಗಿ ಶೇ.80ರಷ್ಟು ಸಬ್ಸಿಡಿ ನೀಡಬೇಕು” ಎನ್ನುತ್ತಾರೆ.
ಯಲ್ಲಾಪುರದ ರಾಘವೇಂದ್ರ ಹೆಗಡೆ ಕುಂದರಗಿ ಅವರ ಪ್ರಕಾರ, ಅಡಿಕೆ ಕುಯ್ಯುವುದು ಅತ್ಯಂತ ಅಪಾಯಕಾರಿ ಕೆಲಸ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಒಂದಿಬ್ಬರು ಕೊನೆ ಗೌಡರು ಮರದಿಂದ ಕೆಳಕ್ಕೆ ಬಿದ್ದು ಸಾಯುತ್ತಾರೆ. ಕೊನೆ ಕೊಯ್ಲು ಮಾಡುವ ಪರಿಣತ ವ್ಯಕ್ತಿಗಳು ಕಡಿಮೆ. ದೋಟಿ ಕೊಕ್ಕೆ ಯಿಂದ ಅಡಕೆ ಕಟಾವು ಮಾಡುವ ಎಲ್ಲ ಸಮಸ್ಯೆಗೆ ಪರಿಹಾರ ಇಲ್ಲದೇ ಇದ್ದರೂ, ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತಾಗುತ್ತದೆ. ಹೀಗಾಗಿ ತೋಟಗಾರಿಕೆ ಇಲಾಖೆ ಈ ವರ್ಷವೇ ದೋಟಿಯನ್ನು ಸಬ್ಸಿಡಿ ವ್ಯಾಪ್ತಿಗರ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.