ಮೂಲೆಗೆ ಎಸೆಯುವ ಟಯರ್‌ ಈಗ ಪರಿಸರ ಸ್ನೇಹಿ!


Team Udayavani, Apr 10, 2021, 4:15 AM IST

ಮೂಲೆಗೆ ಎಸೆಯುವ ಟಯರ್‌ ಈಗ ಪರಿಸರ ಸ್ನೇಹಿ!

ಕಾರ್ಕಳ: ನಿರುಪಯುಕ್ತ ಎಂದು ಮೂಲೆಗೆ ಎಸೆದು ಬಿಡುವ ವಸ್ತುಗಳನ್ನು ಪರಿಸರಸ್ನೇಹಿಯಾಗಿಸುವ ಯತ್ನ ಇಲ್ಲೊಂದೆಡೆ ಸದ್ದಿಲ್ಲದೆ ನಡೆಯುತ್ತಿದೆ. ಮಾಳದ ಕಡಾರಿಯ ಪ್ರಗತಿಪರ ಕೃಷಿಕ ಜಗದೀಶ ಪ್ರಭು ಅವರು ಕೊರೊನಾ ಕಾಲಘಟ್ಟದಲ್ಲಿ ನಡೆಸಿದ ಪ್ರಯೋಗಗಳು ಫ‌ಲ ನೀಡಿದ್ದು, ಹೂದೋಟದ ಅಂದವನ್ನು ಇಮ್ಮಡಿಗೊಳಿಸಿದೆ.

ವಾಹನಗಳ ಹಳೆ ಟಯರ್ ಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಸುಡು ವುದು ಇತ್ಯಾದಿ ಕ್ರಮಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತವೆ. ಮಳೆಗಾಲ ದಲ್ಲಿ ಟಯರ್‌ಗಳಲ್ಲಿ ನೀರು ನಿಂತು ಆರೋಗ್ಯಕ್ಕೂ ಸಮಸ್ಯೆಯುಂಟು ಮಾಡುತ್ತವೆ. ಇದನ್ನು ಮನಗಂಡ ಕಡಾರಿಯ ಜಗದೀಶ ಪ್ರಭು ಅವರು ಅದಕ್ಕೊಂದು ಹೊಸ ರೂಪ ಕೊಡುವ ಪ್ರಯತ್ನಕ್ಕೆ ಮುಂದಾದರು.
ಯೂಟ್ಯೂಬ್‌ನಲ್ಲಿ ಹುಡುಕಾಟದ ವೇಳೆ ಟಯರ್‌ನಿಂದ ಹೂಕುಂಡ ತಯಾರಿಸುವ ಐಡಿಯಾ ಸಿಕ್ಕಿದ್ದು, ಕೊರೊನಾ ಲಾಕ್‌ಡೌನ್‌ ವೇಳೆ ಅದನ್ನು ಕಾರ್ಯರೂಪಕ್ಕಿಳಿಸಿದ್ದಾರೆ. ಬ್ಲೇಡ್‌ನಿಂದ ವಿವಿಧ ರೂಪದಲ್ಲಿ ಕತ್ತರಿಸಿ ಬೇಕಾದ ರೀತಿ ಕತ್ತರಿಸಿದ್ದಾರೆ. ಬಳಿಕ ಬಣ್ಣ ಬಳಿದಿದ್ದಾರೆ.

ಈವರೆಗೆ 30ಕ್ಕೂ ಹೆಚ್ಚು ಟಯರ್‌ ಹೂಕುಂಡಗಳನ್ನು ಮಾಡಿದ್ದಾರೆ. ಅದಕ್ಕೆ ಬೇಡಿಕೆಯೂ ಬಂದಿದೆ. ಮಾರಾಟ ಉದ್ದೇಶ ಹೊಂದಿಲ್ಲವಾದರೂ ಹವ್ಯಾಸವಾಗಿ ಆರಂಭಿಸಿದ್ದಕ್ಕೆ ಈಗ ಹೆಚ್ಚಿನ ಬೇಡಿಕೆ ಬರುತ್ತಿದೆ. ರೇಡಿಯಲ್‌ ಟಯರ್‌ಗಳಿಂದ ಹೂಕುಂಡ ನಿರ್ಮಾಣ ಸುಲಭವಾಗಿದ್ದು, ಆಸಕ್ತಿ ಇದ್ದವರು ಮನೆಯಲ್ಲೇ ಮಾಡಬಹುದು ಎನ್ನುತ್ತಾರೆ. ಟಯರ್‌ನಲ್ಲಿ ಗಿಡ ಬೆಳೆಯುವುದರಿಂದ ಗೊಬ್ಬರ, ನೀರು ಹಾಕಲು ಸಾಕಷ್ಟು ಸ್ಥಳಾವಕಾಶ ಕೂಡ ಸಿಗುತ್ತದೆ ಎನ್ನುತ್ತಾರೆ.
ಇವರು ಈ ಮೊದಲು ಪಿವಿಸಿ ಪೈಪ್‌ ಬಳಸಿ ಬಾವಿಯಿಂದ ನೀರೆಳೆವ ಹೊಸ ವಿಧಾನವೊಂದನ್ನು ಆವಿಷ್ಕರಿಸಿದ್ದರು.

ಆಸಕ್ತಿ, ಶ್ರಮ ಅಗತ್ಯ
ಟಯರ್‌ನಿಂದ ಹೂಕುಂಡ ನಿರ್ಮಾಣಕ್ಕೆ ಆಸಕ್ತಿ ಮತ್ರು ಶ್ರಮ ಅಗತ್ಯ. ಲಾಕ್‌ಡೌನ್‌ ವೇಳೆ ಇದರ ಬಗ್ಗೆ ಗಮನಹರಿಯಿತು. ನಿರುಪಯುಕ್ತ ವಸ್ತುಗಳನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ.
-ಜಗದೀಶ ಪ್ರಭು, ಕೃಷಿಕ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.