Election 2023: ಡೈಲಿ ಡೋಸ್ – ಒಬ್ಬ ಸಿಎಂ ಮೂವರು ಡೆಪ್ಯೂಟಿ ಸಿಎಂ ಕಾಲ ಮುಗೀತು
Team Udayavani, Apr 6, 2023, 7:36 AM IST
ಅಲ್ವೋ ಸೀತಾರಾಮು, “ಈ ಒಬ್ಬರೇ ಚೀಫ್ ಮಿನಿಸ್ಟರ್ ಆಗೋ ಕಾಲ ಯಾವಾಗ ಮುಗಿಯತಪ್ಪಾ?” ಎಂದು ಕೇಳಿದರು ಶೀನಪ್ಪ. ಯಾಕೆ ಸ್ವಾಮಿಗಳೇ, ಇಡೀ ತಂಡಕ್ಕೆ ಕ್ಯಾಪ್ಟನ್ ಒಬ್ನೇ ಇರಬೇಕಲ್ವಾ?, ಹಾಗೆಯೇ ಚೀಫ್ ಮಿನಿಸ್ಟರ್ ಸಹ ಒಬ್ಬನೇ ಇರಬೇಕು’ ಎಂದು ವಾದ ಮಂಡಿಸಿದ ಸೀತಾರಾಮು.
“ನಿನ್ನ ಮಾತೇನೋ ಸರಿ. ಆದರೆ ಈ ಕಲ್ಪನೆ (ಕಾನ್ಸೆಪ್ಟ್), ಆಲೋಚನೆ ಎಲ್ಲ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಂತಾರೆ ಈ ಮ್ಯಾನೇಜ್ಮೆಂಟ್ ಗುರುಗಳು. ಪಾಲಿಟಿಕ್ಸ್ ಗೂ ಅನ್ವಯವಾಗಬೇಕಲ್ಲಪ್ಪಾ?” ಎಂದರು ಶೀನಪ್ಪ.
ಅದು ಹೇಗೆ ಸಾಧ್ಯ? ಎಲ್ಲರೂ ಚೀಫ್ ಮಿನಿಸ್ಟರ್ ಆದರೆ ಈ ಡೆಪ್ಯೂಟಿ ಸಿಎಂ ಪೋಸ್ಟ್ ಏನು ಮಾಡೋದು? ಕ್ಯಾಬಿನೆಟ್, ಸ್ಟೇಟ್ ಅನ್ನೋರ ಕಥೆ?-ಸೀತಾ
ರಾಮು ಪ್ರಶ್ನೆ ಇಟ್ಟ.
“ಅದು ಬಹಳ ಸುಲಭ. ನೋಡಯ್ನಾ, ನೀನು ಸಾಲಿನಲ್ಲಿ ನಿಂತಿದ್ದೀಯಾ ಅಂದುಕೊ. ನಿನ್ನ ಮುಂದಿನವ ಮುಂದಕ್ಕೆ ಹೆಜ್ಜೆ ಇಟ್ಟರೆ ನೀನು ಏನು ಮಾಡ್ತೀಯಾ? ಒಂದು ಹೆಜ್ಜೆ ಮುಂದಕ್ಕೆ ಹೋಗ್ತಿಯಾ. ಸಾಲಿನ ಕೊನೆಯವನು ಏನು ಮಾಡ್ತಾನೆ, ಅವನೂ ಒಂದು ಹೆಜ್ಜೆ ಮುಂದೆ ಬರ್ತಾನೆ. ಅಷ್ಟೇ” ಎಂದರು ಶೀನಪ್ಪ.
ಅದರಂತೆ, ಒಬ್ಬರ ಬದಲು ನಾಲ್ಕೋ, ಐದೋ ಅನಿವಾರ್ಯ ಅಂತಾ ಹತ್ತು ಚೀಫ್ ಮಿನಿಸ್ಟರ್ ಮಾಡಿದೆವು ಅಂದ್ರೆ… ಕ್ಯಾಬಿನೆಟ್ ಬೆಂಚ್ನಲ್ಲಿದ್ದ 20 ಮಂದಿ ಡೆಪ್ಯೂಟಿ ಸಿಎಂ ಆಗ್ತಾರೆ. ಕೊನೆಗೇ ಸ್ಟೇಟ್ ಬೆಂಚ್ ಖಾಲಿ ಆಗುತ್ತಷ್ಟೇ” ಅನ್ನೋದು ಅವರ ಲೆಕ್ಕಾಚಾರ.
“ಆದ್ರೆ ಇಷ್ಟೊಂದು ಮಂದಿ ಚೀಫ್ ಮಿನಿಸ್ಟರ್, ಡೆಪ್ಯೂಟಿ ಚೀಫ್ ಮಿನಿಸ್ಟರ್, ಕ್ಯಾಬಿನೆಟ್ ಮಿನಿಸ್ಟರ್ ಇದ್ದರೆ ಯಾರ ಮಾತು ಯಾರು ಕೇಳ್ತಾರೆ? ಎಲ್ಲರೂ ಮೇರಾ ಗೋಡಾ, ಮೇರಾ ಮೈದಾನ್ ಅಂತ ಓಡಿಸ್ತಾ ಇದ್ರೆ ಆಡಳಿತ ಹಳ್ಳ ಹಿಡಿಯೋದಿಲ್ಲವಾ” ಎಂದು ಕೇಳಿದ ಸೀತಾರಾಮು.
“ಹಾಗಾದ್ರೆ ಒಂದು ಕೆಲಸ ಮಾಡೋಣ. ಇಷ್ಟೊಂದು ಸಿಎಂ, ಡೆಪ್ಯೂಟಿ ಸಿಎಂಗಳ ಉಸ್ತುವಾರಿಗೆ ಒಬ್ಬ ಗ್ರೂಪ್ ಸಿಎಂ ಅನ್ನ ತಂದುಬಿಡೋಣ. ಎಲ್ಲ ಸರಿ ಹೋಗುತ್ತೆ” ಅಂದರು ಶೀನಪ್ಪ. ಕಣ್ಣಿನ ಹುಬ್ಬು ಹಾರಿಸಿ ಒಪ್ಪಿಗೆ ಕೊಟ್ಟ ಸೀತಾರಾಮು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.