ಚುನಾವಣೆಯಲ್ಲಿ ಖರ್ಚಿನದ್ದೇ ಚಿಂತೆ!: ಸದನದಲ್ಲಿ ಸ್ವಾರಸ್ಯಕರ ಚರ್ಚೆ


Team Udayavani, Jul 14, 2023, 7:23 AM IST

vidhana soudha

ವಿಧಾನಸಭೆ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜಕೀಯ ಪಕ್ಷಗಳಿಗೀಗ ಖರ್ಚಿನದ್ದೇ ದೊಡ್ಡ ಚಿಂತೆಯಾದಂತಿದೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡುತ್ತಿದ್ದ ಆಡಳಿತಾರೂಢ ಕಾಂಗ್ರೆಸ್‌ನ‌ ಬಿ.ಆರ್‌. ಪಾಟೀಲ್‌, ಇದ್ದಕ್ಕಿದ್ದಂತೆ ಚುನಾವಣಾ ಖರ್ಚಿನತ್ತ ಹೊರಳಿದರು. ಇದಕ್ಕೆ ಪಕ್ಷಭೇದ ಮರೆತು ಚರ್ಚೆಗಿಳಿದ ಶಾಸಕರು, ಚುನಾವಣೆ ಎಂದರೆ ಹಿಂದೆ ಸರಿಯುವಂತಾಗಿದೆ ಎಂದು ಮಮ್ಮಲ ಮರುಗಿದರು.

ಶಾಸಕರೆಂದರೆ ಅಹವಾಲು ಆಲಿಕೆ ಕೇಂದ್ರಗಳಂತಾಗಿದ್ದೇವೆ ಎಂದು ಮಾತು ಆರಂಭಿಸಿದ ಬಿ.ಆರ್‌. ಪಾಟೀಲ್‌, ಉದ್ಯಮಿಗಳ ಹಣಕಾಸಿನ ಕಾರಿಡಾರ್‌ನಂತಾಗಿದ್ದೇವೆ. ಚುನಾವಣಾ ವ್ಯವಸ್ಥೆ ಹಾಳಾಗಿದೆ. ಹಿಂದಿನಂತೆ ಈಗಿಲ್ಲ ಎಂದು ಮಾತಿನ ಲಹರಿ ಮುಂದುವರಿಸಿದ್ದರು.

ಇದಕ್ಕೆ ಬ್ರೇಕ್‌ ಹಾಕಲು ಯತ್ನಿಸಿದ ಸ್ಪೀಕರ್‌ ಖಾದರ್‌, ಅದನ್ನೆಲ್ಲ ಚರ್ಚಿಸಿ ಪ್ರಯೋಜನ ಇಲ್ಲ ಬಿಡಿ. ಪರಿಹಾರ ಇದ್ದರೆ ಹೇಳಿ. ನನ್ನ ತಂದೆ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸ ಆಗಿದೆ. ನೀವು ಮೊದಲ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಇದ್ದ ಪರಿಸ್ಥಿತಿಯೇ ಈಗಲೂ ಇದೆಯೇ? ಹಿಂದೆ ಇದ್ದಂತೆ ಈಗಿಲ್ಲ, ಈಗಿನಂತೆ ಮುಂದೆ ಇರುವುದಿಲ್ಲ. ಹಿಂದೆಲ್ಲಾ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಸೇವೆಗಳನ್ನು ಮಾಡಿಕೊಂಡು ಚುನಾವಣಾ ರಾಜಕಾರಣಕ್ಕೆ ಅನಿವಾರ್ಯವಾಗಿ ಬರುವವರು ಬರುತ್ತಿದ್ದರು. ವ್ಯಾಪಾರ ಮಾಡುವವರು ವ್ಯಾಪಾರ ಮಾಡಿಕೊಂಡು ಇರುತ್ತಿದ್ದರು. ಆದರೆ, ಈಗ ಹಾಗಿಲ್ಲ ಎನ್ನುತ್ತಾ ಮಾತಿನ ಓಟದಲ್ಲಿ ಹೇಳಿಬಿಟ್ಟರು. ಇಷ್ಟು ಸಾಕಾಗಿತ್ತು ಶಾಸಕರು ಮಾತಿಗಿಳಿಯಲು.

ನಂಗೇನ್‌ ಕೊಡುತ್ತೀಯಾ ಅಂತಾರೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡುತ್ತಾ, ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಏನು ತರುತ್ತೀಯಾ ಎಂದು ಜನ ಕೇಳುವುದಿಲ್ಲ. ನನಗೇನು ಕೊಡುತ್ತೀಯಾ ಎನ್ನುತ್ತಾರೆ. ದೇವಸ್ಥಾನ, ಜೀರ್ಣೋದ್ಧಾರ, ಉತ್ಸವ ಎಂದು ಬರುತ್ತಾರೆ. ಕಡಿಮೆ ಕೊಟ್ಟರೆ ಸಾಲದು ಎನ್ನುತ್ತಾರೆ. ಹಿಂದೆಲ್ಲಾ 5 ಸಾವಿರ ರೂ.ಗಳಲ್ಲಿ ಚುನಾವಣೆ ಮುಗಿದು ಹೋಗುತ್ತಿತ್ತು. ಈಗ ಚುನಾವಣೆಗಿಂತ ಮೂರ್‍ನಾಲ್ಕು ತಿಂಗಳ ಮೊದಲೇ ಕುಕ್ಕರ್‌, ಫ್ರಿಡ್ಜ್ ಹಂಚುವ ಸ್ಥಿತಿಗೆ ಬಂದಿದ್ದೇವೆ. ಮೂರೂ ಪಕ್ಷದವರು ಹಣ ಕೊಡುತ್ತೇವೆ. ಜನರೂ ಕಷ್ಟದಲ್ಲಿದ್ದಾರೆ. ಕೊಟ್ಟಿದ್ದನ್ನು ತೆಗೆದುಕೊಳ್ಳುತ್ತಾರೆ. ಮತದಾನದ ನಂತರದ ಡಬ್ಬಿ ತೆಗೆದಾಗಲೇ ಗೊತ್ತಾಗುವುದು. ಹಣ ಕೊಡದಿದ್ದರೆ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಅದರ ನಡುವೆಯೂ ಪ್ರಾಮಾಣಿಕವಾಗಿ ಗೆಲ್ಲುವವರೂ ಇದ್ದಾರೆ ಎಂದು ಸಮರ್ಥಿಸಿಕೊಂಡರು.

ಮತದಾರರೆಂಬ ನದಿ ಮೂಲವನ್ನೇ ಹಾಳು ಮಾಡಿದ್ದೇವೆ: ಶಾಂತವೇರಿ ಗೋಪಾಲಗೌಡರ ಕಾಲದ ಚುನಾವಣಾ ದಿನಗಳನ್ನು ಸ್ಮರಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಅಂದು ಜನರೇ ಒಟ್ಟು ಮಾಡಿ 5 ಸಾವಿರ ರೂ.ಗಳನ್ನು ಶಾಂತವೇರಿ ಗೋಪಾಲಗೌಡರಿಗೆ ಕೊಟ್ಟು ಚುನಾವಣೆಯಲ್ಲೂ ಗೆಲ್ಲಿಸುತ್ತಿದ್ದರು. ಇದನ್ನು ನೋಡಿಕೊಂಡು ಬೆಳೆದವನು ನಾನು. ನಾನು ಚುನಾವಣೆಗೆ ನಿಂತಾಗಲೂ ಅಷ್ಟೇ ಬೆಂಬಲವನ್ನು ಜನರು ಕೊಟ್ಟಿದ್ದರು. ನಾವೀಗ ಮತದಾರರೆಂಬ ನದಿ ಮೂಲ ಹಾಳು ಮಾಡಿದ್ದೇವೆ. ರಾಜಕಾರಣಿ ಹಾಳಾದರೆ 5 ವರ್ಷಕ್ಕೊಮ್ಮೆ ಬದಲಿಸಬಹುದು. ಮತದಾರರೇ ಹಾಳಾದರೆ ಹೇಗೆ ಎಂದು ಪ್ರಶ್ನೆ ಹಾಕಿದರು.

ಜನಗಳಿಗೆ ಹತ್ತಿರವಾದರೂ ಕಷ್ಟ, ದೂರಾದರೂ ಕಷ್ಟ
ಚುನಾವಣೆ ಎಂಬುದು ಪರೀಕ್ಷೆ ಇದ್ದಂತೆ. ಕನಿಷ್ಠ 35 ಅಂಕ ಪಡೆದರಷ್ಟೇ ಗೆಲ್ಲುವುದು. ಜನರ ಪ್ರೀತಿ ಗಳಿಸಿದರೆ ಇದಕ್ಕೆಲ್ಲಾ ಕಡಿವಾಣ ಹಾಕಬಹುದು ಎಂದು ಸ್ಪೀಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೊಪ್ಪದ ಕುಮಾರಸ್ವಾಮಿ, ಜನಗಳ ಹತ್ತಿರ ಇದ್ದು ನೋಡಿ ಬಂದಿದ್ದೇನೆ. ಅದೂ ಕಷ್ಟವೇ ಇದೆ. ದೂರ ಇದ್ದು ಚುನಾವಣೆಗಿಂತ ಒಂದು ವಾರ ಮೊದಲು ಏನು ಬೇಕು ಅದನ್ನು ಕೊಟ್ಟರೆ ಗೆಲ್ಲುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಜಯಪ್ರಕಾಶ್‌ ನಾರಾಯಣ ಅವರ ಚಳವಳಿಯಿಂದ ಪ್ರೇರಿತನಾಗಿ ರಾಜಕಾರಣಕ್ಕೆ ಬಂದವನು. ಹಣ ಕೊಟ್ಟು ಗೆಲ್ಲುವಷ್ಟು ಸಾಮರ್ಥ್ಯ ನನ್ನಲ್ಲಿಲ್ಲ. ಇಂದು ಕಾಲ ಬದಲಾಗಿದೆ.
ಬಿ.ಆರ್‌. ಪಾಟೀಲ್‌, ಕಾಂಗ್ರೆಸ್‌ ಶಾಸಕ

ಹಿಂದೆಲ್ಲ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಸೇವೆ ಮಾಡಿಕೊಂಡು ಅನಿವಾರ್ಯವಾಗಿ ಚುನಾವಣಾ ರಾಜಕಾರಣಕ್ಕೆ ಬರುವವರು ಬರುತ್ತಿದ್ದರು. ವ್ಯಾಪಾರ ಮಾಡುವವರು ಮಾಡಿಕೊಂಡಿದ್ದರು. ಈಗ ಹಾಗಿಲ್ಲ.
ಯು.ಟಿ. ಖಾದರ್‌, ಸ್ಪೀಕರ್‌

ಮೂರೂ ಪಕ್ಷದವರಿಂದ ಜನರು ಹಣ ಪಡೆಯುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ಡಬ್ಬಿ ತೆರೆದಾಗಲೇ ಯಾರಿಗೆ ಮತ ಬಿದ್ದಿದೆ ಎಂಬುದು ಗೊತ್ತಾಗುವುದು.
ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಟಾಪ್ ನ್ಯೂಸ್

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.