ಮೊದಲ ವಾಯುಪಡೆ ಪರಂಪರಾ ಕೇಂದ್ರ ಉದ್ಘಾಟನೆ

ವಾಯುಸೇನೆಯ ಹೆಮ್ಮೆಯ ಸಾಧನೆಗಳ ಪ್ರತಿಬಿಂಬ-ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೋಕಾರ್ಪಣೆ

Team Udayavani, May 9, 2023, 7:20 AM IST

AIRFORCE NEW HOUSE

ಭಾರತೀಯ ವಾಯುಪಡೆಯ ಅಸಾಮಾನ್ಯ ಸಾಹಸಗಳನ್ನು ನೆನಪಿಸುವಂತಹ, ರಕ್ಷಿಸುವಂತಹ ಒಂದು ಕೇಂದ್ರವಿದೆಯಾ ಎಂಬ ಪ್ರಶೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉತ್ತರ ನೀಡಿದ್ದಾರೆ. ಚಂಡೀಗಢದಲ್ಲಿ ಭಾರತೀಯ ವಾಯುಸೇನಾ ಪರಂಪರಾ ಕೇಂದ್ರವನ್ನು ಅವರು ಉದ್ಘಾಟಿಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕೇಂದ್ರ ನಿರ್ಮಾಣವಾಗಿದೆ.

ಏನಿದೆ ಈ ಕೇಂದ್ರದಲ್ಲಿ?
ವಾಯುಸೇನೆಯ ಮಹಾನ್‌ ಯೋಧರ ಬೃಹತ್‌ ಭಿತ್ತಿಚಿತ್ರಗಳು, ಸ್ಮರಣಿಕೆಗಳು, 1965, 1971, 1999ರ ಕಾರ್ಗಿಲ್‌ ಯುದ್ಧಗಳು ಸೇರಿದಂತೆ ವಿವಿಧ ಯುದ್ಧಗಳಲ್ಲಿ ವಾಯುಸೇನೆಯ ಪಾತ್ರದ ನೆನಪುಗಳು ಇಲ್ಲಿರುತ್ತವೆ. ಹಲವಾರು ವಿಭಾಗಗಳು ಈ ಕಟ್ಟಡದಲ್ಲಿವೆ. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಯುದ್ಧವಿಮಾನಗಳ ಮಾದರಿಗಳು, ವೈಮಾನಿಕ ಎಂಜಿನ್‌ಗಳು, ಶಸ್ತ್ರಾಸ್ತ್ರಗಳು, ಗ್ರ್ಯಾಝೆವ್‌ ಶಿಪುನೊವ್‌ನಂತಹ ಅವಳಿ ಬ್ಯಾರೆಲ್‌ಗ‌ಳಿರುವ ಗನ್‌ಗಳು ಇಲ್ಲಿವೆ.

ಪ್ರದರ್ಶನಕ್ಕೂ ವಿಶೇಷ ವ್ಯವಸ್ಥೆ
ಸ್ಮರಣಿಕೆಗಳನ್ನು ನೇರವಾಗಿಯೂ, ಹೋಲೋಗ್ರಾಮ್‌ಗಳು ಕಂಪ್ಯೂಟರೀಕೃತ ಫ‌ಲಕಗಳು, ವಿದ್ಯುನ್ಮಾನ ಸಾಧನಗಳ ಮೂಲಕವೂ ತೋರಿಸಲಾಗುವುದು. ನಮಗೆ ಬೇಕಿರುವ ಮಾಹಿತಿ ಪಡೆಯಲು ಕಿಯೋಸ್ಕ್ಗಳನ್ನೂ ಬಳಸಬಹುದು. ಸಿಮ್ಯುಲೇಟರ್‌ಗಳನ್ನೂ ಇಲ್ಲಿಡಲಾಗಿದೆ. ಅಂದರೆ ನೆಲದಲ್ಲಿದ್ದರೂ ಸಿಮ್ಯುಲೇಟರ್‌ನಲ್ಲಿ ಕುಳಿತರೆ ಹಾರುತ್ತಿರುವಂತಹ ಅನುಭವವಾಗುತ್ತದೆ.

ವಿಸ್ತಾರ ಎಷ್ಟು?
ಪರಂಪರಾ ಕೇಂದ್ರ 17000 ಚದರಡಿ ಪ್ರದೇಶದಲ್ಲಿ ಹರಡಿಕೊಂಡಿದೆ. ಅರ್ಧ ಎಕರೆಗೆ ಸ್ವಲ್ಪ ಕಡಿಮೆ ವಿಸ್ತಾರವಿದೆ. ವಾಯುಪಡೆಯ ಸ್ಫೂರ್ತಿಯುತ ಕಾರ್ಯಗಳನ್ನು ಇದು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ.

ಯುವಕರಿಗೆ ಸ್ಫೂರ್ತಿ
ಈ ಕೇಂದ್ರ ಇಡೀ ದೇಶದ ಜನರಿಗೆ ಒಂದು ಸ್ಫೂರ್ತಿ ಕೇಂದ್ರವಾಗಿರಲಿದೆ. ಭೇಟಿ ನೀಡಲು ಬಯಸುವಂತೆ ಸಿದ್ಧಪಡಿಸಲಾಗಿದೆ. ಮಾತ್ರವಲ್ಲ ಯುವಕರು ಸೇನೆ ಸೇರುವಂತಹ ಪ್ರೇರಣೆಯನ್ನು ಇದು ನೀಡುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.