![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 13, 2023, 5:10 AM IST
ಮಂಗಳೂರು: ಕೆವೈಸಿ ಅಪ್ಡೇಟ್ ನೆಪದಲ್ಲಿ ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಜೂ. 9ರಂದು ಅಪರಿಚಿತ ವ್ಯಕ್ತಿಯ 918981538274 ಸಂಖ್ಯೆಯಿಂದ “ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಕೆವೈಸಿ ಆಪ್ಡೇಟ್ ಮಾಡಬೇಕು’ ಎಂಬ ಸಂದೇಶ ಬಂದಿತ್ತು.
ಅದರಲ್ಲಿ ಕಸ್ಟಮರ್ ಕೇರ್ ಸಂಖ್ಯೆ 8967050738 ಎಂಬುದಾಗಿ ಇತ್ತು. ದೂರುದಾರರು ಆ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೆನರಾ ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ಕೆನರಾ ಬ್ಯಾಂಕ್ ವಿವರಗಳನ್ನು ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಯನ್ನು ನೀಡುವಂತೆ ಹೇಳಿದ. ಅದರಂತೆ ದೂರುದಾರರು ವಿವರಗಳನ್ನು ನೀಡಿದರು. ಬಳಿಕ ಮೊಬೈಲ್ಗೆ ಬಂದ ಒಟಿಪಿಯನ್ನು ಕೂಡ ತಿಳಿಸುವಂತೆ ಹೇಳಿದ. ದೂರುದಾರರು ಒಟಿಪಿ ನೀಡಿದ ಕೂಡಲೇ ಅವರ ಬ್ಯಾಂಕ್ ಖಾತೆಯಿಂದ 99,999 ರೂ. ಅನಧಿಕೃತವಾಗಿ ವರ್ಗಾವಣೆಗೊಂಡಿದೆ.
You seem to have an Ad Blocker on.
To continue reading, please turn it off or whitelist Udayavani.