![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Mar 16, 2021, 8:00 PM IST
ನವ ದೆಹಲಿ: ಮೃತಪಟ್ಟ ಹಿಂದೂ ಪುರುಷನಿಗೆ ಮುಸ್ಲಿಂ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ನಡೆಸಿದ ವಿಲಕ್ಷಣ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದು, “ಅಲ್ಲಿನ ಭಾರತೀಯ ದೂತವಾಸದ ಪ್ರಮಾದದಿಂದಲೇ ಈ ಅಚಾತುರ್ಯ ಸಂಭವಿಸಿದೆ’ ಎಂದು ಆರೋಪಿಸಿ ಪತ್ನಿ ದೆಹಲಿ ಹೈಕೋರ್ಟ್ನ ಮೆಟ್ಟಿಲೇರಿದ್ದಾರೆ.
ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಸಂಜೀವ್ ಕುಮಾರ್ ಎಂಬವರು ಜ.24ರಂದು ಹೃದಯಾಘಾತದಿಂದ ಮೃತರಾಗಿದ್ದರು. ಇವರ ಮೃತ ದೇಹವನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಪತ್ನಿ, ಜೆಡ್ಡಾದ ದೂತವಾಸಕ್ಕೆ ಮನವಿ ಮಾಡಿದ್ದರು. ಆದರೆ, ಭಾರತದಲ್ಲಿದ್ದ ಪತ್ನಿಗೆ ಫೆ.18ರಂದು “ನಿಮ್ಮ ಪತಿಯ ಮೃತ ದೇಹವನ್ನು ಮುಸ್ಲಿಂ ವಿಧಿವಿಧಾನಗಳೊಂದಿಗೆ ದಫನ್ ಮಾಡಲಾಗಿದೆ’ ಎಂಬ ಆಘಾತಕಾರಿ ಸುದ್ದಿ ಅಪ್ಪಳಿಸಿತ್ತು.
ತಪ್ಪು ಮಾಹಿತಿ: ಮರಣ ಪ್ರಮಾಣ ಪತ್ರದಲ್ಲಿ ಹಿಂದೂ ಬದಲಾಗಿ ಮುಸ್ಲಿಂ ಎಂದು ನಮೂದಿಸಿ, ದೂತವಾಸ ಅಧಿಕಾರಿಗಳು ತಪ್ಪೆಸಗಿದ್ದೇ ಇದಕ್ಕೆ ಕಾರಣವಾಗಿತ್ತು. “ಕನಿಷ್ಠ ಪಕ್ಷ ಹೂಳಿರುವ ಮೃತದೇಹವನ್ನಾದರೂ ಹೊರತೆಗೆದು ಭಾರತಕ್ಕೆ ಮರಳಿಸಿ’ ಎಂದು ಪತ್ನಿ ಕೋರಿಕೆಗೆ ದೂತವಾಸ ನಿರ್ಲಕ್ಷ್ಯ ತೋರಿತ್ತು.
ಇದನ್ನೂ ಓದಿ :‘ನಮ್ಮ ವಿಷಯದಿಂದ ದೂರವಿದ್ದರೆ ಒಳಿತು’ : ಬೈಡನ್ಗೆ ಉತ್ತರ ಕೊರಿಯಾ ಎಚ್ಚರಿಕೆ
ಜಡ್ಜ್ ಖಂಡನೆ: ಈ ಸಂಬಂಧ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು. ದೂತವಾಸದ ವರ್ತನೆಯನ್ನು ನ್ಯಾಯಾಧೀಶರು ಖಂಡಿಸಿದ್ದು, ಪಾರ್ಥೀವ ಶರೀರ ಮರಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದೇಶಾಂಗ ಇಲಾಖೆಗೆ ಸೂಚಿಸಿದೆ. ಅಲ್ಲದೆ, ಮರಣ ಪ್ರಮಾಣ ಪತ್ರದಲ್ಲಿ “ಹಿಂದೂ ಧರ್ಮ’ ಎಂದು ಉಲ್ಲೇಖೀಸಲೂ ಆದೇಶಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.