![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 5, 2022, 7:09 PM IST
ಬೆಂಗಳೂರು: ಸಿದ್ದರಾಮಯ್ಯಗೂ ಅಲ್ಪಸಂಖ್ಯಾತರಿಗೂ ಭಾರೀ ನಂಟು,ಅಲ್ಪಸಂಖ್ಯಾತರೆಂದರೆ ಓಡಿಹೋಗಿ ಸ್ಟೇಟ್ಮೆಂಟ್ ಕೊಡ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಹಿಜಾಬ್ ಕಾನೂನಿಗೆ ವಿರುದ್ಧ ಎಂದು ಸರ್ಕಾರ ಹೇಳಿದೆ. ಟಿಪ್ಪು ಜಯಂತಿ ಮಾಡಿದ್ರು, ಶಾದಿ ಭಾಗ್ಯ ಮಾಡಿದರು ಮುಸ್ಲಿಂಮರಿಗೆ ಮಾತ್ರ. ಹಿಂದೂಗಳಲ್ಲಿ ಎಸ್ ಟಿ ಗಳಲ್ಲಿ ಬಡವರು ಇಲ್ಲವೇ?ಹಿಜಾಬ್ ವಿವಾದ ಕಾಂಗ್ರೆಸ್ ಪ್ರೇರಿತವಾದ ಘಟನೆ ಎಂದರು.
ಕಾಂಗ್ರೆಸ್ ಇದನ್ನು ಖಂಡಿಸಬೇಕಿತ್ತು. ಡಿಕೆಶಿ ಖಂಡಿಸಿದ್ದಾರೆ, ಕಾಂಗ್ರೆಸ್ ನವರು ಖಂಡಿಸಿಲ್ಲ. ಶಾಲೆಯಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ಹಾಕುವುದು ತಪ್ಪು. . ಮನಸ್ಸಿಗೆ ಬಂದಂತೆ ಹಾಕಲು ಇದು ಅಫ್ಘಾನಿಸ್ಥಾನ ಪಾಕಿಸ್ಥಾನ ಅಲ್ಲ. ಶಾಲೆಯಲ್ಲಿ ಡ್ರೆಸ್ ಕೋಡ್ ಇದೆ. ಅದನ್ನು ಪಾಲನೆ ಮಾಡುವುದು ಕರ್ತವ್ಯ. ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಿ. ಶಾಲೆಗೆ ಬರಬೇಕಾದರೆ ಯಾವುದೇ ವ್ಯಕ್ತಿ ಧರ್ಮ ಪ್ರಚಾರ ಮಾಡಬಾರದು. ಎಲ್ಲರೂ ಅಲ್ಲಿ ಸಾಮಾನ್ಯನೇ. ಯೂನಿಫಾರಂ ಧರಿಸಿ ಬರಬೇಕಾದದ್ದು ಕಡ್ಡಾಯ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಕಾನೂನು ಪಾಲನೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಏನು ಕಾನೂನು ಇದೆ ಅದು ಪಾಲನೆ ಮಾಡಬೇಕು ಎಂದರು.
ಹೆಣ್ಣು ಮಕ್ಕಳ ಶೋಷಣೆ ಅಫ್ಘಾನಿಸ್ಥಾನದಲ್ಲಿ ಆಗುತ್ತದೆ. ಹೆಣ್ಣು ಮಕ್ಕಳು ಅಲ್ಲಿ ಶಾಲೆಗೆ ಕಳಿಸಿ ಎಂದು ಬೇಡಿಕೊಳ್ಳುತ್ತಾರೆ. ಆ ಪರಿಸ್ಥಿತಿ ಭಾರತಕ್ಕೆ ಬರುವುದು ಬೇಡ ಎಂದಾದರೆ ಈ ರೀತಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಮುಸ್ಲಿಂಮರ ಸಂಖ್ಯೆ 50% ಆದರೆ ಹಿಂದೂಗಳ ಪರಿಸ್ಥಿತಿ ಏನಾಗಬಹುದು ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭವಿಷ್ಯ ಹೇಳಲು ಸಾಧ್ಯವಿಲ್ಲ ಎಂದರು. ಕೇಸರಿ ಶಾಲು ಧರಿಸುವ ಹಿಂದೆ ಸಂಘಪರಿವಾದ ಕುಮ್ಮಕ್ಕು ಇಲ್ಲ. ಅವರು ಹಾಕಿದ್ದಕ್ಕೆ ಇವರು ಹಾಕಿಕೊಂಡು ಬಂದಿದ್ದಾರೆ ಅಷ್ಟೇ ಅಂದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.