![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 7, 2023, 12:06 AM IST
ಹೊಸದಿಲ್ಲಿ: “ಏಷ್ಯಾಡ್ ವೈಫಲ್ಯ ನಮ್ಮನ್ನು ಕಾಡುತ್ತಲೇ ಇತ್ತು. ಇದನ್ನು ಹೊಡೆದೋಡಿಸಲು ನಮ್ಮ ಮುಂದಿದ್ದ ಉತ್ತಮ ಅವಕಾಶವೆಂದರೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ. ಇಲ್ಲಿ ಚಿನ್ನದ ಪದಕ ಗೆಲ್ಲಲೇಬೇಕೆಂದು ಪಟತೊಟ್ಟು ಆಡಿದ ಪರಿಣಾಮ ಪ್ರಶಸ್ತಿ ಒಲಿಯಿತು’ ಎಂಬುದಾಗಿ ಭಾರತೀಯ ವನಿತಾ ಹಾಕಿ ತಂಡದ ನಾಯಕಿ ಸವಿತಾ ಪುನಿಯ ಪ್ರತಿಕ್ರಿಯಿಸಿದ್ದಾರೆ.
ರವಿವಾರ ತಡರಾತ್ರಿ ನಡೆದ ಫೈನಲ್ನಲ್ಲಿ ಆತಿಥೇಯ ಭಾರತ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಎರಡನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಜಯಿಸಿತ್ತು.
“ನಮ್ಮದು ಆತಿಥೇಯ ತಂಡವಾಗಿತ್ತು. ಭಾರತದಲ್ಲಿ ಮೊದಲ ಸಲ ಆಯೋಜನೆಗೊಂಡ ಪಂದ್ಯಾವಳಿಯೂ ಇದಾಗಿತ್ತು. ಹೀಗಾಗಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಏಷ್ಯಾಡ್ ಸೆಮಿಫೈನಲ್ನಲ್ಲಿ ಎಡವಿದ ಬಳಿಕ ನಮ್ಮ ಮುಂದೆ ಉತ್ತಮ ಅವಕಾಶವೊಂದು ತೆರೆಯಲ್ಪಟ್ಟಿತು. ಅಜೇಯವಾಗಿ ಸಾಗಿ ಚಾಂಪಿಯನ್ ಆಗುವ ಯೋಜನೆಯನ್ನು ರೂಪಿಸಿದೆವು. ಇದು ಯಶಸ್ವಿಯಾದುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ’ ಎಂಬುದಾಗಿ ಸವಿತಾ ಹೇಳಿದರು.
ಫ್ಲಡ್ಲೈಟ್ ಸಮಸ್ಯೆ
ಫ್ಲಡ್ಲೈಟ್ ಸಮಸ್ಯೆಯಿಂದಾಗಿ ಈ ಪಂದ್ಯ 50 ನಿಮಿಷ ತಡವಾಗಿ ಆರಂಭಗೊಂಡಿತ್ತು. ಭಾರತ ಆರಂಭ ದಿಂದಲೇ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡುತ್ತ ಹೋಯಿತು. ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮಿÕಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಭಾರತದ ಗೋಲುವೀರರೆನಿಸಿದರು. ಕಳೆದ ಸಲದ ಚಾಂಪಿಯನ್ ಜಪಾನ್ಗೆ ಒಂದೂ ಗೋಲು ಸಿಡಿಸಲಾಗಲಿಲ್ಲ.
ಭಾರತ 2016ರ ಸಿಂಗಾಪುರ ಕೂಟದಲ್ಲಿ ಮೊದಲ ಸಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತ್ತು. ಜಪಾನ್ 2013 ಮತ್ತು 2021ರಲ್ಲಿ ಚಾಂಪಿಯನ್ ಆಗಿತ್ತು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.