![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Mar 15, 2023, 5:49 PM IST
ಮುಂಬಯಿ: ‘ಬಾಯ್ಕಾಟ್ ಸಂಸ್ಕೃತಿ ಅಂತಿಮವಾಗಿ ಕೊನೆಗೊಳ್ಳಬಹುದು ಎಂಬ ಭರವಸೆಯನ್ನು ಶಾರುಖ್ ಖಾನ್ ಅಭಿನಯದ ”ಪಠಾಣ್” ಚಿತ್ರದ ಗಲ್ಲಾಪೆಟ್ಟಿಗೆಯ ಓಟವು ನೀಡುತ್ತದೆ’ ಎಂದು ಹಿರಿಯ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.
ಪಠಾಣ್ ಚಿತ್ರದ ದಾಖಲೆ ಮುರಿದ ಯಶಸ್ಸನ್ನು ಮೌಲ್ಯೀಕರಣ ಎಂದು ವಿವರಿಸಿದ ಶಬಾನಾ ಅಜ್ಮಿ, ”ಯಶ್ ರಾಜ್ ಫಿಲ್ಮ್ಸ್ನ ಗ್ಲೋಬ್ಟ್ರೋಟಿಂಗ್ ಸ್ಪೈ ಎಂಟರ್ಟೈನರ್ ಹಿಟ್ ಆಗಲಿದೆ ಎಂದು ನಾನು ಭಾವಿಸಿದ್ದೆ, ಆದರೆ ಈ ಮಟ್ಟಿಗಿನ ಯಶಸ್ಸಿನ ಪ್ರಮಾಣದಿಂದ ಆಶ್ಚರ್ಯವಾಯಿತು. ನಾನು ಪಠಾಣ್ ಅನ್ನು ಇಷ್ಟಪಟ್ಟೆ. ನನಗೆ ತುಂಬಾ ಖುಷಿಯಾಗಿದೆ” ಎಂದರು.
“ಇದು ಬಾಯ್ಕಾಟ್ ಸಂಸ್ಕೃತಿಯನ್ನು ಅಂತ್ಯಗೊಳಿಸುತ್ತದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಏಕೆಂದರೆ ಅದು ನಿಜವಾಗಿಯೂ ಅದನ್ನು ಮಾಡುತ್ತಿದೆ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಇದು ಅಂತಹ ದೊಡ್ಡ ಯಶಸ್ಸನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು 72 ವರ್ಷದ ನಟಿ ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ.
2022 ರಲ್ಲಿ, ಅಮೀರ್ ಖಾನ್ ಅವರ “ಲಾಲ್ ಸಿಂಗ್ ಚಡ್ಡಾ”, ರಣಬೀರ್ ಕಪೂರ್ ನಟಿಸಿದ “ಶಂಶೇರಾ”, ಅಕ್ಷಯ್ ಕುಮಾರ್ ಅವರ “ರಕ್ಷಾ ಬಂಧನ್ ”, ಮತ್ತು ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದ “ವಿಕ್ರಮ್ ವೇದಾ” ಮುಂತಾದ ದೊಡ್ಡ-ಬಜೆಟ್ ಹಿಂದಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಜನರಿಂದ ಬಹಿಷ್ಕಾರಕ್ಕೆ ಸಿಲುಕಿ ಯಶಸ್ಸು ಪಡೆಯಲು ವಿಫಲವಾಗಿದ್ದವು.
ಬೇಷರಂ ರಂಗ್” ಹಾಡಿನ ವಿವಾದದ ಬಳಿಕ ಜನವರಿ 25 ರಂದು ಬಿಡುಗಡೆಯಾದ ದಿನದಿಂದಲೇ ಪಠಾಣ್ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿ ಯಶಸ್ಸಿನ 50 ದಿನಗಳನ್ನು ಪೂರೈಸಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.