ಬಿಬಿಸಿ ವಿರುದ್ಧ ಐಟಿ ಕ್ರಮ ಭಾರತದ ಪ್ರತಿಷ್ಠೆಗೆ ಅಡ್ಡಿ: ಕಾಂಗ್ರೆಸ್ ಆಕ್ರೋಶ
ಜಿ-20 ಆತಿಥ್ಯ ಸಂದರ್ಭದಲ್ಲಿ ಮೋದಿ ಯಾವ ಚಿತ್ರಣವನ್ನು ಪ್ರದರ್ಶಿಸುತ್ತಿದ್ದಾರೆ?
Team Udayavani, Feb 15, 2023, 5:27 PM IST
ನವದೆಹಲಿ : ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆಯನ್ನು ಖಂಡಿಸಿರುವ ಕಾಂಗ್ರೆಸ್, ದೇಶವು ಜಿ-20 ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂತಹ ಕ್ರಮಗಳ ಮೂಲಕ ಭಾರತದ ಯಾವ ಚಿತ್ರಣವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬುಧವಾರ ಪ್ರಶ್ನಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರಧಾನಿ ಮೋದಿ ಅವರ ಹಿಂದಿನ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ದಾಳಿ ಮಾಡಲಾಗುತ್ತದೆ ಮತ್ತು ಸರಕಾರವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಕೆಡವಿದೆ ಎಂದು ಆರೋಪಿಸಿದ್ದಾರೆ.
ಬಿಬಿಸಿ ಇಂಡಿಯಾ ವಿರುದ್ಧದ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕಾರ್ಯಾಚರಣೆ ಬುಧವಾರ ಎರಡನೇ ದಿನವೂ ಮುಂದುವರಿದಿದ್ದು, ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಪೇಪರ್ ಆಧಾರಿತ ಹಣಕಾಸು ದತ್ತಾಂಶದ ನಕಲುಗಳನ್ನು ಪತ್ತೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಸರಕಾರವು ಪದೇ ಪದೇ ಭಾರತೀಯ ಮಾಧ್ಯಮಗಳ ಕತ್ತು ಹಿಸುಕಿದೆ,ಮೂಗು ತೂರಿಸಿದೆ ಮತ್ತು ಬುಲ್ಡೋಜರ್ ಮಾಡಿದೆ”, ಏಕೆಂದರೆ ಅವುಗಳಲ್ಲಿ ಕೆಲವು, ಬಹಳ ಕಡಿಮೆ ಸಂಖ್ಯೆಯು ಬಿಜೆಪಿಯ ನೀತಿಯನ್ನು ಅನುಸರಿಸಲು ನಿರಾಕರಿಸಿದೆ ಎಂದು ಅವರು ಆರೋಪಿಸಿದರು.
“ಮೋದಿ ಜಿ ಅವರು ದೇಶದ ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿದ್ದಾಗ, ಅವರು ಅದೇ ಬಿಬಿಸಿಯ ಸಮರ್ಪಿತ ಅನುಯಾಯಿಯಾಗಿದ್ದರು” ಎಂದು ಖೇರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.