![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 2, 2021, 11:20 PM IST
ದುಬಾೖ: “ಐಸಿಸಿ ತಿಂಗಳ ಆಟಗಾರ’ ಪ್ರಶಸ್ತಿಗೆ ಫೆಬ್ರವರಿ ತಿಂಗಳ ಮೂವರು ಸಾಧಕರನ್ನು ನಾಮನಿರ್ದೇಶನ ಮಾಡಲಾಗಿದೆ. ಇವರೆಂದರೆ ಆರ್. ಅಶ್ವಿನ್, ಜೋ ರೂಟ್ ಮತ್ತು ಕೈಲ್ ಮೇಯರ್.
ವನಿತಾ ವಿಭಾಗದಿಂದ ಇಂಗ್ಲೆಂಡಿನ ಟಾಮಿ ಬೇಮಂಟ್, ನಥಾಲಿ ಶಿವರ್ ಮತ್ತು ನ್ಯೂಜಿಲ್ಯಾಂಡಿನ ಬ್ರೂಕ್ ಹಾಲಿಡೇ ಹೆಸರನ್ನು ಸೂಚಿಸಲಾಗಿದೆ.
ಈಗಾಗಲೇ ಐಸಿಸಿ ವೆಬ್ಸೈಟ್ನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮಾ. 8ರಂದು ವಿಜೇತರ ಹೆಸರನ್ನು ಘೋಷಿಸಲಾಗುವುದು. ಜನವರಿ ತಿಂಗಳ ಚೊಚ್ಚಲ ಪ್ರಶಸ್ತಿ ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರಿಗೆ ಒಲಿದಿತ್ತು. ಈ ಬಾರಿ ಅಶ್ವಿನ್ಗೆ ಒಲಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ:ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ
ಅಶ್ವಿನ್ ಅಮೋಘ ಸಾಧನೆ
ಆರ್. ಅಶ್ವಿನ್ ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಆಡಿದ್ದರು. ಈ ಪಂದ್ಯಗಳಿಂದ ಒಟ್ಟು 176 ರನ್ ಜತೆಗೆ
24 ವಿಕೆಟ್ ಸಂಪಾದಿಸಿದ ಹಿರಿಮೆ ಅಶ್ವಿನ್ ಆಗಿದೆ. ಇದರಲ್ಲಿ ಒಂದು ಶತಕವೂ ಒಳಗೊಂಡಿದೆ. ಚೆನ್ನೈನ ದ್ವಿತೀಯ ಪಂದ್ಯ “ಅಶ್ವಿನ್ ಟೆಸ್ಟ್’ ಎಂದೇ ಜನಪ್ರಿಯಗೊಂಡಿರುವುದು ಈಗ ಇತಿಹಾಸ. ಇದೇ ವೇಳೆ ಜೋ ರೂಟ್ 333 ರನ್ ಬಾರಿಸುವ ಜತೆಗೆ ಪಾರ್ಟ್ ಟೈಮ್ ಬೌಲರ್ ಆಗಿ 6 ವಿಕೆಟ್ ಕೂಡ ಉರುಳಿಸಿದ್ದಾರೆ. ಆದರೆ ಅಹ್ಮದಾಬಾದ್ ಟೆಸ್ಟ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿಯೂ “ಮ್ಯಾಚ್ ವಿನ್ನರ್’ ಎನಿಸಿಕೊಳ್ಳಲು ಇವರಿಂದಾಗಲಿಲ್ಲ.
ವಿಂಡೀಸಿನ ಕೈಲ್ ಮೇಯರ್ ಅವರದು ಅದ್ಭುತ ಸಾಧನೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಜೇಯ ದ್ವಿಶತಕ ಬಾರಿಸಿ ಬಾಂಗ್ಲಾದೇಶ ವಿರುದ್ಧ ಅಮೋಘ ಜಯ ತಂದಿತ್ತ ಪರಾಕ್ರಮ ಇವರದಾಗಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.