21 ವರ್ಷದ ಬಳಿಕ ಭಾರತ-ನೇಪಾಳ ನಡುವಿನ ರೈಲು ಸಂಚಾರ ಉದ್ಘಾಟನೆ, ರುಪೇಗೆ ಚಾಲನೆ

ಜಗತ್ತಿನ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

Team Udayavani, Apr 2, 2022, 4:58 PM IST

21 ವರ್ಷದ ಬಳಿಕ ಭಾರತ-ನೇಪಾಳ ನಡುವಿನ ರೈಲು ಸಂಚಾರ ಉದ್ಘಾಟನೆ, ರುಪೇಗೆ ಚಾಲನೆ

ಕಾಠ್ಮಂಡು: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಜಂಟಿಯಾಗಿ ಶನಿವಾರ (ಏಪ್ರಿಲ್ 02) ಭಾರತ -ನೇಪಾಳ ನಡುವಿನ ರೈಲು ಸಂಚಾರ ಮಾರ್ಗ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಇದನ್ನೂ ಓದಿ:ಅಂದು ನನ್ನ ಕ್ರಿಕೆಟ್ ಜೀವನದ ಅತ್ಯಮೂಲ್ಯ 35 ರನ್ ಗಳಿಸಿದ್ದೆ: ಕೊಹ್ಲಿ ವಿಶ್ವಕಪ್ ಮೆಲುಕು

ನೇಪಾಳ ಪ್ರಧಾನಿ ದೇವುಬಾ ನೇತೃತ್ವದ ಉನ್ನತ ಮಟ್ಟದ ನಿಯೋಗ ಶುಕ್ರವಾರ (ಏಪ್ರಿಲ್ 01) ಮೂರು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿತ್ತು. ಭಾರತದ ಗಡಿಯಲ್ಲಿರುವ ಜಯನಗರ ಮತ್ತು ನೇಪಾಳದ ಬಿಜಾಲ್ ಪುರ್ ನಡುವೆ 1937ರಲ್ಲೇ ರೈಲು ಸಂಚಾರ ಆರಂಭವಾಗಿತ್ತು. ಆದರೆ 2001ರಲ್ಲಿ ಭಾರೀ ಭೂ ಕುಸಿತ ಸಂಭವಿಸಿದ ನಂತರ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ 21 ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ರೈಲು ಸಂಚಾರ ಆರಂಭಗೊಂಡಂತಾಗಿದೆ.

ಪ್ರಧಾನಿ ದೇವುಬಾ ಅವರು ಭಾರತದ ಹಳೆಯ ಮಿತ್ರ. ಪ್ರಧಾನಿಯಾಗಿ ಅವರು ಭಾರತಕ್ಕೆ 5ನೇ ಬಾರಿ ಭೇಟಿ ನೀಡಿದಂತಾಗಿದೆ. ಭಾರತ-ನೇಪಾಳ ನಡುವಿನ ಸಂಬಂಧದ ಅಭಿವೃದ್ಧಿಯಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಭಾರತ, ನೇಪಾಳದ ನಡುವಿನ ಗೆಳೆತನ, ನಮ್ಮ ಜನರ ನಡುವಿನ ಗೆಳೆತನ ಜಗತ್ತಿನ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಉಭಯ ದೇಶಗಳ ನಾಗರಿಕತೆ, ಸಂಸ್ಕೃತಿ ಪುರಾತನ ಕಾಲದ ಜೊತೆ ಸಂಬಂಧ ಹೊಂದಿದೆ. ಉಭಯ ದೇಶಗಳು ಖುಷಿ, ದುಃಖಗಳಲ್ಲಿ ಸಮಾನ ಭಾಗಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪ್ರಮುಖ ಹೈಲೆಟ್ಸ್:

*ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ದೇವುಬಾ ಬಿಹಾರ ಸಮೀಪದ ಜಯನಗರ ಹಾಗೂ ನೇಪಾಳ ಗಡಿ ಸಮೀಪದ ಕುರ್ತಾ ನಡುವಿನ 35 ಕಿಲೋ ಮೀಟರ್ ರೈಲು ಸಂಚಾರ ಮಾರ್ಗವನ್ನು ಉದ್ಘಾಟಿಸಿದರು.

*ನೇಪಾಳದ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ದೇವುಬಾ ಉದ್ಘಾಟಿಸಿದರು.

*ಪ್ರಧಾನಿ ಮೋದಿ ಹಾಗೂ ದೇವುಬಾ ನೇಪಾಳದಲ್ಲಿ ರುಪೇ ಪೇಮೆಂಟ್ ವ್ಯವಸ್ಥೆಗೆ ಚಾಲನೆ ನೀಡಿದರು.

* ರೈಲ್ವೆ, ಇಂಧನ ಸೇರಿದಂತೆ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿನ ಒಪ್ಪಂದವನ್ನು ಭಾರತ ಮತ್ತು ನೇಪಾಳ ಅಂತಿಮಗೊಳಿಸಿದವು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

KB-Bank

Mangaluru: ಕರ್ಣಾಟಕ ಬ್ಯಾಂಕ್‌: 336.07 ಕೋ.ರೂ. ನಿವ್ವಳ ಲಾಭ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.