IPL 2023: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈಗೆ ಗೆಲುವಿನ ಟಿಕೆಟ್‌


Team Udayavani, Apr 12, 2023, 6:40 AM IST

ROHITH SHARMA

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ 3ನೇ ಮುಖಾಮುಖೀಯಲ್ಲಿ ಗೆಲುವಿನ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಂಗಳವಾರದ ರೋಚಕ ಪಂದ್ಯದಲ್ಲಿ ರೋಹಿತ್‌ ಪಡೆ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲುಣಿಸಿತು. ಇದು ವಾರ್ನರ್‌ ಪಡೆಗೆ ಎದುರಾದ ಸತತ 4ನೇ ಸೋಲು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ 19.4 ಓವರ್‌ಗಳಲ್ಲಿ 172 ರನ್‌ ಗಳಿಸಿದರೆ, ಮುಂಬೈ 20 ಓವರ್‌ಗಳಲ್ಲಿ 4 ವಿಕೆಟಿಗೆ 173 ರನ್‌ ಬಾರಿಸಿತು. ಅಂತಿಮ ಎಸೆತದಲ್ಲಿ ಮುಂಬೈ ಗೆಲುವಿಗೆ ಅಗತ್ಯವಿದ್ದ 2 ರನ್‌ ಹೊಡೆಯಿತು.

ರೋಹಿತ್‌ ಶರ್ಮ-ಇಶಾನ್‌ ಕಿಶನ್‌ ಮುಂಬೈಗೆ ಭರ್ಜರಿ ಆರಂಭ ಒದಗಿಸಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬಂತು. 7.3 ಓವರ್‌ಗಳಲ್ಲಿ 71 ರನ್‌ ಒಟ್ಟುಗೂಡಿತು. ಆಗ ಇಶಾನ್‌ ಕಿಶನ್‌ ರನೌಟಾದರು (31). ರೋಹಿತ್‌-ತಿಲಕ್‌ ವರ್ಮ ಸೇರಿಕೊಂಡು 50 ಎಸೆತಗಳಿಂದ 68 ರನ್‌ ಸೇರಿಸಿದರು. ತಿಲಕ್‌ ಗಳಿಕೆ 41 ರನ್‌ (29 ಎಸೆತ, 1 ಬೌಂಡರಿ, 4 ಸಿಕ್ಸರ್‌). ಸೂರ್ಯಕುಮಾರ್‌ ಅವರ ಗೋಲ್ಡನ್‌ ಡಕ್‌ ಸಂಕಟ ಇಲ್ಲಿಯೂ ಮುಂದುವರಿಯಿತು. ರೋಹಿತ್‌ 45 ಎಸೆತಗಳಿಂದ 65 ರನ್‌ (6 ಫೋರ್‌, 4 ಸಿಕ್ಸರ್‌) ಹೊಡೆದರು.

ವಾರ್ನರ್‌, ಅಕ್ಷರ್‌ ಫಿಫ್ಟಿ
ಸತತ 4ನೇ ಪಂದ್ಯದಲ್ಲೂ ನಾಯಕ ಡೇವಿಡ್‌ ವಾರ್ನರ್‌ ಅವರೇ ಡೆಲ್ಲಿ ಇನ್ನಿಂಗ್ಸ್‌ಗೆ ಆಸರೆ ಒದಗಿಸಬೇಕಾಯಿತು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ 19ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತ ವಾರ್ನರ್‌ 51 ರನ್‌ ಕೊಡುಗೆ ಸಲ್ಲಿಸಿದರು. ಹಿಂದಿನ 3 ಪಂದ್ಯಗಳಲ್ಲೂ ವಾರ್ನರ್‌ ಕಪ್ತಾನನ ಆಟದ ಮೂಲಕ ಕ್ರಮವಾಗಿ 56, 37 ಮತ್ತು 65 ರನ್‌ ಬಾರಿಸಿದ್ದರು.

9ನೇ ಓವರ್‌ ತನಕ ಡೆಲ್ಲಿ ಬ್ಯಾಟಿಂಗ್‌ ಚೇತೋಹಾರಿಯಾಗಿತ್ತು. ಆಗ ಒಂದೇ ವಿಕೆಟಿಗೆ 76 ರನ್‌ ಸಂಗ್ರಹಗೊಂಡಿತ್ತು. ಪೃಥ್ವಿ ಶಾ (15) ಮತ್ತು ಮನೀಷ್‌ ಪಾಂಡೆ (26) ಒಂದಿಷ್ಟು ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ಲೆಗ್‌ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಮ್ಯಾಜಿಕ್‌ ಮಾಡಿ 3 ವಿಕೆಟ್‌ ಕೆಡವಿದರು. ಮನೀಷ್‌ ಪಾಂಡೆ ಬೆನ್ನಲ್ಲೇ ಯಶ್‌ ಧುಲ್‌ (2), ಲಲಿತ್‌ ಯಾದವ್‌ (2) ಪೆವಿಲಿಯನ್‌ ಸೇರಿಕೊಂಡರು. ಡೆಲ್ಲಿ ಮತ್ತೂಮ್ಮೆ ಸಾಮಾನ್ಯ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು. ಈ ಹಂತದಲ್ಲಿ ಅಕ್ಷರ್‌ ಪಟೇಲ್‌ ಕಪ್ತಾನನಿಗೆ ಉತ್ತಮ ಬೆಂಬಲವಿತ್ತರು. 6ನೇ ವಿಕೆಟಿಗೆ 35 ಎಸೆತಗಳಿಂದ 67 ರನ್‌ ಬಂತು.

ಡೇವಿಡ್‌ ವಾರ್ನರ್‌ ಆಟ ನಿಧಾನ ಗತಿಯಿಂದ ಕೂಡಿತ್ತು. 51 ರನ್ನಿಗೆ 47 ಎಸೆತ ತೆಗೆದುಕೊಂಡರು (6 ಬೌಂಡರಿ). ಅಕ್ಷರ್‌ ಪಟೇಲ್‌ ಬರೀ 25 ಎಸೆತಗಳಿಂದ 54 ರನ್‌ ಬಾರಿಸಿದರು. 4 ಬೌಂಡರಿ ಜತೆಗೆ ಡೆಲ್ಲಿ ಸರದಿಯ ಐದೂ ಸಿಕ್ಸರ್‌ ಅಕ್ಷರ್‌ ಬ್ಯಾಟ್‌ನಿಂದ ಸಿಡಿಯಿತು.

ಆದರೆ ಅಕ್ಷರ್‌ ಪಟೇಲ್‌ ನಿರ್ಗಮನ ಎನ್ನುವುದು ಡೆಲ್ಲಿ ಪಾಲಿಗೆ ಕಂಟಕವಾಗಿ ಕಾಡಿತು. 5ಕ್ಕೆ 165 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಡೆಲ್ಲಿ ಕೇವಲ 7 ರನ್‌ ಅಂತರದಲ್ಲಿ 5 ವಿಕೆಟ್‌ ಉರುಳಿಸಿಕೊಂಡಿತು. ಬೆಹ್ರೆಂಡಾರ್ಫ್‌ ಎಸೆದ 19ನೇ ಓವರ್‌ನಲ್ಲೇ 4 ವಿಕೆಟ್‌ ಬಿತ್ತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.