![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 8, 2023, 7:58 AM IST
ಮುಂಬಯಿ: ಒಂದೆಡೆ ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮ, ಇನ್ನೊಂದೆಡೆ ಭಾರತದ ಯಶಸ್ವಿ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ. ಅಭಿ ಮಾನಿಗಳ ನೆಚ್ಚಿನ ಇವರಿಬ್ಬರ ಐಪಿಎಲ್ ತಂಡಗಳು ಶನಿವಾರ ರಾತ್ರಿ ರೋಚಕ ಕಾದಾಟವೊಂದಕ್ಕೆ ಅಣಿಯಾಗಿವೆ. ಇದು “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯವ ಪ್ರಸಕ್ತ ಐಪಿಎಲ್ ಕೂಟದ ಮೊದಲ ಪಂದ್ಯ.
ಮುಂಬೈ ಇಂಡಿಯನ್ಸ್ಗೆ ಇದು ಎರಡನೇ ಮುಖಾಮುಖೀ. ಬೆಂಗಳೂ ರಿನ ಮೊದಲ ಪಂದ್ಯದಲ್ಲಿ ಅದು ಆರ್ಸಿಬಿಗೆ 8 ವಿಕೆಟ್ಗಳಿಂದ ಶರಣಾಗಿತ್ತು. 5 ದಿನಗಳ ಸುದೀರ್ಘ ವಿರಾಮದ ಬಳಿಕ ದ್ವಿತೀಯ ಪಂದ್ಯವನ್ನು ಆಡಲಿಳಿಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ 2 ಪಂದ್ಯಗಳನ್ನು ಮುಗಿಸಿದೆ. ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ಗೆ 5 ವಿಕೆಟ್ಗಳಿಂದ ಸೋತರೆ, ಲಕ್ನೋ ವಿರುದ್ಧ ತನ್ನದೇ ಅಂಗಳದಲ್ಲಿ 12 ರನ್ನುಗಳ ರೋಚಕ ಜಯ ಸಾಧಿಸಿತು. ಧೋನಿ ಕಡೇ ಕ್ಷಣದಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದು ಚೆನ್ನೈ ತಂಡದ ಅದೃಷ್ಟದ ಬಾಗಿಲು ತೆರೆಸಿತೋ ಏನೋ. ವಾಂಖೇಡೆಯಲ್ಲೂ ಮೇಲುಗೈ ಸಾಧಿಸಬೇಕಾದರೆ ಚೆನ್ನೈಗೆ ಇನ್ನೊಂದು ಕಂತಿನ ಅದೃಷ್ಟ ಒಲಿಯಬೇಕಾದೀತು.
“ವಾಂಖೇಡೆ’ ಸಣ್ಣ ಅಂಗಳ. ದೊಡ್ಡ ಹೊಡೆತಗಳನ್ನು ಸರಾಗ ವಾಗಿ ಬಾರಿಸಬಹುದು. ಹೀಗಾಗಿ ಜೋಫ್ರಾ ಆರ್ಚರ್, ಅರ್ಷದ್ ಖಾನ್, ಬೆಹ್ರೆಂಡಾರ್ಫ್ ಹಿಡಿತ ಸಾಧಿಸುವುದು ಮುಖ್ಯ.
ಬೆಂಗಳೂರು ಪಂದ್ಯದಲ್ಲಿ ಇವರೆಲ್ಲ ಚೆನ್ನಾಗಿ ದಂಡಿಸಿಕೊಂಡಿದ್ದರು. ಬ್ಯಾಟಿಂಗ್ನಲ್ಲಿ ಕ್ಲಿಕ್ ಆದವರು ತಿಲಕ್ ವರ್ಮ ಮಾತ್ರ. ರೋಹಿತ್, ಇಶಾನ್ ಕಿಶನ್, ಗ್ರೀನ್, ಸೂರ್ಯ ಕುಮಾರ್ ಅವರದೆಲ್ಲ ಸಾಲು ಸಾಲು ವೈಫಲ್ಯವಾಗಿತ್ತು. ಹೀಗಾಗಿ ತವರಿನಂಗಳದ ಪಂದ್ಯವಾದರೂ ಮುಂಬೈ ಮೇಲೆ ಒತ್ತಡ ತಪ್ಪಿದ್ದಲ್ಲ.
2013ರಿಂದೀಚೆ ತನ್ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುತ್ತ ಬಂದ ದಾಖಲೆ ಹೊಂದಿರುವ ಮುಂಬೈ, ಅನಂತರ ದಾಖಲೆ ಸಂಖ್ಯೆಯ ಕಪ್ ಎತ್ತಿರುವುದನ್ನು ಮರೆಯುವಂತಿಲ್ಲ. ಈ ಬಾರಿಯ ಗೆಲುವನ್ನು ತವರಿನ ವಾಂಖೇಡೆಯಲ್ಲೇ ದಾಖಲಿಸಬೇಕೆಂಬ ಹಂಬಲ ರೋಹಿತ್ ಬಳಗದ್ದು.
ಆರಂಭಿಕರೇ ಆಧಾರ
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರನ್ನು ಅತಿಯಾಗಿ ನೆಚ್ಚಿಕೊಂಡಿರುವ ತಂಡ. ರುತುರಾಜ್ ಗಾಯಕ್ವಾಡ್ ಎರಡೂ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್ಗಳನ್ನು ನಡೆಸಿದ್ದರು. ಡೇವನ್ ಕಾನ್ವೇ ಗುಜರಾತ್ ವಿರುದ್ಧ ಒಂದೇ ರನ್ ಗಳಿಸಿದರೂ ಲಕ್ನೋ ವಿರುದ್ಧ ಲಯಕ್ಕೆ ಮರಳಿದ್ದರು.
ಧೋನಿ ಪಡೆಯ ಮಧ್ಯಮ ಕ್ರಮಾಂಕ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಸಾಮರ್ಥ್ಯ ತೋರಿಲ್ಲ. ಶಿವಂ ದುಬೆ, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ರವೀಂದ್ರ ಜಡೇಜ ಜಬರ್ದಸ್ತ್ ಪ್ರದರ್ಶನ ತೋರಿಲ್ಲ.
ಬೌಲಿಂಗ್ ವಿಭಾಗಕ್ಕೆ ಧೋನಿ ಈಗಾಗಲೇ ಬಲವಾದ ಎಚ್ಚರಿಕೆ ನೀಡಿ ದ್ದಾರೆ. ಚಹರ್, ದೇಶಪಾಂಡೆ, ಸ್ಟೋಕ್ಸ್, ಸ್ಯಾಂಟ್ನರ್, ಅಲಿ, ಹಂಗಗೇಕರ್ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.