ನಮೀಬಿಯಾ ಏಕದಿನ ಸರಣಿ ಕೊನೆಯಲ್ಲಿ ಎಡವಿದ ಕರ್ನಾಟಕ
Team Udayavani, Jun 13, 2023, 6:02 AM IST
ವಿಂಡ್ಹೋಕ್ (ನಮೀಬಿಯಾ): ಕರ್ನಾಟಕ ತನ್ನ ನಮೀಬಿಯಾ ಪ್ರವಾಸವನ್ನು ಸರಣಿ ಜಯದೊಂದಿಗೆ ಮುಗಿಸಿದರೂ ಕೊನೆಯ ಪಂದ್ಯದಲ್ಲಿ ಸೋಲಿನ ಸಂಕಟಕ್ಕೆ ಸಿಲುಕಿತು. ಇದರೊಂದಿಗೆ ಸರಣಿ ಗೆಲುವಿನ ಆಂತರ 3-2ಕ್ಕೆ ಇಳಿಯಿತು.
ರವಿವಾರದ 5ನೇ ಹಾಗೂ ಅಂತಿಮ ಪಂದ್ಯವನ್ನು ಆರ್. ಸಮರ್ಥ್ ಪಡೆ 5 ವಿಕೆಟ್ಗಳಿಂದ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 48.1 ಓವರ್ಗಳಲ್ಲಿ 231ಕ್ಕೆ ಕುಸಿದರೆ, ನಮೀಬಿಯಾ 39.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿತು.
ಸ್ಟೀಫನ್ ಬಾರ್ಡ್ (59), ಮೈಕಲ್ ವಾನ್ ಲಿಂಜೆನ್ (56) ಅರ್ಧ ಶತಕ ಬಾರಿಸುವ ಜತೆಗೆ 2ನೇ ವಿಕೆಟಿಗೆ 107 ರನ್ ಒಟ್ಟುಗೂಡಿಸಿ ಗೆಲುವನ್ನು ಖಾತ್ರಿಗೊಳಿಸಿದರು. ನಾಯಕ ಗೆರಾರ್ಡ್ ಎರಾಸ್ಮಸ್ ಅಜೇಯ 59 ರನ್ ಕೊಡುಗೆ ಸಲ್ಲಿಸಿದರು. 38 ರನ್ ಮಾಡಿದ ಮೈಕಲ್ ಡು ಪ್ರೀಝ್ ಮತ್ತೋರ್ವ ಪ್ರಮುಖ ಸ್ಕೋರರ್. ಕರ್ನಾಟಕ 8 ಮಂದಿಯನ್ನು ಬೌಲಿಂಗ್ ದಾಳಿಗಿಳಿಸಿ ನಮೀಬಿಯಾವನ್ನು ಉರುಳಿಸಲು ಪ್ರಯತ್ನಿಸಿತಾದರೂ ಯಶಸ್ಸು ಕಾಣಲಿಲ್ಲ.
ಕರ್ನಾಟಕ ಪರ ನಿಕಿನ್ ಜೋಸ್ 61 ರನ್ ಬಾರಿಸಿ ಗಮನ ಸೆಳೆದರು. ಅವರಿಲ್ಲಿ 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಕಿಶನ್ ಬೆಡಾರೆ 43, ಅನೀಶ್ವರ್ ಗೌತಮ್ 29, ಕೀಪರ್ ಕೃತಿಕ್ ಕೃಷ್ಣ 25, ಎಲ್.ಆರ್. ಚೇತನ್ 22 ರನ್ ಹೊಡೆದರು.
ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್ಗಳಿಂದ ಜಯಿಸಿತ್ತು. ಬಳಿಕ 360 ರನ್ ಪೇರಿಸಿಯೂ 5 ವಿಕೆಟ್ ಸೋಲನುಭವಿಸಿತು. 3ನೇ ಪಂದ್ಯದಲ್ಲಿ ಎಲ್.ಆರ್. ಚೇತನ್ ಮತ್ತು ನಿಕಿನ್ ಜೋಸ್ ಶತಕದಿಂದ 9 ವಿಕೆಟ್ ಅಂತರದ ಜಯ ಸಾಧಿಸಿತು. 4ನೇ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಆದರೆ ಈ ಅಂತರವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಅʼಸ್ಪಿನ್ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ?
IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್
Hardik Pandya: ರಣಜಿ ಕ್ರಿಕೆಟ್ ಆಡಲು ಹಾರ್ದಿಕ್ ಪಾಂಡ್ಯ ಸಿದ್ಧತೆ
Harmanpreet Singh: ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್ಪ್ರೀತ್ ಹೆಸರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Tumkur University ಕುಲಸಚಿವ, ಇನ್ಸ್ಪೆಕ್ಟರ್ ವಜಾ ಮಾಡಿ: ಅಶ್ವತ್ಥನಾರಾಯಣ್ ಒತ್ತಾಯ
Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!
Shambhavi ಹೊಳೆಗೆ ಬಿದ್ದು ಬಾಲಕ ಸಾವು-ನಾಲ್ಕು ಮಂದಿ ಮಕ್ಕಳು ತೆರಳಿದ್ದ ವೇಳೆ ಘಟನೆ
Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು
Udupi: ಚೆಕ್ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.