ಕುರುಗೋಡು : 2.40 ಕೋಟಿ ರೂ.ಮೌಲ್ಯದ ಭತ್ತ ಬೆಂಕಿಯಲ್ಲಿ ಭಸ್ಮ
Team Udayavani, Dec 27, 2021, 4:00 PM IST
ಕುರುಗೋಡು: ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 16000 ಸಾವಿರ ಭತ್ತದ ಚೀಲಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ವಾಗಿ ಸುಟ್ಟು ಕರಕಲಾದ ಅವಘಡ ಕಗ್ಗಲ್ ಗ್ರಾಮದಲ್ಲಿ ನಡೆದಿದೆ.
ಕಗ್ಗಲ್ ಗ್ರಾಮದ ರೈತ ದೇವೇಂದ್ರಪ್ಪ ಮತ್ತು ಅವರ ತಂದೆ ವಿರೇಶಪ್ಪ ಅವರಿಗೆ ಸೇರಿದ್ದಾಗಿವೆ . ಸುಮಾರು 2 ಕೋಟಿ 40 ಲಕ್ಷ ರೂ. ಅಂದಾಜು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. 16000 ಸಾವಿರ ಭತ್ತದ ಚೀಲಗಳಲ್ಲಿ ರೈತ ದೇವೇಂದ್ರಪ್ಪ ಸ್ವಂತ 85 ಎಕರೆ ಯಲ್ಲಿ ಭತ್ತ ಬೆಳೆದ ಚೀಲಗಳು, ಇನ್ನುಳಿದ ರೈತರಿಂದ ಖರೀದಿ ಮಾಡಿ ಸಂಗ್ರಹಿಸಿದ ಚಿಲಗಳಾಗಿವೆ. ಒಟ್ಟು 400 ಕ್ಕೂ ಹೆಚ್ಚು ಎಕರೆ ಯಲ್ಲಿ ಬೆಳೆದ ಭತ್ತ ಸುತ್ತು ಬೂದಿಯಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಆರ್. ಐ. ಯಶವಂತ್ ಕುಮಾರ್, ಗ್ರಾಮಲೆಕ್ಕಿಗರಾದ ಆಶಾ ಜ್ಯೋತಿ ಭೇಟಿ ನೀಡಿ ಪರಿಶೀಲನೇ ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ನೀಡಿ ಪರಿಹಾರ ಒದಗಿಸಲು ತಿಳಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಕುರುಗೋಡು ಅಗ್ನಿ ಶಾಮಕ ದಳದ ಸಿಬ್ಬಂದಿ ಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಅವಘಡವನ್ನು ಸಂಪೂರ್ಣ ವಾಗಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಮೋಕ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.