World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್‌ ತುಳಿಯೋಣ

ವಿಶ್ವ ಬೈಸಿಕಲ್‌ ದಿನದ ರೂವಾರಿ ಯಾರು ಗೊತ್ತೇ?

Team Udayavani, Jun 3, 2023, 8:10 AM IST

WORLD CYCLE

ಪ್ರತಿಯೋರ್ವರು ತಮ್ಮ ಬಾಲ್ಯದಲ್ಲಿ ಬೈಸಿಕಲ್‌ ತುಳಿದೇ ಇತರ ಯಾವುದೇ ವಾಹನ ಚಾಲನೆ ಕಲಿಕೆಗೆ ಮುಂದಾಗುತ್ತಾರೆ. ಬೈಸಿಕಲ್‌ ಅನ್ನು ಆತ ಸಮರ್ಥವಾಗಿ ತುಳಿಯಬಲ್ಲ ಎಂದರೆ ಇತರ ವಾಹನಗಳ ಚಾಲನೆ ಕಲಿಕೆ ಆತನಿಗೆ ಬಲುಸುಲಭ. ಈ ಕಾರಣ ದಿಂದಾಗಿ ಬಾಲ್ಯದಲ್ಲಿ ಬೈಸಿಕಲ್‌ ತುಳಿದ ನೆನಪು ಸದಾ ಸ್ಮರಣೀಯ. ಬೈಸಿಕಲ್‌ ಕೇವಲ ವಾಹನಗಳ ಚಾಲನೆ ಕಲಿಕೆಗೆ ಮಾತ್ರವಲ್ಲ ವ್ಯಕ್ತಿಯ ದೈಹಿಕ ಬೆಳವಣಿಗೆ ಮತ್ತು ಸದೃಢ ಆರೋಗ್ಯಕ್ಕೂ ಪೂರಕ. ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿ. ಪರಿಸರ ಸ್ನೇಹಿಯಾಗಿರುವ ಬೈಸಿಕಲ್‌ಗಾಗಿಯೇ ಒಂದು ದಿನ ಮೀಸಲಿಡಲಾಗಿದೆ. ವಿಶ್ವಸಂಸ್ಥೆ ಪ್ರತೀ ವರ್ಷ ಜೂ.3ರಂದು ವಿಶ್ವ ಬೈಸಿಕಲ್‌ ದಿನವನ್ನು ಆಚರಿಸುತ್ತಾ ಬಂದಿದೆ. ಈ ಬಾರಿ ” ಸುಸ್ಥಿರ ಭವಿಷ್ಯಕ್ಕಾಗಿ ಜತೆಯಾಗಿ ಸವಾರಿ’ ಎಂಬ ಧ್ಯೇಯದೊಂದಿಗೆ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತಿದೆ.

ಬೈಸಿಕಲ್‌ನ ಇತಿಹಾಸ
ಜರ್ಮನ್‌ ಪ್ರಜೆ ಕಾರ್ಲ್ ವಾನ್‌ ಡ್ರಯಸ್‌ 1817ರಲ್ಲಿ ಬೈಸಿಕಲ್‌ ತಯಾರಿಸಿದರು. ವರ್ಷಗಳುರುಳಿ ದಂತೆ ಜನಪ್ರಿಯ ಸಾರಿಗೆ ಸಾಧನ ವಾಗಿ ಜನಪ್ರಿಯವಾದ ಬೈಸಿಕಲ್‌ ಹಲವಾರು ಸುಧಾರಣೆಗಳನ್ನು ಕಂಡು 20ನೇ ಶತಮಾನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿತು. ತದನಂತರದಲ್ಲಿ ಸಾರಿಗೆ ಕ್ಷೇತ್ರವನ್ನು ಮೋಟಾರು ವಾಹನಗಳು ಅತಿಕ್ರಮಿಸಿಕೊಂಡ ವಾದರೂ ಬೈಸಿಕಲ ತನ್ನ ಪ್ರತ್ಯೇಕತೆ ಯನ್ನು ಉಳಿಸಿಕೊಂಡು, ಕೇವಲ ಸಾರಿಗೆ ಸಾಧನವಾಗಿ ಮಾತ್ರವಲ್ಲದೆ ಕ್ರೀಡೆ, ಶಾರೀರಿಕ ಮತ್ತು ಮನೋ ರಂಜನೆ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತು. ಇತ್ತೀ ಚಿನ ದಶಕದಲ್ಲಿ ಸೈಕಲ್‌ ನಿರ್ಮಾಣ ದಲ್ಲೂ ಕ್ರಾಂತಿಕಾರಿ ಬದಲಾವಣೆ ಗಳಾಗಿದ್ದು ಅತ್ಯಂತ ಸುಧಾರಿತ ಮತ್ತು ಪರಿಸರಸ್ನೇಹಿ ವಾಹನವಾಗಿ ಶ್ರೇಷ್ಠತೆ ಮೆರೆದಿದೆ.

ವಿಶ್ವ ಬೈಸಿಕಲ್‌ ದಿನದ ರೂವಾರಿ ಸಿಬಿಲ್‌ ಸ್ಕಿ
ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಬೇಕೆಂದು ಮೊದಲ ಬಾರಿಗೆ ಆಗ್ರಹ ಕೇಳಿಬಂದದ್ದು 2015ರಲ್ಲಿ. ಅಮೆರಿಕ ಮೂಲದ ಸಮಾಜಶಾಸ್ತ್ರ ಉಪನ್ಯಾಸಕರಾದ ಲೆಸಝೆಕ್‌ ಸಿಬಿಲ್‌ ಸ್ಕಿ ಬೈಸಿಕಲ್‌ಗಾಗಿ ದಿನವನ್ನು ಮೀಸಲಿಡಬೇಕೆಂದು ತಮ್ಮ ಬ್ಲಾಗ್‌ ಬರಹದ ಮೂಲಕ ಬೇಡಿಕೆ ಇರಿಸಿದರು. ಅನಂತರದಲ್ಲಿ ಅವರು ಬೈಸಿಕಲ್‌ನಿಂದಾಗುವ ಪ್ರಯೋಜನ ಹಾಗೂ ಮಾನವನ ಬೆಳವಣಿಗೆಯಲ್ಲಿ ಬೈಸಿಕಲ್‌ನ ಪಾತ್ರವನ್ನು ವಿವರಿಸುವ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಬೆಂಬಲ ದೊರಕಿ ದೊಡ್ಡ ಚಳವಳಿಯಾಗಿ ಮಾರ್ಪಾಡಾಗುತ್ತದೆ. ಅನಂತರ 2018ರ ಎ. 12ರಂದು ವಿಶ್ವಸಂಸ್ಥೆ ಪ್ರತೀ ವರ್ಷ ಜೂ.3ರಂದು ವಿಶ್ವ ಬೈಸಿಕಲ್‌ ದಿನ ಆಚರಿಸುವ ತೀರ್ಮಾನ ಕೈಗೊಂಡಿತು.

ಆರೋಗ್ಯಕರ ಹವ್ಯಾಸ
ಪರಿಸರ ಸ್ನೇಹಿ, ಆರೋಗ್ಯ ವೃದ್ಧಿಯ ಪ್ರಯೋಜನ ಹಾಗೂ ಎಲ್ಲ ವರ್ಗದ ಜನರೂ ಬಳಸಬಹುದಾದ ಬೈಸಿಕಲ್‌ಗಾಗಿ ಒಂದು ದಿನವನ್ನು ಮೀಸಲಿಡುವ ಸಲುವಾಗಿ ವಿಶ್ವಸಂಸ್ಥೆ ಬೈಸಿಕಲ್‌ ದಿನವನ್ನು ಆಚರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸೈಕ್ಲಿಂಗ್‌ನಿಂದ ಸದೃಢ ಶರೀರ ಮತ್ತು ಸಶಕ್ತ ಆರೋಗ್ಯ ಹೊಂದಲು ತುಂಬಾ ಸಹಾಯಕಾರಿ. ಸೈಕಲ್‌ ತುಳಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆ, ಕಾನ್ಸರ್‌, ಪಾರ್ಶ್ವವಾಯು, ಸಂಧಿವಾತ, ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ನಾಯು, ಮೂಳೆಗಳ ಬಲವರ್ಧನೆಗೂ ಪೂರಕ.

ಹಲವು ರೂಪಾಂತರ, ಸುಧಾರಣೆ
ಜರ್ಮನಿಯ ಕಾರ್ಲ್ ವಾನ್‌ ಡ್ರಯಸ್‌ ಅವರು ಮೊದಲ ಬಾರಿಗೆ ತಯಾರಿಸಿದ ಸೈಕಲ್‌ನಲ್ಲಿ ಯಾವುದೇ ಚೈನ್‌, ಬ್ರೇಕ್‌ ಹಾಗೂ ತುಳಿಯಲು ಪೆಡಲ್‌ಗ‌ಳು ಇರಲಿಲ್ಲ. ಕಾಲಿನಲ್ಲೇ ದೂಡಿಕೊಂಡು ಸೈಕಲ್‌ ಚಲನೆ ಮಾಡಬೇಕಾಗಿತ್ತು. ಅನಂತರದಲ್ಲಿ ಇದರ ಆಧಾರವಾಗಿ ಸೈಕಲ್‌ನ ವಿನ್ಯಾಸ ಮಾಡಲಾಯಿತು. 1860ರಲ್ಲಿ ಸೈಕಲ್‌ಗ‌ಳಿಗೆ ಪೆಡಲ್‌ ಅಳವಡಿಸಲಾಯಿತು. ಅನಂತರ ಫ್ರಾನ್ಸ್‌ ದೊಡ್ಡ ಮಟ್ಟದಲ್ಲಿ ಬೈಸಿಕಲ್‌ ಉತ್ಪಾದನೆಯನ್ನು ಕೈಗೊಂಡಿತು. 1990ರಲ್ಲಿ ಜಪಾನ್‌ ಹೊಸ ರೂಪಾಂತರವಾಗಿ ಎಲೆಕ್ಟ್ರಾನಿಕ್‌ ಬೈಸಿಕಲ್‌ ಅನ್ನು ಪರಿಚಯಿಸಿತು.

ಹೆಚ್ಚುತ್ತಿರುವ ಬೇಡಿಕೆ
2022ರಲ್ಲಿ ಜಾಗತಿಕವಾಗಿ ಬೈಸಿಕಲ್‌ ಮಾರುಕಟ್ಟೆ ಮೌಲ್ಯ ಅಂದಾಜು 110.38 ಬಿಲಿಯನ್‌ ಡಾಲರ್‌ಗಳಷ್ಟಾಗಿತ್ತು. 2023ರ ಹೊತ್ತಿಗೆ ಇದು 228.90 ಬಿಲಿಯನ್‌ ಡಾಲರ್‌ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸತೊಡಗಿದ್ದು, ಒಟ್ಟಾರೆ ಸೈಕಲ್‌ ಮಾರುಕಟ್ಟೆಯ ಬೆಳವಣಿಗೆಗೆ ಇದು ಸಹಾಯಕಾರಿಯಾಗುತ್ತಿದೆ. ಹೆಚ್ಚುತ್ತಿರುವ ಸಂಚಾರದಟ್ಟಣೆ, ನಗರೀಕರಣ ಹಾಗೂ ಪರಿಸರ ಕಾಳಜಿಯಿಂದ ಜನರು ಬೈಸಿಕಲ್‌ ಬಳಕೆಯೆಡೆಗೆ ಒಲವು ತೋರಿಸುತ್ತಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಸೈಕಲ್‌ಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

ಟಾಪ್ ನ್ಯೂಸ್

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.