ರೋಚಕ ಹೋರಾಟ: ಲಕ್ನೋಗೆ ಜಯ; ಹೋಲ್ಡರ್‌ ಬೌಲಿಂಗ್‌ಗೆ ಸನ್‌ ಶರಣು


Team Udayavani, Apr 4, 2022, 11:26 PM IST

ರೋಚಕ ಹೋರಾಟ: ಲಕ್ನೋಗೆ ಜಯ; ಹೋಲ್ಡರ್‌ ಬೌಲಿಂಗ್‌ಗೆ ಸನ್‌ ಶರಣು

ಮುಂಬೈ: ಸೋಮವಾರ ನಡೆದ ರೋಚಕ ಐಪಿಎಲ್‌ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದನ್ನು 12 ರನ್‌ಗಳ ಅಂತರದಲ್ಲಿ ಸೋಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 169 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 157 ರನ್‌ ಗಳಿಸಿತು.

ಹೈದರಾಬಾದ್‌ ಪರ ರಾಹುಲ್‌ ತ್ರಿಪಾಠಿ (30 ಎಸೆತ, 44 ರನ್‌), ನಿಕೋಲಸ್‌ ಪೂರನ್‌ (24 ಎಸೆತ, 34 ರನ್‌) ತಂಡವನ್ನು ಗೆಲ್ಲಿಸಲು ಹೋರಾಟ ನಡೆಸಿದರು. ಆದರೆ ಲಕ್ನೋ ಪರ ಅದ್ಭುತ ಬೌಲಿಂಗ್‌ ನಡೆಸಿದ ಆವೇಶ್‌ ಖಾನ್‌ (4 ವಿಕೆಟ್‌), ಜೇಸನ್‌ ಹೋಲ್ಡರ್‌ (3 ವಿಕೆಟ್‌) ಈ ಆಸೆಯನ್ನು ನುಚ್ಚುನೂರು ಮಾಡಿದರು.

ಲಕ್ನೋ ಉತ್ತಮ ಮೊತ್ತ: ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋವನ್ನು ಆರಂಭಿಕ ಕುಸಿತದಿಂದ ಕೆ.ಎಲ್‌.ರಾಹುಲ್‌-ದೀಪಕ್‌ ಹೂಡಾ ಪಾರು ಮಾಡಿದರು. ಇಬ್ಬರೂ 87 ರನ್‌ ಜತೆಯಾಟದ ಮೂಲಕ ತಡೆದು ನಿಂತರು. ರಾಹುಲ್‌ ಸರ್ವಾಧಿಕ 68 ರನ್‌ ಹೊಡೆದರೆ, ಹೂಡಾ 51 ರನ್‌ ಮಾಡಿದರು. ಇದು ರಾಹುಲ್‌ ಅವರ 50ನೇ ಟಿ20 ಅರ್ಧಶತಕವಾಗಿದೆ.

ವಾಷಿಂಗ್ಟನ್‌ ಆಕ್ರಮಣ: ಭುವನೇಶ್ವರ್‌ ಕುಮಾರ್‌ ಅವರೊಂದಿಗೆ ಆಫ್ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ಆರಂಭದಲ್ಲೇ ಬೌಲಿಂಗ್‌ ದಾಳಿಗೆ ಇಳಿಸಿದ ನಿರ್ಧಾರ ಭರ್ಜರಿ ಯಶಸ್ಸು ಕಂಡಿತು. ತಮ್ಮ 4ನೇ ಎಸೆತದಲ್ಲೇ ಅಪಾಯಕಾರಿ ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಉಡಾಯಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಮತ್ತೋರ್ವ ಬಿಗ್‌ ಹಿಟ್ಟರ್‌ ಎವಿನ್‌ ಲೆವಿಸ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. 16 ರನ್‌ ಆಗುವಷ್ಟರಲ್ಲಿ ಲಕ್ನೋದ 2 ವಿಕೆಟ್‌ ಉದುರಿ ಹೋಯಿತು.

ಹೈದರಾಬಾದ್‌ಗೆ 3ನೇ ಯಶಸ್ಸು ಮನೀಷ್‌ ಪಾಂಡೆ ರೂಪದಲ್ಲಿ ಲಭಿಸಿತು. ಹಿಂದಿನ ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದ ಮನೀಷ್‌ ಪಾಂಡೆ ಇಲ್ಲಿ ಬೌಂಡರಿ, ಸಿಕ್ಸರ್‌ ಸಿಡಿಸಿ ಮುನ್ನುಗ್ಗುವ ಸೂಚನೆ ನೀಡಿದರು. ಆದರೆ ಶೆಫ‌ರ್ಡ್‌ ಇದಕ್ಕೆ ಅಡ್ಡಗಾಲಿಕ್ಕಿದರು. ಪಾಂಡೆ ಆಟ 11 ರನ್ನಿಗೆ ಮುಗಿಯಿತು. 5 ಓವರ್‌ ಆಗುವಷ್ಟರಲ್ಲಿ 27 ರನ್ನಿಗೆ 3 ವಿಕೆಟ್‌ ಉರುಳಿತು. ಪವರ್‌ ಪ್ಲೇಯಲ್ಲಿ ಲಕ್ನೋ ಕೇವಲ 32 ರನ್‌ ಮಾಡಿತ್ತು.

 ರಾಹುಲ್‌-ಹೂಡಾ ಆಸರೆ: 4ನೇ ವಿಕೆಟಿಗೆ ಜತೆಗೂಡಿದ ನಾಯಕ ಕೆ.ಎಲ್‌.ರಾಹುಲ್‌ ಮತ್ತು ದೀಪಕ್‌ ಹೂಡಾ ತಂಡದ ಕುಸಿತಕ್ಕೆ ದೊಡ್ಡ ತಡೆಯಾಗಿ ನಿಂತರು. ಹೈದರಾಬಾದ್‌ ಬೌಲಿಂಗ್‌ ಆಕ್ರಮಣವನ್ನು ಯಶಸ್ವಿಯಾಗಿ ನಿಭಾಯಿಸಿ ರನ್‌ ಪೇರಿಸುತ್ತ ಹೋದರು. ಬೌಂಡರಿ, ಸಿಕ್ಸರ್‌ ಹರಿದುಬರತೊಡಗಿತು. ಈ ನಡುವೆ ಶರವೇಗದ ಎಸೆತಗಾರ ಉಮ್ರಾನ್‌ ಮಲಿಕ್‌ ಮೊದಲ ಓವರ್‌ನಲ್ಲಿ ಇವರಿಬ್ಬರಿಗೂ ಅಗ್ನಿಪರೀಕ್ಷೆಯೊಡ್ಡಿದರು. ಆದರೆ ಇವರ ದ್ವಿತೀಯ ಓವರ್‌ನಲ್ಲಿ 20 ರನ್‌ ಸೋರಿಹೋಯಿತು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 68ಕ್ಕೆ ಏರಿತು.

ಮುಂದಿನ 5 ಓವರ್‌ಗಳನ್ನು ರಾಹುಲ್‌-ಹೂಡಾ ಯಶಸ್ವಿಯಾಗಿ ನಿಭಾಯಿಸಿದರು. ಇಬ್ಬರಿಂದಲೂ ಅರ್ಧಶತಕ ದಾಖಲಾಯಿತು. ಆಗ ಶೆಫ‌ರ್ಡ್‌ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 33 ಎಸೆತಗಳಿಂದ 51 ರನ್‌ ಮಾಡಿದ ಹೂಡಾ ಔಟಾದರು. ಸಿಡಿಸಿದ್ದು 3 ಸಿಕ್ಸರ್‌, 3 ಬೌಂಡರಿ.

ಮೊತ್ತ 144ಕ್ಕೆ ತಲುಪಿದಾಗ ಟಿ.ನಟರಾಜನ್‌ ದೊಡ್ಡ ಬೇಟೆಯಾಡಿದರು. ರಾಹುಲ್‌ ಎಲ್‌ಬಿಡಬ್ಲೂé ಆಗಿ ನಿರ್ಗಮಿಸಿದರು. ಭರ್ತಿ 50 ಎಸೆತ ನಿಭಾಯಿಸಿದ ಕಪ್ತಾನನ ಆಟದಲ್ಲಿ 6 ಫೋರ್‌ ಹಾಗೂ 1 ಸಿಕ್ಸರ್‌ ಸೇರಿತ್ತು. ಬಳಿಕ ಕೃಣಾಲ್‌ ಪಾಂಡ್ಯ ಅವರಿಗೂ ನಟರಾಜನ್‌ ಪೆವಿಲಿಯನ್‌ ಹಾದಿ ತೋರಿಸಿದರು. ಆಯುಷ್‌ ಬದೋನಿ 19 ರನ್‌ (12 ಎಸೆತ, 3 ಬೌಂಡರಿ) ಮಾಡಿ ಅಂತಿಮ ಎಸೆತದಲ್ಲಿ ರನೌಟಾದರು.

ಜೇಸನ್‌ ಹೋಲ್ಡರ್‌ ಆಗಮನ: ಲಕ್ನೋ ತಂಡದ ಕೆರಿಬಿಯನ್‌ ಆಲ್‌ರೌಂಡರ್‌ ಈ ಪಂದ್ಯದ ಮೂಲಕ 2022ನೇ ಐಪಿಎಲ್‌ ಅಖಾಡಕ್ಕೆ ಇಳಿದರು. ಇವರಿಗಾಗಿ ದುಷ್ಮಂತ ಚಮೀರ ಸ್ಥಾನ ಕಳೆದುಕೊಂಡರು. ಹೋಲ್ಡರ್‌ ಕೆಲವು ಋತುಗಳಿಂದ ಹೈದರಾಬಾದ್‌ ಪರ ಆಡುತ್ತಿದ್ದರು. ಹೈದರಾಬಾದ್‌ ತಂಡದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಲಕ್ನೋ 20 ಓವರ್‌, 169/7 (ರಾಹುಲ್‌ 68, ದೀಪಕ್‌ ಹೂಡಾ 51, ವಾಷಿಂಗ್ಟನ್‌ ಸುಂದರ್‌ 28ಕ್ಕೆ 2, ಟಿ.ನಟರಾಜನ್‌ 26ಕ್ಕೆ 2). ಹೈದರಾಬಾದ್‌ 20 ಓವರ್‌, 157/9 (ರಾಹುಲ್‌ ತ್ರಿಪಾಠಿ 44, ಆವೇಶ್‌ ಖಾನ್‌ 24ಕ್ಕೆ 4, ಜೇಸನ್‌ ಹೋಲ್ಡರ್‌ 34ಕ್ಕೆ 3).

ಟಾಪ್ ನ್ಯೂಸ್

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.