ಹಲವರ Twitter ಖಾತೆಗೆ ಸದ್ದಿಲ್ಲದೆ ಮರಳಿದ ಬ್ಲೂಟಿಕ್!
ಎರಡೇ ದಿನಗಳಲ್ಲಿ ಎಲಾನ್ ಮಸ್ಕ್ ಯೂಟರ್ನ್; ಅಲಿಯಾ, ಶಾರುಖ್, ಟ್ರಂಪ್ ಟ್ವಿಟರ್ ಖಾತೆಗಳ ಬ್ಲೂಟಿಕ್ ವಾಪಸ್
Team Udayavani, Apr 24, 2023, 7:44 AM IST
ನವದೆಹಲಿ: ಚಂದಾದಾರಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಭಾರತವೂ ಸೇರಿದಂತೆ ಜಗತ್ತಿನ ಹಲವು ಖ್ಯಾತನಾಮರ ಟ್ವಿಟರ್ ಖಾತೆಯಲ್ಲಿದ್ದ ಬ್ಲೂಟಿಕ್ ತೆಗೆದುಹಾಕಿದ ಎರಡೇ ದಿನಗಳಲ್ಲಿ ಎಲಾನ್ ಮಸ್ಕ್ ಯೂಟರ್ನ್ ಹೊಡೆದಿದ್ದಾರೆ. ಭಾನುವಾರ ಸದ್ದಿಲ್ಲದೇ ಹಲವು ಪ್ರಮುಖರ ಖಾತೆಯ ದೃಢೀಕೃತ ಬ್ಲೂಟಿಕ್ ವ್ಯವಸ್ಥೆಯನ್ನು ಪುನರ್ಸ್ಥಾಪಿಸಿದ್ದಾರೆ.
10 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಖಾತೆಗಳ ಬ್ಲೂಟಿಕ್ ಅನ್ನು ಟ್ವಿಟರ್ ಪುನಸ್ಥಾಪಿಸಿದೆ. ಇದರಿಂದಾಗಿ ಯಾವುದೇ ಹಣ ಪಾವತಿಸದೇ ಬಾಲಿವುಡ್ ತಾರೆಯರಾದ ಅಲಿಯಾ ಭಟ್, ಶಾರುಖ್ ಖಾನ್, ಕ್ರಿಕೆಟಿಗ ವಿರಾಟ್ ಕೋಹ್ಲಿ, ಎಂ.ಎಸ್.ಧೋನಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ಗೇಟ್ಸ್ ಸೇರಿದಂತೆ ಪ್ರಮುಖರಿಗೆ ಬ್ಲೂಟಿಕ್ ವ್ಯವಸ್ಥೆ ಮತ್ತೆ ಸಿಕ್ಕಿದೆ.
ಇನ್ನು, ಭಾನುವಾರ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ “ಟ್ವಿಟರ್ನ ಪಾವತಿ ವ್ಯವಸ್ಥೆಗೆ ಚಂದಾದಾರನಾಗಿದ್ದೇನೆ. ಜತೆಗೆ ಫೋನ್ ನಂಬರ್ ಕೂಡ ನೀಡಿದ್ದೇನೆ. ಆದರೂ, ನನಗೆ ಬ್ಲೂಟಿಕ್ ವ್ಯವಸ್ಥೆ ಇಲ್ಲ” ಎಂದು ಬರೆದುಕೊಂಡಿದ್ದಾರೆ.
ತಮಾಷೆಯ ಸಂಗತಿಯೆಂದರೆ, ಹಲವು ಮಂದಿ ಕೊನೆಯುಸಿರೆಳೆದ ಪ್ರಮುಖರ ಟ್ವಿಟರ್ ಖಾತೆಗಳಿಗೆ ಕೂಡ ಬ್ಲೂಟಿಕ್ ವ್ಯವಸ್ಥೆ ಪುನಸ್ಥಾಪಿಸಲಾಗಿದೆ. ಟ್ವಿಟರ್ನ ಸಹ ಸಂಸ್ಥಾಪಕ ಜ್ಯಾಕ್ ಡೋರ್ಸೆ ಅವರಿಗೆ ಇನ್ನೂ ಬ್ಲೂಟಿಕ್ ವ್ಯವಸ್ಥೆಯನ್ನು ನೀಡಿಲ್ಲ.
ತೂ ಚೀಸ್ ಬಡೀ ಹೆ ಮಸ್ಕ್ ಮಸ್ಕ್…
ಬ್ಲೂಟಿಕ್ ಕಳೆದುಕೊಂಡ ಕೂಡಲೇ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು, ದೃಢೀಕೃತ ಖಾತೆಗೆ ಚಂದಾದಾರಿಕೆ ಪಡೆದುಕೊಂಡಿದ್ದರು. ಆದರೆ, ಅವರಿಗೆ ಬ್ಲೂಟಿಕ್ ಸಿಕ್ಕಿರಲಿಲ್ಲ. ಹೀಗಾಗಿ, “ಟ್ವಿಟರ್ ಭಯ್ನಾ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಖಾತೆಗೆ ಬ್ಲೂಟಿಕ್ ನೀಡಿ” ಎಂದು ಕೋರಿದ್ದರು. ನಂತರ ಅವರ ಬ್ಲೂಟಿಕ್ ಅನ್ನೂ ಮರಳಿಸಲಾಯಿತು. ಇದಕ್ಕೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ ಬಿಗ್ಬಿ, ಬಾಲಿವುಡ್ನ ಎವರ್ಗ್ರೀನ್ ಹಾಡು “ತೂ ಚೀಸ್ ಬಡೀ ಹೆ ಮಸ್ತ್ ಮಸ್ತ್…” ಅನ್ನು ಸ್ವಲ್ಪ ಬದಲಾಯಿಸಿ, “ತೂ ಚೀಸ್ ಬಡೀ ಹೆ ಮಸ್ಕ್ ಮಸ್ಕ್…” ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.